Thursday, March 28, 2024
Google search engine
Homeಜಸ್ಟ್ ನ್ಯೂಸ್BJP ರಾಜಕೀಯ: CPM ಕೆಂಡಾಮಂಡಲ

BJP ರಾಜಕೀಯ: CPM ಕೆಂಡಾಮಂಡಲ

ತುಮಕೂರು: ಕಾಮಿ೯ಕರ ಕಲ್ಯಾಣ ಮಂಡಳಿ ಹಣ ಬಳಸಿಕೊಂಡು ಮಾಡುತ್ತಿರುವ
ಆಹಾರ ವಿತರಣೆಯಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಿಪಿಐ(ಎಂ) ಕೆಂಡ ಕಾರಿದೆ.

ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ಕಟ್ಟಡ ಹಾಗು ವಲಸೆ ಕಾಮಿ೯ಕರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ದ ಆಹಾರವನ್ನು ವಿತರಿಸಲಾಗುತ್ತಿರುವುದು ಸ್ವಾಗತಾಹ೯ವಾಗಿದೆ.

ಆದರೆ ಆಹಾರ ವಿತರಣೆ ಮಾಡುವಾಗ ಇಂದಿನಿಂದ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ನಿದೇ೯ಶನಾಲಯದ ವತಿಯಿಂದ ನರೇಂದ್ರ ಮೋದಿ ಹಾಗು ಯಡಿಯೂರಪ್ಪ ರವರ ಫೋಟೋ ಇರುವ ಕರಪತ್ರ ವಿತರಿಸುವಂತೆ, ಅದನ್ನು ತೆಗೆದುಕೊಂಡು ಫೋಟೋ ತೆಗೆಸುಕೊಳ್ಳುವವರಿಗೆ ಊಟ ವಿತರಿಸುವ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕರಪತ್ರದಲ್ಲಿ ಸಿದ್ದ ಆಹಾರವನ್ನು ಕನಾ೯ಟಕ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ನೀಡಲಾಗುತ್ತಿದೆ ಎಂಬ ಒಂದೇ ಒಂದು ವಾಕ್ಯವನ್ನು ಸಹಾ ಸೇರ್ಪಡೆ ಮಾಡದೆ, ಇಡಿ ಆಹಾರವನ್ನು ರಾಜ್ಯ ಸಕಾ೯ರವೆ ನೀಡುತ್ತಿದೆ ಎಂಬಂತೆ ಬಿಂಬಿಸಲು ಮುಂದಾಗಿದೆ ಎಂದು ತಿಳಿಸಿದೆ.

ಇದುವರೆಗೆ ಕೇವಲ 1.5 ಯಿಂದ 2 ಲಕ್ಷ ಕಟ್ಟಡ ಕಾಮಿ೯ಕರ ಖಾತೆಗೆ 2000 ರೂಪಾಯಿ ಮಂಡಳಿಯ ಹಣ ಜಮಾ ಮಾಡಿ 16 ಲಕ್ಷ ಕಾಮಿ೯ಕರಿಗೆ ಜಮಾ ಮಾಡಿರುವುದಾಗಿ ಕರಪತ್ರದಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ವಾಸ್ತವವಾಗಿ ಇದುವರೆಗೆ ಒಂದು ರೂಪಾಯನ್ನು ಸಹಾ ರಾಜ್ಯ ಸಕಾ೯ರವಾಗಲಿ ಅಥವಾ ಕೇಂದ್ರ ಸಕಾ೯ರವಾಗಲಿ ನೀಡದಿರುವಾಗ
ಇಂತಹ ಕರಪತ್ರವು ಬಿಜೆಪಿಯ ಬಂಡ ರಾಜಕೀಯದ ಪ್ರತೀಕವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಇಂತಹದೇ ರಾಜಕೀಯದ ಭಾಗವಾಗಿ ಮಂಡಳಿಯ ಹಣದಲ್ಲಿ ಖರೀದಿಸಿರುವ 60 ಸಾವಿರ ಒಣ ಅಹಾರ ಪೊಟ್ಟಣಗಳನ್ನು ಮುಖ್ಯ ಮಂತ್ರಿಯವರ ಆದೇಶದ ಮೇರೆಗೆ ಬಿಬಿಎಂಪಿ ಮೂಲಕವೇ ವಿತರಿಸಲು ನೀಡಿದ ಕಾರಣ ಬಿಜೆಪಿಯ ಶಾಸಕರು ಮತ್ತು ಕಾಪೋ೯ರೇಟರ್ಗಳು ತಮ್ಮ ಫೋಟೊ ಇರುವ ಸ್ಟಿಕ್ಕರ್ ಅಂಟಿಸಿ ಕಟ್ಟಡ ಕಾಮಿ೯ಕರಲ್ಲದವರಿಗೆ ಬಹುತೇಕ ವಿತರಿಸಿದ್ದಾರೆ.

ಇದುವರೆಗೆ 60 ಸಾವಿರ ಒಣ ಆಹಾರ ಪೊಟ್ಟಣಗಳನ್ನು ಯಾರಿಗೆ ವಿತರಿಸಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿ ಹಣವನ್ನು ಬಿಜೆಪಿಯು ಮುಂಬರುವ ಬಿಬಿಎಂಪಿ ಚುನಾವಣೆಗಾಗಿ ದುಬ೯ಳಕೆ ಮಾಡಿಕೊಳ್ಳುತ್ತಿದೆ. ತನಗೆ ಮತ ನೀಡಿದವರಿಗೆ ವಿತರಿಸುವ ರಾಜಕೀಯದಲ್ಲಿ ನಿರತವಾಗಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾಮಿ೯ಕರಿಗೆ ಆಹಾರ ವಿತರಿಸುವಲ್ಲಿಯು ರಾಜಕೀಯ ಮಾಡುವ ಬಿಜೆಪಿಯ ಕ್ರಮವು ಅತ್ಯಂತ ನೀಚ ಕ್ರಮವಾಗಿದೆ ಎಂದಿದೆ ಸಿಪಿಐ (ಎಂ) ಖಂಡಿಸಿದೆ. ಕೂಡಲೇ ಇಂತಹ ರಾಜಕೀಯವನ್ನು ನಿಲ್ಲಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ. ಎನ್. ಉಮೇಶ್ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?