Saturday, July 20, 2024
Google search engine
Homeಜಸ್ಟ್ ನ್ಯೂಸ್ಆರೋಗ್ಯ ಸಹಾಯಕಿಯರ ಮೇಲೆ ಹೂ ಮಳೆ

ಆರೋಗ್ಯ ಸಹಾಯಕಿಯರ ಮೇಲೆ ಹೂ ಮಳೆ

ಪಾವಗಡದಲ್ಲಿ ಮಂಗಳವಾರ ಸ್ಕೌಟ್ಸ್ ಅಂಡ್ ಗೈಡ್ಸ್  ಪದಾಧಿಕಾರಿಗಳು ಆರೋಗ್ಯ ಸಹಾಯಕಿಯರ ಮೇಲೆ ಹೂ ಚೆಲ್ಲಿ ಸನ್ಮಾನಿಸಿದರು.

ಇಷ್ಟು ವರ್ಷಕ್ಕೆ ಇದೀಗ ಸಂಸ್ಥೆಯೊಂದು ಶುಶ್ರೂಶಕಿಯರ ಶ್ರಮ ಗುರುತಿಸಿ ಗೌರವ ಸಲ್ಲಿಸುತ್ತಿರುವುದು ಖುಷಿ ತಂದಿದೆ. ಇನ್ನು ಹೆಚ್ಚಿನ ಕೆಲಸ ಮಾಡಲು ಉತ್ಸಾಹ ಮೂಡಿಸಿದೆ ಎಂದು ಶುಶ್ರೂಶಕಿಯರ ಸಂಘದ ಅಧ್ಯಕ್ಷೆ ಸರಸ್ವತಮ್ಮ  ಸಂತಸ ಹಂಚಿಕೊಂಡರು.

ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಕಮಲ್ ಬಾಬು ಮಾತನಾಡಿ, ಕೊರೊನಾ ನಿಯಂತ್ರಿಸಲು ಪ್ರಪಂಚದೆಲ್ಲೆಡೆ  ಶುಶ್ರೂಶಕಿಯರು ಜೀವದ ಹಂಗು ತೊರೆದು ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ.  ಸಮಾಜಕ್ಕಾಗಿ  ಶ್ರಮಿಸುತ್ತಿರುವ ಅವರ ಸೇವೆ ಅತ್ಯುತ್ತಮವಾದುದು ಎಂದರು.

ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ, ಶುಶ್ರೂಶಕಿಯರನ್ನು ಗೌರವಿಸುವುದರಿಂದ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಉತ್ಸಾಹ ಸಿಗುತ್ತದೆ. ಆಸ್ಪತ್ರೆ ಸಿಬ್ಬಂದಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ  ಗಮನಹರಿಸಬೇಕು ಎಂದರು.

ವೈದ್ಯಾಧಿಕಾರಿ ಕಿರಣ್ ಕುಮಾರ್, ಸ್ಕೌಟ್ಸ್ ಅಂಡ್ ಗೈಡ್ಸ್ ಉಪಾಧ್ಯಕ್ಷ ಮಾನಂ ಶಶಿಕಿರಣ್,  ನಾಗೇಂದ್ರ ಬಾಬು, ಕಾರ್ಯದರ್ಶಿ ಕರಿಯಣ್ಣ, ಕವಿತಾ, ಸಂದ್ಯ, ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?