Friday, March 29, 2024
Google search engine
Homeಜಸ್ಟ್ ನ್ಯೂಸ್ಇಲ್ಲಿವೆ ಈ ದಿನದ ನೀವು ಓದಲೇಬೇಕಾದ ಸುದ್ದಿಗಳು...

ಇಲ್ಲಿವೆ ಈ ದಿನದ ನೀವು ಓದಲೇಬೇಕಾದ ಸುದ್ದಿಗಳು…

ವ್ಯಂಗ್ಯ ಚಿತ್ರಕತೆ: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ

ದೇಶಾದ್ಯಂತ ಕೊರೊನಾ ಮೃತರ ಸಂಖ್ಯೆ 101ಕ್ಕೆ ಏರಿಕೆ…

ದೇಶದಲ್ಲಿ ಒಂದೇ ದಿನ ಕೊರೊನಾಗೆ 5 ಬಲಿ.
ದೇಶದಲ್ಲಿ 3, 721ಕ್ಕೆ ಏರಿದ ಸೋಂಕಿತರ ಸಂಖ್ಯೆ.
ಉತ್ತರ ಪ್ರದೇಶ-235, ರಾಜಸ್ತಾನ- 201
ಆಂಧ್ರಪ್ರದೇಶದಲ್ಲಿ -226, ಕರ್ನಾಟಕ-144
ದೆಹಲಿ-445, ಕೇರಳ-306, ತೆಲಂಗಾಣ-272
ಮಹಾರಾಷ್ಟ್ರ -635, ತಮಿಳುನಾಡು-485.
ಇಂದು ಒಂದೇ ದಿನ 55 ಕೊರೊನಾ ಕೇಸ್.
ದೇಶದಲ್ಲಿ ಈವರೆಗೆ 290 ಮಂದಿ ಗುಣಮುಖ.


ರಾಜ್ಯದಲ್ಲಿ ಮತ್ತೆ 2 ಕೊರೊನಾ ಪಾಸಿಟಿವ್

ಇಂದು ಇಬ್ಬರಿಗೆ ಕೊರೊನಾ ಸೋಂಕು ದೃಢ.
ಬೆಂಗಳೂರಿನ ವೃದ್ಧ ದಂಪತಿಗೆ ಸೋಂಕು ಪತ್ತೆ
ಆಸ್ಪತ್ರೆಯಲ್ಲಿ ದಂಪತಿಗೆ ಕ್ವಾರಂಟೈನ್.
ಬೆಂಗಳೂರಲ್ಲಿ 57ಕ್ಕೇರಿದ ಸೋಂಕಿತರ ಸಂಖ್ಯೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆ.
ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್


ನಿಮ್ಮಂಥ ಪಾಪದವರಿಗೆ ಕೊರೊನಾ

ಬರುವುದಿಲ್ಲ: ಮಾಜಿ ಸಚಿವ ಖಾದರ್

ಶ್ರೀಮಂತರಿಗೇ ಈವರೆಗೆ ಕೊರೊನಾ ಬಂದಿರೋದು.
ವಿಮಾನ, ಹವಾನಿಯಂತ್ರಿತ ಕೊಠಡಿಗಳಲ್ಲಿ
ಇರುವವರಿಗೆ ಮಾತ್ರ ಕೊರೊನಾ ಸೋಂಕು ಬಂದಿದೆ.
ಹೆದರದಿರಿ, ಧೈರ್ಯದಿಂದ ಶುಚಿತ್ವ ಕೆಲಸದಲ್ಲಿ ಪಾಲ್ಗೊಳ್ಳಿ.
ಜಾಗೃತಿ ವಹಿಸಿಕೊಂಡು, ಮಾಸ್ಕ್ ಧರಿಸಿ ಕೆಲಸಕಾರ್ಯಗಳಲ್ಲಿ ಭಾಗಿಯಾಗಿ.
ಉಳ್ಳಾಲ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಧೈರ್ಯ ತುಂಬಿದ ಮಾಜಿ ಸಚಿವ ಯು.ಟಿ ಖಾದರ್


