Tuesday, April 16, 2024
Google search engine
Homeಜಸ್ಟ್ ನ್ಯೂಸ್ಮಹಿಳಾ ಬರಹಗಳಿಗೆ ವಿಮರ್ಶೆಯ ನ್ಯಾಯ ಸಿಕ್ಕಿಲ್ಲ

ಮಹಿಳಾ ಬರಹಗಳಿಗೆ ವಿಮರ್ಶೆಯ ನ್ಯಾಯ ಸಿಕ್ಕಿಲ್ಲ

‘ಬಹುರೂಪಿ’ ಕೃತಿ ಬಿಡುಗಡೆಯಲ್ಲಿ ಜೋಗಿ ಅಭಿಪ್ರಾಯ

ಬೆಂಗಳೂರು, ಜುಲೈ 17- ಮಹಿಳಾ ಬರಹಗಾರರನ್ನು ಸಮಕಾಲೀನ ವಿಮರ್ಶೆ ಕಡೆಗಣಿಸಿದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಮಧುರಾಣಿ ಎಚ್ ಎಸ್ ಅವರ ಕವನ ಸಂಕಲನ ‘ನೀಲಿ ಚುಕ್ಕಿಯ ನೆರಳು’ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಅವರು ಮಧುರಾಣಿ ಎಚ್ ಎಸ್ ಅವರ ‘ನೀಲಿ ಚುಕ್ಕಿಯ ನೆರಳು’ ಕೃತಿ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಬಹುರೂಪಿಯ ಜಿ ಎನ್ ಮೋಹನ್, ವಿಮರ್ಶಕಿ ಹೇಮಾ ಎಸ್ ಇದ್ದಾರೆ

ನಾವೆಲ್ಲರೂ ಓದುವ ಕಾಲಕ್ಕೆ ಮಹಿಳಾ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಬರೆಯುತ್ತಿದ್ದರು. ಆದರೆ ಕನ್ನಡ ವಿಮರ್ಶೆ ಅವರನ್ನು ಚರ್ಚಿಸುತ್ತಲೇ ಇರಲಿಲ್ಲ. ಈಗಲೂ ಸಹಾ ಮಹಿಳಾ ಬರಹಗಾರರ ಸಂಖ್ಯೆ ವಿಫುಲವಾಗಿದೆ. ಆದರೂ ವಿಮರ್ಶೆ ಅವರ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ ಎಂದರು. ಮಧುರಾಣಿ ಅವರ ಕವಿತೆಗಳಲ್ಲಿನ ಶಕ್ತಿ ಅಗಾಧವಾದದ್ದು ಎಂದರು.

ಕವಯತ್ರಿ, ಅನುವಾದಕಿ ಹೇಮಾ ಎಸ್ ಅವರು ಮಾತನಾಡಿ ಮಧುರಾಣಿ ಅವರ ಕವಿತೆಗಳ ಆತ್ಮವಿಶ್ವಾಸ ಬೆರಗು ಹುಟ್ಟಿಸುತ್ತದೆ. ಅವರ ಕವಿತೆಗಳುದ್ದಕ್ಕೂ ಅದು ಹರಡಿಕೊಂಡಿದೆ. ಅವರ ಕವಿತೆಗಳ ದನಿಯ ಪ್ರಭಾವ ಸಾಕಷ್ಟು ಕಾಲ ಕನ್ನಡ ಕವಿತೆಗಳ ಮೇಲಿರುತ್ತದೆ ಎಂದರು..

ಬರಹಗಾರ ಜಿ ಎನ್ ಮೋಹನ್ ಮಾತನಾಡಿ ಮಧುರಾಣಿ ಅವರ ಕವಿತೆಗಳು ದಿಟ್ಟ ದನಿಯನ್ನು ಹೊಂದಿವೆ. ಅವರ ಕವಿತೆಗಳಲ್ಲಿನ ಹೊಸತನ, ನುಡಿಗಟ್ಟುಗಳು ಬೆರಗು ಹುಟ್ಟಿಸುತ್ತವೆ. ಮಹಿಳಾ ಕಾವ್ಯ ಸಾಗುತ್ತಿರುವ ದಾರಿಗೆ ಈ ಕವನ ಸಂಕಲನ ಕನ್ನಡಿ ಹಿಡಿಯುತ್ತದೆ ಎಂದರು.

ಕೃತಿ: ನೀಲಿ ಚುಕ್ಕಿಯ ನೆರಳು
ಕವಿ: ಮಧುರಾಣಿ ಎಚ್ ಎಸ್
ಪ್ರಕಾಶನ: ಬಹುರೂಪಿ
ಬೆಲೆ: ರೂ 120

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?