ಪೊಲಿಟಿಕಲ್

ಗೃಹ ಸಚಿವರ ಕಾಟಾಚಾರದ ಭೇಟಿ; ಪರಿಹಾರ ನಿರೀಕ್ಷೆಯಲ್ಲಿದ್ದ ಕುಟುಂಬಗಳಿಗೆ ನಿರಾಸೆ

ಝೀರೋ ಟ್ರಾಫಿಕ್;  ಜನರಿಗೆ ಕಿರಿಕಿರಿ

ತುಮಕೂರು: ನಗರದಲ್ಲಿ ಸತತವಾಗಿ ಸುರಿದು ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಲು   ಗೃಹ ಸಚಿವ ಅರಗ ಜ್ಞಾನೇಂದ್ರ ತೆರಳುತ್ತದ್ದ ವೇಳೆ, ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.  ಇದ್ದರಿಂದ ಟೌನ್ ಹಾಲ್,  ಚರ್ಚ್ ಸರ್ಕಲ್, ಕೋಟೆ ಆಂಜನೇಯ ದೇವಲಯ ಮುಂಬಾದಲ್ಲಿ ಟ್ರಾಫಿಜಾಮ್.  ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಎಸ್ ಮಾಲ್, ಅಮಾನಿಕೆರೆ ಹಾಗೂ ಕೋತಿತೋಪು ಬಳಿಯಿರುವ ಮನೆಗಳಿಗೆ ಭೇಟಿ ನೀಡಿದರು. ಕುಟುಂಬಗಳ ಸಮಸ್ಯೆ ಆಲಿಸದೆ ಆತುರದಲ್ಲೇ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರಿಂದ ಪರಿಹಾರದ ನಿರೀಕ್ಷೆಯಲ್ಲಿದ್ದ ಕುಟುಂಬಗಳಿಗೆ ನಿರಾಸೆ ಉಂಟಾಯಿತು. ಕೇವಲ 20 ನಿಮಿಷದಲ್ಲಿ‌ ಕಾಟಾಚಾರಕ್ಕೆ ವೀಕ್ಷಣೆ ಮಾಡಿ ತೆರಳಿದರು‌.

ಗೃಹ ಸಚಿವರ ಜೊತೆ ಜಿಲ್ಲಾಧಿಕಾರಿ ವೈಸ್ ಪಾಟೀಲ್, ಶಾಸಕ ಜ್ಯೋತಿ ಗಣೇಶ್ ಹಾಗೂ ಇತರ ಅಧಿಕಾರಿಗಳು ಇದ್ದರು.

Comment here