ಕ್ರೈಸ್ತರಿಗೆ ಮನೆಯಲ್ಲೇ ಪಾಮ್ ಸಂಡೆ ಸಂಭ್ರಮ

ಜಿಲ್ಲೆಯಾದ್ಯಂತ ಲಾಕ್ ಡೌನ್ ಹಿನ್ನೆಲೆ.
ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು.
ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ
ಚರ್ಚ್‍ಗಳ ಧರ್ಮಗುರುಗಳಿಂದ ಏಕಾಂಗಿಯಾಗಿ ಬಲಿಪೂಜೆ.
ಧರ್ಮಾಧ್ಯಕ್ಷರಿಂದ ತಮ್ಮ ನಿವಾಸದಲ್ಲೆ ಪಾಮ್ ಸಂಡೆ ಪ್ರಾರ್ಥನೆ.
ಪ್ರಥಮ ಬಾರಿಗೆ ಮೆರವಣಿಗೆ ಇಲ್ಲದೆ ನಡೆದ ಪಾಮ್ ಸಂಡೆ.
ಪಾಮ್ ಸಂಡೆಯಿಂದ ಬರುವ
ಈಸ್ಟರ್ ಸಂಡೆಯ ತನಕ ಕ್ರೈಸ್ತರಿಗೆ ಪವಿತ್ರ ವಾರ.
ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ.
ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಸೂಚನೆ
ಇಂದು 3 ಗಂಟೆಗೆ ತಮ್ಮ ಮನೆಗಳಲ್ಲಿ ಜಪಸರ ಪ್ರಾರ್ಥನೆ ನೆರವೇರಿಸಿ
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಸೂಚನೆ.
ಕೊರೊನಾ ವೈರಸ್ ಮಾರಿಯಿಂದ ಹೊರಬರಲು ಈ ಪ್ರಾರ್ಥನೆ.
ರಾತ್ರಿ 9 ಗಂಟೆಗೆ ಮೊಂಬತ್ತಿ ಹಚ್ಚಿ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿ.
ಮೊಂಬತ್ತಿ ಹಿಡಿದು ಗುಂಪುಗಳಲ್ಲಿ ಸೇರದಂತೆ ಸೂಚನೆ.
ವೀಡಿಯೋ ಸಂದೇಶದ ಮೂಲಕ ಬಿಷಪ್ ಜೆರಾಲ್ಡ್ ಸೂಚನೆ.


ದೀಪ ಹಚ್ಚಿ ಕೊರೋನಾ ಹೋರಾಟ ಅರ್ಥಪೂರ್ಣವಾಗಿಸಿ

ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಮನವಿ.
ದೀಪವೆಂಬುದು ರೋಗ ಪರಿಹಾರಕ ದಿವ್ಯ ವಸ್ತು
ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬ ತತ್ವ ದೀಪದಲ್ಲಿದೆ.
ಜಗತ್ತಿನಲ್ಲಿ ಕೊರೊನಾ ಕಾಯಿಲೆಯಿಂದ ಕತ್ತಲು ಆವರಿಸಿದೆ.
ಕತ್ತಲು ಓಡಿಸಲು ಇದು ಸಾಂಕೇತಿಕ ಆಚರಣೆ
ಅಗ್ನಿಯಿಂದ ಬೆಳಗುವ ಬೆಳಕು ದೇವತೆಗಳಿಗೆ ಪ್ರಿಯ. ಒಂಬತ್ತು ಕುಜನ ಸಂಖ್ಯೆ, ಕುಜ ಅಗ್ನಿತತ್ವದ ಅಧಿದೇವತೆ.
ಕುಜನ ಪ್ರತಿನಿಧಿ ಅಗ್ನಿಯ ಮೂಲಕ ಕೊರೋನಾವನ್ನು ಓಡಿಸಬೇಕು.
ಭಕ್ತರಲ್ಲಿ ದೀಪ ಹೊತ್ತಿಸಲು ಮನವಿ ಮಾಡಿದ ಸ್ವಾಮೀಜಿ.


