ಜಸ್ಟ್ ನ್ಯೂಸ್

ಬೆಳಂಬೆಳಗೆ ಯಮನ ಅಟ್ಟಹಾಸ ಇಬ್ಬರ ದುರ್ಮರಣ….


ತುಮಕೂರು


ಜಿಲ್ಲೆಯ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ 48 ರ ಉಜ್ಜನಕುಂಟೆ ಸಮೀಪ ಭಾನುವಾರ ಮುಂಜಾನೆ ಯಮ ಅಟ್ಟಹಾಸ ಮೆರೆದಿದ್ದಾನೆ.

ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದಾರೆ.

ಹೆದ್ದಾರಿಯಲ್ಲಿ ಹೋಗುತ್ತಿದ್ದ ಸುಗುಣ ಟ್ರಾವೆಲ್ಸ್ ಎಂಬ ಬಸ್ಸಿಗೆ ಹಿಂದಿನಿಂದ ಬಂದ ವಿ.ಆರ್.ಎಲ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇವರು ಮೃತ ಪಟ್ಟಿದ್ದಾರೆ. ಗಾಯಗೊಂಡಿದ್ದ ಆರು ಜನರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಹಾಗೂ ಗಾಯಗೊಂಡವರ ಮಾಹಿತಿ‌ ಇನ್ನೂ ತಿಳಿಯಬೇಕಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comment here