Friday, March 29, 2024
Google search engine
Homeಜಸ್ಟ್ ನ್ಯೂಸ್ತುಮಕೂರಿಗೆ ಹೆಮ್ಮೆ ತಂದ ಸುಫಿಯಾ ಕಾನೂನು ಕಾಲೇಜು: RANK ಗಳ ಸುರಿಮಳೆ

ತುಮಕೂರಿಗೆ ಹೆಮ್ಮೆ ತಂದ ಸುಫಿಯಾ ಕಾನೂನು ಕಾಲೇಜು: RANK ಗಳ ಸುರಿಮಳೆ

ವಿದ್ಯಾರ್ಥಿಗಳ ಸಾಧನೆಗೆ ತಲೆದೂಗಿದ ತುಮಕೂರು ಜಿಲ್ಲೆಯ ಜನರು, ವಕೀಲರ ಸಮೂಹ

Publicstory


ಧಾರವಾಡ/ತುಮಕೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕಾನೂನು ಪದವಿ (ಎಲ್ ಎಲ್ ಬಿ) ಯಲ್ಲಿ ತುಮಕೂರಿನ ಸುಫಿಯ ಕಾನೂನು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು rank ಪಡೆಯುವ ಮೂಲಕ ತುಮಕೂರಿಗೆ ಹೆಮ್ಮೆ ತಂದಿದ್ದಾರೆ.

ಧಾರವಾಡದಲ್ಲಿ ನಡೆದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಂಕ್ (Rank) ನೀಡಲಾಯಿತು.

ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಕುಲಪತಿ ಡಾ. ಈಶ್ವರ್ ಭಟ್ ಸೇರಿದಂತೆ ಸಿಂಡಿಕೇಟ್,ಅಕೌಡಮಿಕ್ ಕೌನ್ಸಿಲ್ ಸದಸ್ಯರು ವಿದ್ಯಾರ್ಥಿಗಳ ಸಾಧನೆಗೆ ಸಾಕ್ಷಿಯಾದರು.

ಇಷ್ಟೊಂದು ರಾಂಕ್ ಇದೇ ಮೊದಲು: ತುಮಕೂರಿನ ಇತಿಹಾಸದಲ್ಲಿ ಇದೇ ಮೊದಲ ಸಲ ಕಾಲೇಜೊಂದು ಒಮ್ಮೆಗೆ ನಾಲ್ಕು rank ಗಳಿಸಿರುವುದು ಜಿಲ್ಲೆಗೆ ಗರಿಮೂಡಿದಂತಾಗಿದೆ.


ಎಲ್ಲಿದೆ ಕಾಲೇಜು ?
ತುಮಕೂರಿನ ಜಯನಗರ- ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಕಾಲೇಜಿನ ಕ್ಯಾಂಪಸ್ ಇದೆ. ಮೂರು ಹಾಗೂ ಐದು ವರ್ಷಗಳ ಕಾನೂನು ಪದವಿಯನ್ನು ನೀಡಲಾಗುತ್ತದೆ. ಪಿಯುಸಿ ಪಾಸಾದವರು ಐದು ವರ್ಷದ ಕಾನೂನು ಪದವಿ. ಯಾವುದೇ ಪದವಿ ಪಡೆದವರು ಮೂರು ವರ್ಷದ ಕಾನೂನು ಪದವಿಗೆ ಸೇರಿಕೊಳ್ಳಲು ಅವಕಾಶವಿದೆ.

ರೂಪಾ, ಶೋಭಾ, ಲೋಕೇಶ್ ಆರ್ ಹಾಗೂ ಪುಷ್ಪಾ ಅವರು rank ವಿಜೇತರು.
ತುಮಕೂರಿನಲ್ಲಿ ವಿದ್ಯೋದಯ, ಕೃಷ್ಣ ಹಾಗೂ ಸುಫಿಯಾ ಕಾಲೇಜು ಸೇರಿದಂತೆ ಮೂರು ಕಾನೂನು ಕಾಲೇಜುಗಳಿವೆ.

ಗುಣಮಟ್ಟದ ಶಿಕ್ಷಣವೇ ಕಾರಣ

“ ಗುಣಮಟ್ಟದ ಶಿಕ್ಷಣವೇ ಈ ಸಾಧನೆಗೆ ಕಾರಣ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ಪ್ರತಿ ವಿದ್ಯಾರ್ಥಿಯ ಸರ್ವೋತ್ತೋಮ ಬೆಳವಣಿಗೆಗೆ ಬಗ್ಗೆ ಕಾಲೇಜಿನಲ್ಲಿ ಗಮನ ಹರಿಸಲಾಗುತ್ತದೆಪ್ರಾಂಶುಪಾಲರಾದ ಡಾ. ಎಸ್.ರಮೇಶ್ ಹೇಳಿದರು.

ಉತ್ತಮ ಗ್ರಂಥಾಲಯ ವ್ಯವಸ್ಥೆ, ನುರಿತ ಪ್ರಾಧ್ಯಾಪಕರ ತಂಡ, ಬೋಧನೆಯಲ್ಲಿ ಹೊಸ ಹೊಸ ವಿಧಾನಗಳ ಅನುಸರಣೆಯೂ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?