ಸರ್ವರೂ ಜಾತಿ-ಧರ್ಮ ಮರೆತು ದೀಪ ಬೆಳಗಲು ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿಕೆ.
ಕೊರೋನಾ ವಿರುದ್ದ ಹೋರಾಟದಲ್ಲಿ ನಮ್ಮ ಪ್ರಜ್ಞೆ,
ಏಕತೆ ಮತ್ತು ಸಂಘಟನೆಯನ್ನ ತೋರಿದ್ದೇವೆ
ಪ್ರಧಾನಿಯವರ ಹೊಸ ಕರೆಯಂತೆ ಮನೆಯಲ್ಲಿ ನಾಳೆ ದೀಪ ಹಚ್ಚಬೇಕಿದೆ.
ಮನೆಯ ದೀಪ ಆರಿಸಿ ದೀಪ ಬೆಳಗಿ ಆ ದೀಪದ ಜೊತೆ ಐಕ್ಯವಾಗಬೇಕು ಅಂದಿದ್ದಾರೆ.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಅನ್ನೋ ಮಾತಿದೆ.
ಯಾವ ಜಾತಿ, ಮತ, ಸಂಪ್ರದಾಯವಿದ್ದರೂ ಅವನ ಮನೆಯ ಜ್ಯೋತಿ ಒಂದೇ ಆಗಿರುತ್ತದೆ.
ಹೀಗಾಗಿ ನಮ್ಮ ಅಂತಸ್ತು, ಪ್ರಾದೇಶಿಕ ವಿಚಾರಗಳನ್ನ ಮರೆತು.
ನಮ್ಮ ಮನೆಯಲ್ಲಿ ಜ್ಯೋತಿ ಹಚ್ಚಬೇಕು
ಪ್ರಧಾನಿಯವರ ಮಾತಿನಂತೆ ನಾವೆಲ್ಲರೂ ರಾತ್ರಿ ಸಣ್ಣ ಜ್ಯೋತಿ ಹಚ್ಚಬೇಕಿದೆ.
ಆ ಜ್ಯೋತಿ ನಮ್ಮ ಮನೆ, ಮನೆಯ ಸದಸ್ಯರ ಮನಸ್ಸಿಗೆ ಬೆಳಕನ್ನ ಕೊಡುತ್ತೆ.
ಎಲ್ಲರೂ ದಯವಿಟ್ಟು ಇದನ್ನ ಪ್ರೀತಿಯಿಂದ ಆಸ್ವಾದಿಸಿ, ಆನಂದಿಸಿ.
ನಾಳೆ ದೀಪ ಹಚ್ಚಿ ಮನಸ್ಸಿನ ಕತ್ತಲೆ ಓಡಿಸಿ, ರಾಕ್ಷಸ ಕೊರೋನಾ ಕೂಡ ಓಡಿಸಿ.
ನಾವು ಕೂಡ ಧರ್ಮಸ್ಥಳ ಕ್ಷೇತ್ರದಲ್ಲಿ ನಾಳೆ ಜ್ಯೋತಿ ಬೆಳಗುತ್ತೇವೆ.
ಇದರಿಂದ ಈ ನಾಡಿಗೆ ಶುಭವಾಗಲಿ ಅಂತ ಹಾರೈಸ್ತೇವೆ.


ಏ.14ರ ಬಳಿಕ ಎಸ್‍ಎಸ್‍ಎಲ್‍ಸಿ

ಪರೀಕ್ಷೆ ಹೊಸ ವೇಳಾಪಟ್ಟಿ

ವಿದ್ಯಾರ್ಥಿಗಳಿಗೆ ಮತ್ತೆ ಚೈತನ್ಯ ತುಂಬಬೇಕು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ.
ಪರೀಕ್ಷೆ ಎದುರಿಸಲು ಉತ್ಸಾಹ ಮೂಡಿಸಬೇಕು.
ಪರಿಸ್ಥಿತಿ ನೋಡಿಕೊಂಡು ವೇಳಾಪಟ್ಟಿ ಪ್ರಕಟ.
ವೇಳಾಪಟ್ಟಿ ಪ್ರಕಟಿಸಿದ ನಂತರ 1 ವಾರ ತರಗತಿ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ.


