ಗುಬ್ಬಿ : ನಿಟ್ಟೂರು ಹೋಬಳಿಯ ಮಾರ ಶೆಟ್ಟಿ ಹಳ್ಳಿ ಅರಣ್ಯ ವಲಯದಲ್ಲಿ ಗಂಧದ ಮರ ಕಡಿದು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುಬ್ಬಿ ಅರಣ್ಯ ಇಲಾಖೆ ಸಿಬ್ಬಂದಿ ಬಂದಿಸಿದ್ದಾರೆ.
ಬಂಧಿತರಿಂದ ಸುಮಾರು 35 ಕೆ.ಜಿ ತೂಕದ ಗಂಧದ ತುಂಡುಗಳನ್ನು ವಶ ಮಾಡಿಕೊಂಡಿದ್ದು ಅಂದಾಜು 20 ಸಾವಿರ ಮೌಲ್ಯ ಎನ್ನಲಾಗಿದೆ.
ಆರೋಪಿಗಳು ಗುಬ್ಬಿ ತಾಲೂಕಿನ ಎಲ್ಲಾಪುರ ಗ್ರಾಮದ ಕರಯ್ಯಪ್ಪ ಹಾಗೂ ಭೋಜಣ್ಣ ಕುರುಬರಹಳ್ಳಿ. ತುರುವೇಕೆರೆ ತಾಲ್ಲೂಕಿನ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ ಎಂದು
ಅರಣ್ಯ ಇಲಾಖೆಯ ವಲಯ ಅರಣ್ಯಧಿಕಾರಿ ಸಿ. ರವಿ ತಿಳಿಸಿದರು.
Comment here