Saturday, July 20, 2024
Google search engine
Homeಜನಮನಕಸವನಹಳ್ಳಿ ರಮೇಶ್ ಈಗ ಕುಂಚಿಟಿಗರ ರತ್ನ

ಕಸವನಹಳ್ಳಿ ರಮೇಶ್ ಈಗ ಕುಂಚಿಟಿಗರ ರತ್ನ

Publicstory. in


ತುಮಕೂರು: ವಿಶ್ವ ಕುಂಚಿಟಿಗರ ಪರಿಷತ್ ನೀಡುವ ಕುಂಚಿಟಿಗ ರತ್ನ ಪ್ರಶಸ್ತಿ ಈ ಸಲ ಹೋರಾಟಗಾರ ಕಸವನಹಳ್ಳಿ ರಮೇಶ್ ಮುಡಿಗೇರಿದೆ.

ಚಳವಳಿಯ ಹಿನ್ನೆಲೆಯುಳ್ಳವರಿಗರು ಕಸವನಹಳ್ಳಿ ರಮೇಶ್ ಹೆಸರು ಕೇಳದೇ ಇರಲಾರರು. ಅಷ್ಟೊಂದು ಪರಿಚಿತ ಅವರು. ಡಿ.12 ರಂದು ತುಮಕೂರಿನ ಕೋತಿತೋಪಿನಲ್ಲಿರುವ ಕುಂಚಿಟಿಗ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅಷ್ಟಕ್ಕೂ ಇಂಥ ಅತಿ ದೊಡ್ಡ ಪ್ರಶಸ್ತಿಗೆ ರಮೇಶ್ ಅವರನ್ನು ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಮುಂದಿದೆ ಉತ್ತರ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕಸವನಹಳ್ಳಿ ಗ್ರಾಮದಲ್ಲಿ ಶ್ರೀಯುತ ಕಸವನಹಳ್ಳಿ ರಮೇಶ್ ಎಂಬುವರು ಕೃಷಿ ಕುಟುಂಬದ ಕುಂಚಿಟಿಗ ಜನಾಂಗದ ಬೆಳ್ಳಿ ನವರು ಕುಲದ ಸಿದ್ದಪ್ಪ ಮತ್ತು ನಿಂಗಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯ ಮಗನಾಗಿ 1968ನೇ ಇಸ್ವಿ ಜೂನ್ 20ರಂದು ಜನಿಸಿದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಸವನಹಳ್ಳಿಯಲ್ಲಿ ಮಾಡಿ ಮಾಧ್ಯಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಹೊಸಯಳನಾಡು ಗ್ರಾಮದ ಇವರ ತಾತ (ತಾಯಿಯ ದೊಡ್ಡಪ್ಪ) ಗಾಂಧಿವಾದಿ ಸಿ .ತಿಮ್ಮಯ್ಯನವರ ಮನೆಯಲ್ಲಿದ್ದು ,ಮುಗಿಸಿದರು.

ತಂದೆ-ತಾಯಿ ವಿದ್ಯಾವಂತರಾಗಿದ್ದೂ ಅವರ ಸಂಸ್ಕಾರಗಳು ಅಲ್ಲದೆ ತಾತ ತಿಮ್ಮಯ್ಯನವರ ಆದರ್ಶ ಗುಣಗಳು ಇವರನ್ನು ಆಕರ್ಷಿಸಿ ತನ್ನೆಡೆಗೆ ಸೆಳೆದವು. ಮುಂದೆ ಪದವಿಪೂರ್ವ ಮತ್ತು ಪದವಿ ವಿದ್ಯಾಭ್ಯಾಸವನ್ನು ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗ ದಲ್ಲಿ ಮುಗಿಸಿದರು. ಆ ವೇಳೆಯಲ್ಲಿ ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಸ್ಟೆಲ್ ಕೊರತೆ ಶಾಲಾ ಶುಲ್ಕ ಏರಿಕೆ ಸ್ಕಾಲರ್ಶಿಪ್ ಹಾಗೂ ಹಲವು ವಿಚಾರಗಳ ಬಗ್ಗೆ ಹೋರಾಟದಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮುಂದೆ ಸರ್ಕಾರಿ ಕೆಲಸಕ್ಕೆ ಪ್ರಯತ್ನಪಟ್ಟು ಕೆಲಸ ಸಿಗದೆ ಕೃಷಿಯತ್ತ ಮುಖ ಮಾಡಿದರು. ವ್ಯವಸಾಯ ಮಾಡುತ್ತಲೇ ರಾಜ್ಯದಲ್ಲಿ ರೈತರ ಚಳುವಳಿಗಳು ಸರ್ಕಾರದ ಘೋಷಣೆಗಳ ವಿರುದ್ಧ ಹೋರಾಡುತ್ತಿದ್ದರು.

