Friday, March 29, 2024
Google search engine
Homeಜಸ್ಟ್ ನ್ಯೂಸ್MSME ಕೇಂದ್ರಕ್ಕೆ ತುಮಕೂರಿನಲ್ಲಿ 15 ಎಕರೆ‌‌ ಭೂಮಿ

MSME ಕೇಂದ್ರಕ್ಕೆ ತುಮಕೂರಿನಲ್ಲಿ 15 ಎಕರೆ‌‌ ಭೂಮಿ

ತುಮಕೂರು: ತುಮಕೂರಿಗೆ ಸುಮಾರು 100 ಕೋಟಿ ವೆಚ್ಚದ ಎಂಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆಗೆ ಜಿಲ್ಲಾಧಿಕಾರಿಗಳು 15 ಎಕರೆ ಜಮೀನನ್ನು ಇಲಾಖೆಗೆ ಹಸ್ತಾಂತರಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಶೀಘ್ರವೇ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಲಾಗುವುದು. ನಂತರ ವಸ್ತುಸ್ಥಿತಿ ಹೇಳಿದ್ದೇನೆ.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿಕೆ ನೀಡಿದ್ದಾರೆಂಬ ಸುದ್ದಿ ನೋಡಿದೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ನಾನು ಮತ್ತು ತುಮಕೂರು ನಗರದ ಶಾಸಕರು ಹಿಂದಿನ ದಿಶಾ ಸಮಿತಿಯ ಸಭೆಯಲ್ಲಿ ಸ್ಕಿಲ್ ಸಿಟಿ ನಿರ್ಮಾಣ ಮಾಡಲು ಸೂಚಿಸಿದ್ದೆವು ಎಂದರು.

ಪಿಪಿಟಿ ಪ್ರದರ್ಶನ ಮಾಡಿದ ಅಂಶಗಳನ್ನು ಶಾಲಿನಿ ರಜನೀಶ್ ಹೇಳಿಕೆ ತರಹ ಬಿಬಬಿಸಲಾಗಿದೆ. ಅದು ಸಹ ತಪ್ಪಾಗಿ ಎಂಬುದು ನನಗೆ ತಿಳಿಯಿತು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ವಿವರವಾದ ಪರಿಕಲ್ಪನಾ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಅಧ್ವಾನಗಳಾಗಿವೆ. ಇದಕ್ಕೆ ತೆರೆ ಎಳೆದು ಜನರಿಗ ಪೂರಕ ಯೋಜನೆಗಳನ್ನು ಕೈಗೊಳ್ಳಲು ದಿಶಾ ಸಮಿತಿ ಸಭೆಯಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವವರಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳಿಗೆ ಶಿಪಾರಸು ಮಾಡಲಾಗುವುದು ಎಂದರು.

ನನಗೆ ಓಬೇರಾಯನ ಕಾಲದ ಲೆಕ್ಕವೂ ಗೊತ್ತು, ಡಿಜಿಟಲ್ ಇಂಡಿಯಾವೂ ಗೊತ್ತು, ಜಿಐಎಸ್ ಅಗತ್ಯವೂ ಗೊತ್ತು. ನನಗೆ ಯಾಮಾರಿಸಲು ಯಾರಿಂದಲೂ ಸಾಧ್ಯವಿಲ್ಲ. ೀ ಸಂಬಂಧ ಡಿಸೆಂಬರ್ 16ರಂದು ಸಭೆ ಕರೆದಿದ್ದೇನೆ. ಕಂಪನಿಯ ಚೇರ್ಮನ್ ಸಹ ಸಭೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಯೋಜನೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ತುಮಕೂರು ನಗರದ ೆಲ್ಲಾ ಬಡಾವಣೆಗಳ ನಾಗರಿಕ ಸಮಿತಿಗಳ ಮುಂದೆ ಪ್ರತಿಯೊಂದು ಯೋಜನೆಯ ಮಾಹಿತಿ ಪ್ರಕಟಿಸಿ ಒಂದೊಂದು ಯೋಜನೆಯನ್ನು ಪರಾಮರ್ಶೆಗೆ ಒಳಪಡಿಸಲಾಗುವುದು ಎಂದು ವಿವರಿಸಿದರು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆ ಯಾವ ಯಾವ ವ್ಯವಸ್ಥಾಪಕ ನಿರ್ದೇಶಕರ ಅವಧಿಯಲ್ಲಿ ಎಷ್ಟೆಷ್ಟು ನಡೆದಿವೆ. ಯಾವ ಸಭೆಯಲ್ಲಿ ಯಾವ ಯೋಜನೆಯ ಬಗ್ಗೆ ವಿವರವಾದ ಚರ್ಚೆ ನಡೆಯಲಾಗಿದೆ ಎಂಬ ಬಗ್ಗೆ ಯೋಜನೆವಾರು ಮಾಹಿತಿಯನ್ನು ಒಂದೇ ಕಡೆ ತರಲು ಸೂಸಿಸಲಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?