Sunday, July 21, 2024
Google search engine
Homeಜನಮನಅಬ್ಬಾ, ಆಂಜನೇಯ!

ಅಬ್ಬಾ, ಆಂಜನೇಯ!

ತುಮಕೂರು: ಕೃಷ್ಟ ಜಯಂತಿಯಲ್ಲಿ ತಮ್ಮ ಮುದ್ದಾದ ಮಕ್ಕಳಿಗೆ ಕೃಷ್ಣನ ವೇಷ ಹಾಕುವುದು ಹಿಂದಿನಿಂದಲೂ ಬೆಳೆದುಬಂದಿರುವುದು ರೂಢಿಯಲ್ಲಿದೆ.

ಹೆಣ್ಣಿರಲಿ ಗಂಡಿರಲಿ ಮಕ್ಕಳು ಅಂದ ಮೇಲೆ ಕೃಷ್ಣನ ವೇಷದಲ್ಲಿ ಮುದ್ದಾಗಿ ಕಾಣುತ್ತಾರೆ. ಅದು ಒಂದು ಟ್ರೆಂಡಾಗಿ ಬೆಳೆದಿದ್ದರೆ, ಇದೀಗ ಹನುಮ ವೇಷವೂ ಚಾಲ್ತಿಗೆ ಬರುತ್ತಿದೆ. ಮುದ್ದು ಮಕ್ಕಳಿಗೆ ಹನುಮನ ವೇಷ ತೊಡಿಸಿ ಖುಷಿಪಡುವ ಅಪ್ಪಅಮ್ಮಂದಿರೂ ಇದ್ದಾರೆ. ಹನುಮನ ವೇಷವೂ ಮುಂದೆ ಕೃಷ್ಣನ ವೇಷ ಸ್ಪರ್ಧೆಯಂತೆ ಟ್ರೆಂಡ್ ಆಗುವ ಸಾಧ್ಯೆಗಳು ಹೆಚ್ಚಾಗಿವೆ.

ಇಂದು ಹನುಮ ಜಯಂತಿ. ಇದರ ಪ್ರಯುಕ್ತ ದೇಶದೆಲ್ಲೆಡೆ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ವಿಧಿವಿಧಾನಗಳು ನಡೆದವು. ಹನುಮ ಜಯಂತಿ ಪ್ರಯುಕ್ತ ತುಮಕೂರಿನಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಹನುಮ ವೇಷ ತೊಡಿಸಿ ಆನಂದಪಟ್ಟರು.

ವಕೀಲರಾದ ಹಿಮಾನಂದ ಮತ್ತು ರೇಖಾ ಹಿಮಾನಂದ ದಂಪತಿ ತಮ್ಮ ಮುದ್ದಾದ ಮಗಳಿಗೆ ಹನುಮನ ವೇಷ ತೊಡಿಸಿ ಕೈಯಲ್ಲಿ ಗಧೆಯನ್ನು ಹಿಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇರುವ ಹನುಮನ ಬೃಹತ್ ಪ್ರತಿಮೆಯ ಮುಂದೆ ಮಾಡಿಸಿದ್ದ ಫೋಟೊ ಸೆಷನ್ಸ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದವು.

ನಾಲ್ಕ ವರ್ಷದ ಬಾಲಕಿ ತನ್ವಿಯ ಕೊರಳ ತುಂಬ ಮುತ್ತಿನಂಥ ಹಾರಗಳನ್ನು ಹಾಕಿ ಸಿಂಗರಿಸಿದ್ದರು. ಹನುಮಂತ ಪ್ರತಿಮೆಯ ಮುಂದಿನ ರಸ್ತೆಯಲ್ಲಿ ತನ್ವಿಯನ್ನು ನಿಲ್ಲಿಸಿ ಪೋಟೋ ಕ್ಲಿಕ್ಕಿಸುತ್ತಿದ್ದರೆ ಜನ ನಿಂತು ತನ್ವಿಯ ಸಿಂಗಾರವನ್ನು ನೋಡಿ ಸಂತೋಷಪಟ್ಟರು. ಎಡಗೈಯಲ್ಲಿದ್ದ ಗಧೆಯನ್ನು ನೆಲಕ್ಕೆ ಒತ್ತಿ ಹಿಡಿದು ಪೋಟೋಕ್ಕೆ ಪೋಸ್ ಕೊಟ್ಟಾಗ ತಂದೆ ತಾಯಿಯರಲ್ಲಿ ಎಲ್ಲಿಲ್ಲದ ಆನಂದ ತುಳುಕುತ್ತಿತ್ತು.

ಹನುಮನಂತ ಬಾಯಿ ತೆತೆದು ಗಧೆಯನ್ನು ಮೇಲೆಕ್ಕೆ ಎತ್ತಿ ನಿಂತ ದೃಶ್ಯ ನಿಜವಾಗಿಯೂ ಆಂಜನೇಯ ಮೈದುಂಬಿದ್ದಾನೆಯೋ ಎಂಬಂತೆ ಆ ಪುಟಾಣಿ ಕಂಡು ಬಂದಳು. ಅಲ್ಲಿಂದ ಅಮಾನಿಕೆರೆಯ ಉದ್ಯಾನಕ್ಕೂ ಕರೆದುಕೊಂಡು ಹೋದರು.

ಕೆರೆ ಅಡ್ಡವಾಗಿ ಅಳವಡಿಸಲಾಗಿದ್ದ ತಂತಿ ಬೇಲಿಯ ಮೇಲೆ ನಿಲ್ಲಿಸಿ ಪೋಟೋ ಕ್ಲಿಕ್ಕಿಸಿದರು. ವಕೀಲ ಹಿಮಾನಂದ ಮತ್ತು ರೇಖಾ ಅವರಿಗೆ ಮಗಳನ್ನು ಹನುಮಂತನ ವೇಷದಲ್ಲಿ ನೋಡಲು ಮತ್ತಷ್ಟು ಕುತೂಹಲ ಹೆಚ್ಚುತ್ತಲೇ ಇತ್ತು. ಏನೇ ಆಗಲಿ ಹೆಣ್ಣು ಮಗುವಲ್ಲವೇ? ಯಾವ ಕೃತ್ರಿಮವೂ ಇಲ್ಲದ ಲೋಕಜ್ಞಾನ ತಿಳಿಯದ ಆ ಮುಗ್ದ ಬಾಲಕಿ ಹನುಮಂತನ ವೇಷದಲ್ಲಿ ಸುಂದರವಾಗಿ ಕಂಡುಬಂದಿದ್ದಂತೂ ಸೋಜಿಗದ ದೃಶ್ಯ ಕಾವ್ಯದಂತಿದ್ದಳು.

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?