ಜಸ್ಟ್ ನ್ಯೂಸ್

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು – ಸುಪ್ರೀಂಕೋರ್ಟ್ ಕಾಯ್ದಿರಿಸಿದ ಆದೇಶದಲ್ಲಿ ಏನಿರಬಹುದು?

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ಎನ್.ಸಿ.ಪಿ. ಶಿವಸೇನೆ ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿಯ ಪರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮಂಗಳವಾರ ಬೆಳಗ್ಗೆ 10.30ಕ್ಕ ಆದೇಶ ಪ್ರಕಟಿಸಲಿದೆ.

ಬಿಜೆಪಿ ಮತ್ತು ಎನ್.ಸಿ.ಪಿ ಶಾಸಕರ ಬೆಂಬಲ ಪತ್ರವನ್ನು ಮಂಗಳವಾರ ಹಾಜರುಪಡಿಸುವುದಾಗಿ ಹೇಳಿದ್ದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಹಾಜರಾಗಲಿದ್ದಾರೆ.

ಇದೇ ವೇಳೆ ಅಜಿತ್ ಪವಾರ್ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮೆಹ್ತಾ, ಎನ.ಸಿ.ಪಿ ನಾಯಕ ಅಜಿತ್ ಪವಾರ್ 54 ಮಂದಿ ಎನ್.ಸಿ.ಪಿ ಶಾಸಕರು ಮತ್ತು ರಾಜ್ಯಪಾಲರ ಸಹಿಯುಳ್ಳ ಪತ್ರವನ್ನು ನ್ಯಾಯಾಲಯಕ್ಕೆ ತೋರಿಸಿದರು.

ಆ ಪತ್ರದ ಪ್ರಕಾರ ನವೆಂಬರ್ 22ರಂದು ಅಜಿತ್ ಪವಾರ್ ತನ್ನ ಶಾಸಕರ ಬೆಂಬಲ ಪತ್ರವನ್ನು ನೀಡಿ ದೇವೇಂದ್ರ ಫಡ್ನಾವೀಸ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ ಎಂದಿದೆ.

ಮಹಾರಾಷ್ಟ್ರದ ವಿಧಾನಸಭೆಯ 288 ಶಾಸಕರ ಪೈಕಿ ಬಿಜೆಪಿ 105, ಎನ್.ಸಿ.ಪಿ. 54, ಪಕ್ಷೇತರ ಶಾಸಕರು 11 ಮಂದಿ ಸೇರಿ ಒಟ್ಟು 170 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಈ ಪತ್ರವನ್ನು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸುವುದನ್ನು ಮೆಹ್ತಾ ಪ್ರಶ್ನಿಸಿದರು.

Comment here