Saturday, July 27, 2024
Google search engine
Homeಜನಮನಒಂಟಿತನದ ನೋವಿಗಿಂಥ...

ಒಂಟಿತನದ ನೋವಿಗಿಂಥ…

ಶಂಕರ್ ಬರಕನಹಾಲ್


ನಾಗರಿಕತೆಗೆ ಮನುಷ್ಯ ಒಗ್ಗಿಕೊಂಡಂತೆ
ಆಂತರ್ಯದಲಿ ನಡೆಯುವ
ಅವಾ-ಭಾವಗಳ ನಡುವಿನ ಗುದ್ದಾಟದಲೇ ದಿನವಿಡೀ ಕಳೆಯುವ
ನಮಗೇ ಏಕಾಂತದ ನೈಜಸುಖ ಎಂದಿಗೂ ಅರ್ಥವಾಗುವುದಿಲ್ಲ.!

ವೈಯಕ್ತಿಕವಾದ ದ್ವೇಷ ,ಅಸೂಹೆ , ಪರರನ್ನು ಓಲೈಸಬೇಕೆಂಬ ಕೆಟ್ಟ ಹಠ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ‌ ಯೋಚನಾ ಲಹರಿಗೆ ಚೌಕಟ್ಟು ವಿಧಿಸುವ ದೊಡ್ಡ ಬೇಲಿಗಳು‌.!

ನಾವೆಷ್ಟು ಈ ರೀತಿಯಾದ ದೌರ್ಬಲ್ಯಗಳಿಗೆ ಒಳಗಾಗುತ್ತೀವೆಯೋ, ಅಷ್ಟೇ ಬೇಗ ಪ್ರಪಂಚಕ್ಕೆ ನಮಗರಿವಿಲ್ಲದ ಹಾಗೇ ತೀರಾ ಸಣ್ಣವರಾಗಿ ಕಾಣುತ್ತಿರುತ್ತೇವೆ.!

ನಮ್ಮ‌ ವ್ಯಕ್ತಿತ್ವ ಏನೆಂಬುದನು ಪ್ರಪಂಚಕ್ಕೆ‌ ನಿರೂಪಿಸಬೇಕಾದ ಯಾವುದೇ ಅಗತ್ಯ ಎಂದಿಗೂ ಯಾರಿಗೂ ಇರಬಾರದು.!

ನಮ್ಮ ಆತ್ಮ-ಮನಸ್ಥಿತಿಯ ನೈಜ ಶಕ್ತಿ ಏನೆಂಬುದ ಈ ಒಂದೇ ಒಂದು ಧೋರಣೆ ನಮಗೆ ಸವಿವರವಾಗಿ ಅರ್ಥಮಾಡಿಸಿ ಬಿಡುತ್ತದೆ.!

ಅವನ‌ ಕೆಲವು ನಡವಳಿಕೆ-ಧೋರಣೆಗಳನ್ನು ಬೇರೆ ಆಯ್ಕೆ ಇರದೇ.
ಅದನ್ನೇ ಸರಿ ಎಂದು ಸ್ವೀಕರಿಸಿ,
ಬದುಕಲ್ಲಿ ಅಳವಡಿಸಿಕೊಳ್ಳಲು ಅವನು ಸಿದ್ಧನಾಗುತ್ತಾ ಹೋಗುತಿದ್ದಾನೆ‌.!

ಸರಿ-ತಪ್ಪು ಎಂದು ವೈಯಕ್ತಿಕವಾಗಿ ತುಲನೆ ಮಾಡದೇ,
ಪ್ರಶ್ನೆ-ಉತ್ತರಗಳ‌ ಸಹವಾಸಕ್ಕೆ ಹೋಗದೆ ಸ್ವಾಭಾವಿಕವಾಗಿ ಸ್ವೀಕರಿಸುವ ಮನಸ್ಸು ನಮ್ಮದಾಗಿರಬೇಕಷ್ಟೇ.!

ಒಟ್ಟಾರೆಯಾಗಿ,ಧನಾತ್ಮಕ-ನಕರಾತ್ಮಕ ಅಂಶಗಳೆಲ್ಲವನೂ ಯಾವುದೇ ಮರ್ಜಿಗೆ ಒಳಗಾಗದೇ, ಮುಕ್ತವಾಗಿ ಅಂತರಾಳದಲ್ಲಿ‌ ಅವಲೋಕಿಸುತ್ತಾ ಹೋದಂತೆ, ನಮ್ಮ ಮನಸಾಕ್ಷಿ ಒಂದು ನಿರ್ಧಾರಕ್ಕೆ ಬರುತ್ತದೆ.
ಅದೇ ಅಂತಿಮ.!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?