ಅಗಲಿದ ರೈತ ನಾಯಕರಾದ ಶ್ರೀಯುತ ಸುಂದರೇಶ್ ಶ್ರೀಯುತ ರುದ್ರಪ್ಪ ಪ್ರೊಫೆಸರ್ ನಂಜುಂಡಸ್ವಾಮಿ ಪುಟ್ಟಣ್ಣಯ್ಯ ಇವರುಗಳ ಹೋರಾಟ ದಲ್ಲಿಪಾಲ್ಗೊಂಡು ಚಳುವಳಿಯ ಪವಿತ್ರತೆಗೆ ಗಾಂಧಿ ತತ್ವಗಳಾದ ಉಪವಾಸ, ಸತ್ಯಾಗ್ರಹ ,ಪಾದಯಾತ್ರೆ ,ಮಾಡುತ್ತಾ ಹೋರಾಟಕ್ಕೆ ಮುಂದಾದರು.

ರೈತರ ಸಮಸ್ಯೆಗಳನ್ನು ಆಲಿಸುತ್ತಾ ಅವುಗಳನ್ನು ಸರ್ಕಾರದ ಮುಂದೆ ವೈಜ್ಞಾನಿಕವಾಗಿ ಮಂಡಿಸುವುದರಲ್ಲಿ ಯಶಸ್ವಿಯಾಗಿ ಮುಂಚೂಣಿ ನಾಯಕರಾದರು ಅದೇ ಸಮಯದಲ್ಲಿ ನೀರಿನ ಕೊರತೆ ಕಬ್ಬಿನ ಕೊರತೆಯಿಂದ ವಾಣಿವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನು ನಿಲ್ಲಿಸಿ ರೈತರಿಗೆ ಬಾಕಿ ಕೊಡದೆ ಸತಾಯಿಸುತ್ತಿತ್ತು.

ಹಲವು ಚಳುವಳಿಗಳನ್ನು ಮಾಡಿದರು ಫಲಪ್ರದವಾಗಲಿಲ್ಲ .ಅದಕ್ಕೆ ಪರಿಹಾರವಾಗಿ ರೈತರಿಗೆ ಬಾಕಿ ಕೊಡಿಸುವಂತೆ ಹೈಕೋರ್ಟ್ನಲ್ಲಿ ದಾವೆ ಹೂಡಲಾಯಿತು.

ಅದಕ್ಕೆ ಸಂಬಂಧಿಸಿದ ಕೋರ್ಟ್ ರೈತರ ಬಾಕಿ ಮತ್ತು ವಿಳಂಬವಾಗಿದ್ದಕ್ಕೆ ಶೇಕಡ 15 ಬಡ್ಡಿ ಸೇರಿಸಿಕೋಡಲು ಆದೇಶ ಮಾಡಿತು.
ಇದರಿಂದ ಕೋಟ್ಯಾಂತರ ರೂಪಾಯಿ ರೈತರಿಗೆ ಕಬ್ಬಿನ ಬಾಕಿ ಪಾವತಿ ಯಾಯಿತು. ಇದು ಶ್ರೀಯುತರ ರೈತರ ಹೋರಾಟಕ್ಕೆ ಸಂದ ಜಯ.

