Wednesday, April 17, 2024
Google search engine
Homeಪೊಲಿಟಿಕಲ್ಎಸ್.ಆರ್.ಶ್ರೀನಿವಾಸ್ ಮತ್ತೇ ಜೆಡಿಎಸ್ ಗೆ ?

ಎಸ್.ಆರ್.ಶ್ರೀನಿವಾಸ್ ಮತ್ತೇ ಜೆಡಿಎಸ್ ಗೆ ?

ತುಮಕೂರು : ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ದಿಢೀರ್ ಭೇಟಿ ನೀಡಿರುವುದು ಜೆ.ಡಿ.ಎಸ್. ಪಕ್ಷಕ್ಕೆ ಎಸ್.ಆರ್.ಶ್ರೀನಿವಾಸ್ ಅವರನ್ನು ವಾಪಸ್ಸು ಕರೆ ತರುವ ಪ್ರಯತ್ನ ನಡೆಯುತ್ತಾ ಇದೆ ಎನ್ನಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಬುಕ್ಕಪಟ್ಟಣ ಹೋಬಳಿಯ ಜಾನಕಲ್‍ನಲ್ಲಿ ದೇವಸ್ಥಾನ ಒಂದರ ಉದ್ಘಾಟನೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಜಿಲ್ಲೆಯ ಕೆಲ ನಾಯಕರ ಜೊತೆ ಸಭೆ ನಡೆಸಿದ್ದಾಗ ಎಸ್.ಆರ್.ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಗುಬ್ಬಿ, ತುರುವೇಕೆರೆ, ಕುಣಿಗಲ್ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಹಿನ್ನಡೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಎಸ್.ಆರ್. ಶ್ರೀನಿವಾಸ್ ಅವರನ್ನು ವಾಪಸ್ಸು ಜೆಡಿಎಸ್‍ಗೆ ಕರೆ ತರುವ ಹಿನ್ನಲೆಯಲ್ಲಿ ಸಾ.ರಾ.ಮಹೇಶ್ ಅವರು ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾತು ಕತೆ ನಡೆಸಿದರನ್ನಲಾಗುತ್ತಿದೆ ಎಂದು ಮೈತ್ರಿ ನ್ಯೂಸ್ ವರದಿ ಮಾಡಿದೆ.

ಈಗಾಗಲೇ ಎಸ್.ಆರ್.ಶ್ರೀನಿವಾಸ್ ಅವರು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಗೊಂಡಿದ್ದು, ಒಂದು ಕಾಲನ್ನು ಜೆಡಿಎಸ್ ಪಕ್ಷದಿಂದ ಹೊರಗಿಟ್ಟಿದ್ದು, ರಾಹುಲ್ ಗಾಂಧಿಯವರ ಜೋಡೋ ಯಾತ್ರೆಯಲ್ಲಿಯೂ ಸಹ ಎಸ್.ಆರ್.ಶ್ರೀನಿವಾಸ್ ಹೆಜ್ಜೆ ಹಾಕಿರುದ್ದರು.

ಡಿಸೆಂಬರ್‍ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ಎಸ್.ಆರ್. ಶ್ರೀನಿವಾಸ್ ಈಗಾಗಲೇ ಘೋಷಣೆ ಮಾಡಿದ್ದಾರೆ, ದಿಢೀರ್ ಸಾ.ರಾ.ಮಹೇಶ್ ಭೇಟಿ ನೀಡಿರುವುದರ ಮರ್ಮವೇನು ಎಂಬುದು ಒಂದೆರಡು ದಿನಗಳಲ್ಲಿ ತಿಳಿಯಲಿದೆ.

ಸಾ.ರಾ.ಮಹೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಎಸ್.ಆರ್. ಶ್ರೀನಿವಾಸ್ ಅವರು ಪಕ್ಷ ಬಿಟ್ಟರೆ ಜೆಡಿಎಸ್‍ಗೂ ನಷ್ಟವಾಗಲಿದೆ, ರಾಷ್ಟ್ರೀಯ ನಾಯಕರಾದ ದೇವೇಗೌಡರು ಮತ್ತು ಕಾರ್ಯ ಕರ್ತರು ತೀರ್ಮಾನ ಮಾಡಿದರೆ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.

ನಾನು ವಾಸು ಮೊದಲಿನಿಂದಲೂ ಚೆನ್ನಾಗಿದ್ದೇವೆ ಆಗಾಗ ಮಾತನಾಡುತ್ತಲೇ ಇರುತ್ತೇವೆ, ರಾಜಕೀಯಕ್ಕಾಗಿ ಮಾತನಾಡಲಿಕ್ಕೆ ಬಂದಿಲ್ಲ, ಸೌಹಾರ್ಧ ಭೇಟಿಯಷ್ಟೇ, ಮಗ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?