Saturday, July 27, 2024
Google search engine

ಕೇವಲ ಪುರುಷ

ದೇವರಹಳ್ಳಿ ಧನಂಜಯ


ಜಗತ್ತಿಗೆ ಗಾಢ ನಿದ್ರೆ
ಎಚ್ಚರ ತಪ್ಪಿದ ಜನಸ್ತೋಮ
ಕೊನೆಯಿಲ್ಲದ ಕನಸ ಕನವರಿಕೆ
ಚಿರ ಎಚ್ಚರದ ನನಸಿಗೆ
ಚಡಪಡಿಸಿದ ಕೇವಲ ಪುರುಷ.

ಕತ್ತಲ ಆಗಸದಿ ಶಶಿ ತೇಲಿದಂತೆ
ಒಳ ಬಾನು ಬೆಳಗಿತು
ಅರಿವ ಚಂದಿರ ಮೂಡಿ
ಬುದ್ಧನ ಹಗುರ ಹೆಜ್ಜೆಗಳು
ಕೊನೆಯಿಲ್ಲದ ಕತ್ತಲ ದಾಟುವ
ಕನಸ ಹೊತ್ತು ನಡೆದಿವೆ.

ನೆಲಬಾನು ತಬ್ಬಿರುವ
ಆಕಾಶಕ್ಕೆ ತೋಳು ಚಾಚಿರುವ
ಮರದ ಬುಡ ಅವನಿಗೆ ಅಮ್ಮನ ಮಡಿಲು.
ಇಲ್ಲಿಗೆ ಬರುವ ಮುನ್ನತನ್ನೊಳಗೆ
ಕಾಲು,ಕಾಲ ಸವೆದಿವೆ
ಕುಳಿತಲ್ಲೇ ಎಷ್ಟು ನಡೆದಿರಬಹುದು!

ವಿಶ್ರಾಂತಿ ತೆಗೆದುಕೋ ಮಗುವೇ
ಕೋಡು ಕುರುಡುಗಳ ಹೊತ್ತು
ಬಹಳ ಧಣಿದಿರುವೆ
ನಿನ್ನಂತೆಯೇ ನಾನೂ
ನಿಂತಲ್ಲೇ ನಡೆಯುತ್ತಿರುವೆ
ಅನುಭೂತಿ ಗೊಂಡಿತು ಮರ

ಅವನಿಗೋ ಕಾಲ ಬೇರಾಗಿಸುವ ಬಯಕೆ
ಬೇರ ಕಾಲಾಗಿಸುವ ತವಕ ಅರಳಿಮರಕೆ
ಒಳಗಣ್ಣು ಮುಚ್ಚಿಬಿಟ್ಟೀತೆಂಬ ಭಯ ಇಬ್ಬರಿಗೂ
ಸಾಗುತ್ತಲೇ ಇವೆ ನಿದ್ರೆ ಇಲ್ಲದ ರಾತ್ರಿಗಳು
ಛಲ ಬಿಡದ ಮರದ ಚಿಗುರಿನಲಿ
ಬುದ್ಧ ಮತ್ತೆ ಮತ್ತೆ ಮೂಡುತ್ತಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?