ಹಲವಾರು ವರ್ಷಗಳಿಂದ ಹೋರಾಡುತ್ತಿದ್ದರು ಸಹ ಬಯಲುಸೀಮೆ ಮತ್ತು ವಾಣಿವಿಲಾಸ ಸಾಗರಕ್ಕೆ ನೀರು ಕೊಡಲು ಭದ್ರಾಮೇಲ್ದಂಡೆ ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎನಿಸುತ್ತಿತ್ತು.ಅದಕ್ಕೆ ಮುಂದಾದ ಶ್ರೀಯುತರು ರಾಜಧಾನಿ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಸ್ವಾಮೀಜಿಗಳೊಂದಿಗೆ ಉಪವಾಸ ಸತ್ಯಾಗ್ರಹ ಮಾಡಿದರು. ಸರ್ಕಾರ ಬಗ್ಗಲಿಲ್ಲ ನಂತರ ವಿಧಾನಸೌಧ ಚಲೋ, ರಾಜಭವನ ಚಲೋ, ಮಾಡಿದರು.

ಅಲ್ಲದೆ 13 ಜನ ಸ್ವಾಮೀಜಿಗಳನ್ನು ಕರೆತಂದು ವಿಧಾನಸೌಧದ ಮುಂದೆ ಪಿಕೆಟಿಂಗ್ ನಡೆಸಿದರು. ಹಿರಿಯೂರು ತಾಲೂಕು ರೈತರು ಮತ್ತು ಮಹಿಳೆಯರನ್ನು ಕರೆತಂದು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು ಸಚಿವರಾದ ಜಯಚಂದ್ರ ಮತ್ತು ಆಂಜನೇಯ ರನ್ನು ಕರೆಸಿ ಸೆನೆಟ್ ಹಾಲಿನಲ್ಲಿ ಚರ್ಚಾಗೋಷ್ಠಿ ನಡೆಸಿದರು ಇಲ್ಲಿಗೆ ಶ್ರೀಯುತ ಅಡ್ವಕೇಟ್ ಜನರಲ್ ರವಿವರ್ಮಾ ಕುಮಾರ್ ಭಾಗವಹಿಸಿದ್ದರು.

ಬೆಳಗಾವಿ ಸುವರ್ಣ ಸೌಧ ದ ವಿಧಾನಸೌಧದ ಎದುರು ಚಳುವಳಿ ನಡೆಸಿ ಬಂಧನಕ್ಕೆ ಒಳಗಾದರು. ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ನಡೆಸಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯಲ್ಲಿ ನೀರು ಮೀಸಲಿಡಲು ಒತ್ತಾಯಿಸಿ ಹಾಗೂ ಭದ್ರ ಮೇಲ್ದಂಡೆ ಯ ತುರ್ತು ಕಾಮಗಾರಿ ಪ್ರಾರಂಭಿಸಲು ಇಷ್ಟೆಲ್ಲಾ ಹೋರಾಟ ಮಾಡಿದರು ಬಗ್ಗದಿದ್ದಾಗ ಶ್ರೀಯುತರು ಹಿರಿಯೂರು ತಾಲೂಕು ಕಚೇರಿ ಮುಂದೆ 11.6.2007ರಿಂದ ನಿರಂತರವಾಗಿ 10.12.2008 ರವರೆಗೆ *543* ದಿನಗಳ ಕಾಲ ಚಳುವಳಿ ನಡೆಸಿ, ಸರ್ಕಾರದ ನಾಲ್ಕು ಜನ ಸಚಿವರು ಶಾಸಕರು ಹಾಗೂ ಶ್ರೀಯುತ ನಂಜಾವದೂತ ಮಹಾಸ್ವಾಮಿಗಳು ಧರಣಿ ಸ್ಥಳಕ್ಕೆ *ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ* ನೀರನ್ನು ಆದೇಶ ಮಾಡಿಸಿ ತುರ್ತು ಕಾಮಗಾರಿ ಮಾಡುವುದಾಗಿ ಆದೇಶಿಸಿದರು.