ದೇಶದಲ್ಲಿ ಸೋಂಕಿತರ ಸಂಖ್ಯೆ 3,374ಕ್ಕೆ ಏರಿಕೆ

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ.
ಕಳೆದ 24 ಗಂಟೆಯಲ್ಲಿ 11 ಮಂದಿ ಸಾವು.
ಕಳೆದ 24 ಗಂಟೆಯಲ್ಲಿ 472 ಕೇಸ್ ಪತ್ತೆ.
ದೇಶದಲ್ಲಿ ಈವರೆಗೆ 267 ಮಂದಿ ಗುಣಮುಖ.
ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ.


ರಾಜ್ಯದಲ್ಲಿ ಕೊರೊನಾ ಸೋಂಕಿತರ

ಸಂಖ್ಯೆ 151ಕ್ಕೆ ಏರಿಕೆಯ

ಬೆಳಗಾವಿಯಲ್ಲಿ ನಾಲ್ವರು ಸೋಂಕಿತರು.
ಬೆಂಗಳೂರು 2, ಬಳ್ಳಾರಿಯಲ್ಲಿ 1 ಕೇಸ್ ಪತ್ತೆ
ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್.
ಬೆಂಗಳೂರು-57, ಮೈಸೂರು-28, ಬೀದರ್-10
ಚಿಕ್ಕಬಳ್ಳಾಪುರ-7, ದಕ್ಷಿಣ ಕನ್ನಡ-12
ಉತ್ತರ ಕನ್ನಡ-8, ಕಲಬುರಗಿ-5
ದಾವಣಗೆರೆ-3, ಉಡುಪಿ-3, ಬಳ್ಳಾರಿ-6.


ಭಾರತದಲ್ಲಿ ದೀಪ ಹಚ್ಚುವ ಅಭಿಯಾನ

ಸಾರ್ಕ್ ದೇಶಗಳಿಂದಲೂ ಅಭಿಯಾನಕ್ಕೆ ಸಾಥ್

ಪ್ರಧಾನಿ ಮೋದಿ ಅಭಿಯಾನಕ್ಕೆ ಸಾರ್ಕ್ ಬೆಂಬಲ.
ಸಾರ್ಕ್, ಇತರ ದೇಶಗಳಿಂದಲೂ ಸಹಕಾರ.
ಭಾರತದ ಜೊತೆ ಇತರ ದೇಶಗಳಲ್ಲೂ ದೀಪ
ಬಾಂಗ್ಲಾದೇಶ, ಮಾಲ್ಡೀವ್ಸ್, ವಿಯೆಟ್ನಾಂ
ಜರ್ಮನಿ, ಅಫ್ಘಾನಿಸ್ತಾನ, ನೇಪಾಳ
ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್, ಮೆಕ್ಸಿಕೋ
ಹಲವು ದೇಶಗಳು ದೀಪ ಅಬಿಯಾನಕ್ಕೆ ಸಾಥ್.


ಲಾಕ್ ಡೌನ್ ಕಟ್ಟುನಿಟ್ಟು ಪಾಲನೆಗೆ ಸಿಎಂ ಮನವಿ

ಕೊರೊನಾ ಕೇಸ್ ಜಾಸ್ತಿಯಾಗಿರುವುದಕ್ಕೆ ಕಳವಳ.
ಆದೇಶ ಪಾಲನೆಗೆ ಮನವಿ ಮಾಡಿರುವ ಸಿಎಂ.
ಬೀದರ್, ಮೈಸೂರು, ಬೆಂಗಳೂರು ನಗರ
ಮಂಗಳೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚಳ.
ದಿನೇದಿನೇ ಸೋಂಕು ಗಣನೀಯವಾಗಿ ಹೆಚ್ಚುತ್ತಿದೆ.
ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ ಹಲವು ಕ್ರಮ.
ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲಿಸಬೇಕು
ಏ.14ಕ್ಕೆ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ.
ಮುಂದೆ ವಿಸ್ತರಿಸಬೇಕೋ, ಬೇಡವೋ ತೀರ್ಮಾನ.
ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.
ಈ ಕುರಿತು ಸಲಹೆ ಸೂಚನೆ ಕೊಡುವಂತೆ ಮನವಿ
ಸಾರ್ವಜನಿಕರಿಗೆ ಮನವಿ ಮಾಡಿದ ಸಿಎಂ ಬಿಎಸ್‍ವೈ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?