Wednesday, April 24, 2024
Google search engine
Homeಪೊಲಿಟಿಕಲ್ಭಾರತದ‌ ಗಡಿಯುದ್ದಕ್ಕೂ‌ ಸೇನೆ ಜಮಾವಣೆ ತೀವ್ರಗೊಳಿಸಿದ ಚೀನಾ

ಭಾರತದ‌ ಗಡಿಯುದ್ದಕ್ಕೂ‌ ಸೇನೆ ಜಮಾವಣೆ ತೀವ್ರಗೊಳಿಸಿದ ಚೀನಾ

ಚೀನಾ ಸೈನಿಕರನ್ನು ಜಮೆ ಮಾಡಿರುವ ಚೀನಾ-ಭಾರತ ಗಡಿ.

ವಿನಯ್ ಹೆಬ್ಬೂರು


ನವದೆಹಲಿ: ಲಡಾಖ್‌ನ ವಾಸ್ತವಿಕ ನಿಯಂತ್ರಣ(LAC) ರೇಖೆಯ ಉದ್ದಕ್ಕೂ ಪಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾದ ಮಿಲಿಟರಿ ತನ್ನ ಸೈನ್ಯದ ಸಂಖ್ಯೆಯನ್ನು ವೇಗವಾಗಿ ಹೆಚ್ಚಿಸುತ್ತಿದೆ,

ಭಾರತೀಯ ಸೇನೆಯೊಂದಿಗಿನ ಮುಖಾಮುಖಿಯನ್ನು ಕೊನೆಗೊಳಿಸಲು ಸಿದ್ಧವಾಗಿಲ್ಲ ಎಂಬ ಸಂಕೇತವನ್ನು ಕಳುಹಿಸುತ್ತದೆ ಎಂದು ವೈರ್ ಅಂತರ್ಜಾಲ ತಾಣ ವರದಿ ಮಾಡಿದೆ.

ಗಡಿಯಲ್ಲಿ 80 ಡೇರೆಗಳನ್ನು ನಿರ್ಮಾಣ ಮಾಡಿದೆ.

ಚೀನಾ ಗಾಲ್ವಾನ್ ಕಣಿವೆಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ ಸುಮಾರು 100 ಡೇರೆಗಳನ್ನು ನಿರ್ಮಿಸಿದೆ ಎಂದು ಚೀನಾ ಮೂಲದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇದರ ನಡುವೆ ಈ ವಿವಾದಿತ ಪ್ರದೇಶದಲ್ಲಿ ಭಾರತೀಯ ಸೈನ್ಯವೂ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು ಭಾರತವೂ ರಸ್ತೆ, ಬಂಕರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.

ಕಳೆದ ಒಂದು ವಾರದಲ್ಲಿ ಪೂರ್ವ ಲಡಾಖ್‌ನ ಹಲವಾರು ಪ್ರದೇಶಗಳಲ್ಲಿ ಚೀನಾದ ಪೀಪಲ್‌ ಲಿಬರಲ್ ಆರ್ಮಿ ಅನೇಕ ಪ್ರದೇಶಗಳಲ್ಲಿ ಅತಿಕ್ರಮಣ ನಡೆಸಿದ್ದು , ಎರಡು ಕಡೆಯ ಸೈನಿಕರು ಕನಿಷ್ಠ ಎರಡು ಸಂದರ್ಭಗಳಲ್ಲಿ ನೇರ ಮುಖಾಮುಖಿಯಾಗಿವೆ.

ಪಾಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಚೀನಾ ಸೇನೆ ಅದೇ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೈನ್ಯದ ಸೈನಿಕರನ್ನು ಬಲವಂತವಾಗಿ ನಿಲ್ಲಿಸಿತು ಎಂದು ಹಲವಾರು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣಿ ಅವರು ಶುಕ್ರವಾರ ಲೇಹ್‌ನ 14 ಕಾರ್ಪ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು, ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿಯ ವಿವಾದಿತ ಪ್ರದೇಶಗಳ ಭದ್ರತಾ ಸನ್ನಿವೇಶವನ್ನು ಉನ್ನತ ಕಮಾಂಡರ್‌ಗಳೊಂದಿಗೆ ಪರಿಶೀಲಿಸಿದರು.