ಇದು ಒಂದು *ಐತಿಹಾಸಿಕ ರೈತ ಚಳುವಳಿ. ಇದರ ಯಶಸ್ವಿ ಇವರಿಗೆ ಸಲ್ಲತಕ್ಕದ್ದು.

ಏಕೆಂದರೆ ಈ ಭಾಗದ ರೈತರಲ್ಲಿ ಶೇಕಡ 70 ಭಾಗ ನಮ್ಮ ಜನಾಂಗದವರೇ ಇದ್ದು ಅವರ ಶ್ರೇಯಸ್ ಗೋಸ್ಕರ ಹೋರಾಡಿದರು ಸಾಲ ಮನ್ನಾ, ಬೆಸ್ಕಾಂ, ಕಂದಾಯ ಇಲಾಖೆ, ಕೃಷಿ ತೋಟಗಾರಿಕೆ ಹಾಗೂ ಹಲವು ಇಲಾಖೆಗಳು ಜನರನ್ನು ವಂಚಿಸುವುದನ್ನು ಖಂಡಿಸಿ ಪಾದಯಾತ್ರೆ ಉಪವಾಸ ಸತ್ಯಾಗ್ರಹ ಅತ್ಯುಗ್ರ ಚಳುವಳಿಗಳನ್ನು ಮಾಡುತ್ತಿದ್ದರು.

ರೈತರು ಹಗಲು ಹೊತ್ತಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಾರೆಂದು ರಾತ್ರಿ ವೇಳೆ ಚಳುವಳಿ ಮಾಡಿದರು. ಅದಕ್ಕೆ ಹಲವು ಮದ್ಯಪಾನಿಗಳು, ದುರುಳರು, ತೊಂದರೆ ಕೊಟ್ಟರೂ ಸಹ ಸಹಿಸಿಕೊಂಡು ಗಾಂಧಿವಾದದ ಮುಖಾಂತರ ಉತ್ತರಕೊಟ್ಟು ಪರಿಹಾರ ಕಂಡುಕೊಂಡರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭವಾದರೂ ವಿಳಂಬವಾದ ದ್ದನ್ನು ಕಂಡು ತುಂಗಾ ಭದ್ರಾ ನದಿಪಾತ್ರದಲ್ಲಿ ಸಭೆ ನಡೆಸಿದರು.

ಹಾಗೂ ಕಾಮಗಾರಿ ಪ್ರದೇಶದಲ್ಲಿ ನೂರಾರು ಜನರನ್ನು ಕರೆದುಕೊಂಡು ಪಾದಯಾತ್ರೆ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆಯ ಪಾಂಪೌಸ್ ಗಳಿಗೆ ಬೀಗ ಜಡಿದರು.

ಅಜ್ಜಂಪುರ ರೈಲ್ವೆ ಕಾಮಗಾರಿ ವಿಳಂಬವನ್ನು ಖಂಡಿಸಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಬೆಂಗಳೂರು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕಚೇರಿಯಲ್ಲಿ ಸಭೆಗಳನ್ನು ನಡೆಸಿದರು. ಇವರು ಕಾಟಕ್ಕೆ ಬೇಸತ್ತು ಮುಖ್ಯ ಇಂಜಿನಿಯರ್ ಗಳು ರಾತ್ರೋರಾತ್ರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ಕಾಮಗಾರಿಗಳಿಗೆ ಚುರುಕು ಮುಟ್ಟಿಸಿದರು.

ಆಗ ಸಚಿವರಾಗಿದ್ದ ವೆಂಕಟರಮಣಪ್ಪ ರವರು ಇನ್ನೊಂದು ತಿಂಗಳಲ್ಲಿ ನೀರು ಹರಿಸದಿದ್ದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು. ದುರದೃಷ್ಟವಶಾತ್ ಅವರ ಸರ್ಕಾರ ಹೋಯಿತು. ರಾಜ್ಯದಲ್ಲಿ *ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ನೂರಾರು ದಿನಗಳ ಕಾಲ ಪಾದಯಾತ್ರೆ ಮಾಡಿದರು.

