Friday, April 19, 2024
Google search engine
Homeತುಮಕೂರು ಲೈವ್ನಾಡಿಗ್ ಗೆ ಸಾಹಿತ್ಯ ದತ್ತಿ ಪ್ರಶಸ್ತಿ

ನಾಡಿಗ್ ಗೆ ಸಾಹಿತ್ಯ ದತ್ತಿ ಪ್ರಶಸ್ತಿ

Tumukuru: ಬರಹಗಾರರು ಮತ್ತು ಲೇಖಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ. ಹಲವು ಮಂದಿ ತಮ್ಮ ತಂದೆ-ತಾಯಿ, ಅತ್ತೆ ಮೊದಲಾದವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಇಟ್ಟಿದ್ದು ಸಾಹಿತ್ಯ ಲೋಕಕ್ಕೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಹೇಳಿದರು.

ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದೇವಪ್ರಕಾಶ್-ಶಾಲಿನಿ ದಂಪತಿ ಭಗೀರಥಮ್ಮ ಅವರ ಹೆಸರಿನಲ್ಲಿಟ್ಟಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಜಿಲ್ಲೆಯ ಬರಹಗಾರರನ್ನು ಗುರುತಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅದರ ಭಾಗವಾಗಿಯೇ ಈ ದತ್ತಿ ಪ್ರಶಸ್ತಿಯನ್ನು ನೀಡುತ್ತಿರುವುದು. ಕನ್ನಡ ಸಾಹಿತ್ಯದ ಬೆಳವಣಿಗೆ, ನೆಲ, ಜಲ ಸಂರಕ್ಷಣೆಯಂತಹ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಯಪ್ರಕಾಶ್ ತಮ್ಮ ಮಾತೃಶ್ರೀ ಭಾಗೀರಥಮ್ಮನವರ ಸ್ಮರಣಾರ್ಥ ಪ್ರವಾಸ ಸಾಹಿತ್ಯ ಕೃತಿಗೆ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಶಾಲಿನಿ ದೇವಪ್ರಕಾಶ್ ತಮ್ಮ ಅತ್ತೆ ಭಾಗೀರಥಮ್ಮ ಸ್ಮರಣಾರ್ಥ ಮಕ್ಕಳ ಸಾಹಿತ್ಯಕ್ಕಾಗಿ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಜಯಪ್ರಕಾಶ್ ಮತ್ತು ಶಾಲಿನಿಯವರು ಸಾಹಿತ್ಯ ಪರಿಷತ್ತಿನಲ್ಲಿಟ್ಟಿರುವ ನಿಧಿಯಿಂದ ಪ್ರತಿ ವರ್ಷ ಇಬ್ಬರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ ಎಂದರು.

ಪ್ರವಾಸ ಸಾಹಿತ್ಯಕ್ಕೆ ಪ್ರಕಾಶ್ ನಾಡಿಗ್ ಅವರ ‘ನಾ ಕಂಡ ಯೂರೋಪ್ ಖಂಡ’ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಲೇಖಕಿ ಸುಮಾ ಬೆಳಗೆರೆ ಬರೆದÀ ’30 ದಿನಕ್ಕೆ 30 ಕಥೆಗಳು’ ಕೃತಿ ಪ್ರಶಸ್ತಿ ಭಾಜನವಾಗಿದೆ. ಪ್ರಶಸ್ತಿ ಪಡೆಯುತ್ತಿರುವ ಇಬ್ಬರೂ ಲೇಖPರಿಗೆ ಅಭಿನಂದನೆಗಳು ಸಲ್ಲಬೇಕು ಎಂದು ತಿಳಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇವುಗಳಿಂದ ಲೇಖಕರನ್ನು ಉತ್ತೇಜಿಸಿದಂತಾಗುತ್ತದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಹಾಯ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಬಂಡವಾಳಶಾಹಿಯು ಮನುಷ್ಯನ ಶತ್ರು. ಅದನ್ನು ಬೆಂಬಲಿಸುವ ಪ್ರಭುತ್ವಕ್ಕೆ ನೈತಿಕತೆ ಇಲ್ಲ ಎಂದು ತಿಳಿಸಿದರು.

ನಾ ಕಂಡ ಯೂರೋಪ್ ಖಂಡ ಕೃತಿಯ ಪ್ರಕಾಶ್ ಕೆ. ನಾಡಿಗ್, 30 ದಿನಕ್ಕೆ 30 ಕಥೆಗಳು ಕೃತಿಯ ಸುಮಾ ಬೆಳಗೆರೆ ಅವರಿಗೆ ಭಗೀರಥಮ್ಮ ದತ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಶಾಲಿನಿ ದೇವಪ್ರಕಾಶ್ ಮಾತನಾಡಿದರು.

ಮೂಕಜ್ಜಿ ಕನಸುಗಳು ಚಲನಚಿತ್ರ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೊದಲ ಬಹುಮಾನ ಎಲ್.ಉಷಾ ಮತ್ತು ದ್ವಿತೀಯ ಬಹುಮಾನ ಜಿ.ಎಸ್.ನಾಗೇಶ್ ಗುಬ್ಬಿ, ತೃತೀಯ ಬಹುಮಾನ ಸಂತೋಷ್ ನೀಡಲಾಯಿತು. ಕುಸುಮಾ ಜೈನ್ ಮತ್ತು ತಂಡ ಪ್ರಾರ್ಥಿಸಿದರು. ಲೇಖಕಿ ಶೈಲಾ ನಾಗರಾಜ್ ಸ್ವಾಗತಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?