ಪಾಂಗೊಂಗ್ ತ್ಸೊ ಸರೋವರ ಮತ್ತು ಗಾಲ್ವಾನ್ ಕಣಿವೆ ಎರಡೂ ಭಾರತ ಹಾಗೂ ಚೀನಾದ ನಡುವೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಈ ಪ್ರದೇಶಗಳು ಇತರ ಕೆಲವು ಸೂಕ್ಷ್ಮ ಪ್ರದೇಶಗಳಳಿಗೆ ಹೆಚ್ಚು ಅನುಕೂಲಕರ ಸ್ಥಾನದಲ್ಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವೈರ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಮೇ 5 ರ ಸಂಜೆ ಸುಮಾರು 250 ಚೀನೀ ಮತ್ತು ಭಾರತೀಯ ಸೈನಿಕರು ಈ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋದ ನಂತರ ಎರಡೂ ಕಡೆಯ ಕಮಾಂಡರ್‌ಗಳು ಚರ್ಚಿಸಿ ಪರಿಸ್ಥಿತಿತಿಳಿಗೊಳಿದ್ದರು.ಇದರ ನಡುವೆಯೂ ಪೂರ್ವ ಲಡಾಕ್‌ನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಮೇ 9 ರಂದು ಉತ್ತರ ಸಿಕ್ಕಿಂನಲ್ಲಿ ಇದೇ ರೀತಿಯ ಘಟನೆಯ ನಂತರ ಪಾಂಗೊಂಗ್ ತ್ಸೋದಲ್ಲಿ ನಡೆದ ಘಟನೆಯಲ್ಲಿ 100ಕ್ಕೂ ಹೆಚ್ಚು ಸೈನಿಕರು ಮುಖಾಮುಖಿಯಾಗಿದ್ದರು.

ಕಳೆದ ಒಂದು ವಾರದಲ್ಲಿ, ಎರಡೂ ಕಡೆಯ ಸ್ಥಳೀಯ ಕಮಾಂಡರ್‌ಗಳು ಕನಿಷ್ಠ ಐದು ಸಭೆಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಗಾಲ್ವಾನ್ ಕಣಿವೆಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಡೇರೆಗಳನ್ನು ನಿರ್ಮಿಸುವ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ನಡೆಯನ್ನು ಭಾರತ ವಿರೋಧಿಸಿದೆ.

ಚೀನಾ ಮಿಲಿಟರಿಯ ನಡೆಯಿಂದ ತನ್ನ ಸೈನಿಕರ ಸಾಮಾನ್ಯ ಗಸ್ತು ತಿರುಗಲು ಅಡ್ಡಿಯಾಗುತ್ತಿದೆ ಎಂದು ಭಾರತ ಗುರುವಾರ ಹೇಳಿಕೆ ನೀಡಿದ್ದು , ಗಡಿ ನಿರ್ವಹಣೆಯ ಬಗ್ಗೆ ಭಾರತ ಯಾವಾಗಲೂ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಭಾರತ ಮತ್ತು ಚೀನಾದ ಪಡೆಗಳು 2017 ರಲ್ಲಿ ಡೋಕ್ಲಾಮ್ ತ್ರಿ-ಜಂಕ್ಷನ್‌ನಲ್ಲಿ 73 ದಿನಗಳು ಪರಸ್ಪರ ಮುಖಾಮುಖಾಯಾಗಿದ್ದು ಯುದ್ದ ಭೀತಿ ಮೂಡಿಸಿತ್ತು.

ಭಾರತ-ಚೀನಾ 3,488 ಕಿ.ಮೀ ಉದ್ದದ ಗಡಿ ವಿವಾದ ಹೊಂದಿದ್ದು. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳುತ್ತದೆ.

ಜಮ್ಮು ಮತ್ತು ಕಾಶ್ಮೀರದ ಭಾರತದ ಮರುಸಂಘಟನೆ ವಿಧೇಯಕವನ್ನು ಚೀನಾ ಟೀಕಿಸುತ್ತಿದ್ದು, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಕ್ಕಾಗಿ ಭಾರತದ ವಿರುದ್ಧ ಅಸಹನೆ ಹೊರಹಾಕುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.


ಈ ವರದಿಯು thewire ಅಂತರ್ಜಾಲ ತಾಣ ಹಾಗೂ ವಿವಿಧ ಸುದ್ದಿ ತಾಣಗಳನ್ನು ಅವಲಂಬಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?