2017, 2018, 2019 ರಲ್ಲಿ ಹಿರಿಯೂರು ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿ ನೀರು ಹರಿ ಸದಿದ್ದಾಗ ಶಾಸಕ ಸುಧಾಕರ್ ರವರಿಗೆ ಹಲವು ಮನವಿ ಮಾಡಿದರು. ನೀರು ಹರಿಸದೇ ನಿರಾಸಕ್ತಿಯಿಂದ ಹಿರಿಯೂರು ತಾಲೂಕಿನ 17000 ಎಕರೆಯ ಲಕ್ಷಾಂತರ ತೆಂಗು ಅಡಿಕೆ ತೋಟಗಳು ಒಣಗಿ ಹೋಗಲು ಕಾರಣೀಭೂತರಾಗಿದ್ದಾರೆ.

ಹಲವು ಚಳುವಳಿಯನ್ನು ಮಾಡಿದ್ದಕ್ಕೆ ಸಹಿಸದೆ, ಕೇಸುಗಳನ್ನು ಹಾಕಿ ಜೈಲಿಗಟ್ಟಿದರು.. ಗೃಹಬಂಧನದಲ್ಲಿರಿಸಿದರು ನೋಟಿಸ್ ನೀಡಿದರು .ಆದರೆ ಬಗ್ಗದೆ ಕುಗ್ಗದೆ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಇವರು ಲೇಖಕರಾಗಿ *ಭದ್ರಾ ಮೇಲ್ದಂಡೆ* ಯೋಜನೆ ವೈಜ್ಞಾನಿಕ ವರದಿ ಎಂಬ ಪುಸ್ತಕ ಬರೆದರು.

ವಾಣಿವಿಲಾಸ ಸಾಗರದ ಕೆಳಭಾಗದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಕಸವನಹಳ್ಳಿ ಮತ್ತು ಹಳೆ ಯಳನಡು ವಿನಲ್ಲಿ ದಾನಿಗಳಾದ ನಿವೃತ್ತ ಡಿವೈಎಸ್ಪಿ ರಾಮಚಂದ್ರಪ್ಪ ಮತ್ತು ನಿವೃತ್ತ ಇಂಜಿನಿಯರ್ ಜಗನ್ನಾಥ್ ಇವರ ಸಹಕಾರದ ನೆರವಿನೊಂದಿಗೆ ಶ್ರಮದಾನದ ಮೂಲಕ *ಮಣ್ಣಿನ ಬ್ಯಾರೇಜ್* ನಿರ್ಮಿಸಿದರು.

ಇದನ್ನು ಶಾಶ್ವತಗೊಳಿಸಲು *ಮಾಸ್ಟರ್ ಪ್ಲಾನ್* ರೂಪಿಸಿ ಆಗತಾನೆ ಸಣ್ಣ ನೀರಾವರಿ ಸಚಿವರಾಗಿ ಖಾತೆ ವಹಿಸಿಕೊಂಡ ಜೈಚಂದ್ರ ರವರನ್ನು ಹಿಡಿದು ಕುಂದಲಗುರ, ಸಮುದ್ರದಹಳ್ಳಿ, ಕೂಡ್ಲಹಳ್ಳಿ, ಕುನ್ನಿ ಕೆರೆ ಈ ಭಾಗದಲ್ಲಿ ದೊಡ್ಡ ದೊಡ್ಡ ಬ್ಯಾರೇಜ್ ನಿರ್ಮಿಸಲು ಹೋರಾಡಿ ಯಶಸ್ವಿಯಾದರು. ಅದೇ ರೀತಿ ಸಣ್ಣ ನೀರಾವರಿ ಮುಖ್ಯ ಇಂಜಿನಿಯರ್ ಆಗಿದ್ದ ಶ್ರೀಯುತ ರವೀಂದ್ರಪ್ಪ ನವರನ್ನ ಹಿಡಿದು ಮನವೊಲಿಸಿ ಕಸವನಹಳ್ಳಿ ಹಳೆ ಯಳನಾಡು ಬ್ಯಾರೇಜ್ ನಿರ್ಮಿಸಿದ್ದು ಅತ್ಯಂತ ಸಂತೋಷದ ವಿಚಾರವೇ ಸರಿ.

ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಜೈಪ್ರಕಾಶ್ ಅವರನ್ನು ಮನವೊಲಿಸಿ *ಪಿಟ್ಲಾಲಿ ಆಲೂರು ಮಧ್ಯೆ ಬ್ರಿಡ್ಜ್ ಕಮ್ ಬ್ಯಾರೇಜ್ ಮುಂಜು ರಾಗಲು ಸ್ಥಳೀಯರಾದ ಗ್ರಾಮದ ಜೆ.ಹೋನ್ನಯ್ಯನವರ ಮಗನಾದ ಹೆಚ್. ಶಿವರಾಂ ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ಶ್ರೀನಿವಾಸ್ ಇವರನ್ನು ಬಳಸಿಕೊಂಡು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ರಾಮಚಂದ್ರಪ್ಪ ನಿವೃತ್ತ ಇಂಜಿನಿಯರ್ ಜಗನ್ನಾಥ್ ಮಾರ್ಗದರ್ಶನದಲ್ಲಿ ಈಗ ಕೆಲಸ ಮಾಡುತ್ತಿದ್ದಾರೆ.

ಶ್ರೀಯುತರು *ಅಜಾತಶತ್ರು*ವಾಗಿ ಭೂರಹಿತರಿಗೆ ಭೂಮಿ ಕೊಡಿಸಲು *ಭೂ ಹಕ್ಕುದಾರರ ವೇದಿಕೆ * ಕಟ್ಟಿಕೊಂಡು ಹಲವು ಚಳುವಳಿ ಮಾಡುತ್ತಿದ್ದಾರೆ. ಕನ್ನಡ ಸೇವೆ ಮಾಡಬೇಕು ಮತ್ತು ಜನರಿಗೆ ಶಿಕ್ಷಣ ಕೊಡಬೇಕು ಪುಸ್ತಕ ಪ್ರೀತಿ ಬೆಳೆಸಬೇಕೆಂದು ಮನೆಯಲ್ಲಿಯೇ *ನಮ್ಮ ಗ್ರಂಥಾಲಯ* ಸ್ಥಾಪಿಸಿದ್ದಾರೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಬಯಲುಸೀಮೆ ಬದುಕು ಬವಣೆ ನೀರಾವರಿ ಹಲವು ವಿಚಾರಗಳಲ್ಲಿ *ಮಾರ್ಗದರ್ಶಕರಾಗಿ* ಇರುತ್ತಾರೆ.

ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮ ನೀಡಿರುತ್ತಾರೆ .(ನೀರಾವರಿ ಮತ್ತು ಕ್ರೀಡೆ) ಶ್ರೀಯುತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫೇಸ್ಬುಕ್ ಅಕೌಂಟ್ ಕಸವನಹಳ್ಳಿ ( Kasavanahalli Ramesh) ರಮೇಶ್ ಎಂದು ಆಂಗ್ಲ ಭಾಷೆಯಲ್ಲಿ ಟೈಪ್ ಮಾಡಿ ನೋಡ ತಕ್ಕದ್ದು ಶ್ರೀಯುತರು ಪ್ರಸ್ತುತ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರು ಹಿತರಕ್ಷಣಾ ವೇದಿಕೆಯ *ಅಧ್ಯಕ್ಷರಾಗಿ* ನಿರಂತರವಾಗಿ ಹೋರಾಟ ಮಾಡುತ್ತಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?