ನವ ದೆಹಲಿ :ದೇಶ ಶಾಂತಿ ಬಯಸುತ್ತದೆ. ಭಾರತದ ತಂಟೆಗೆ ಬರಬೇಡಿ ಎಂದು ಪ್ರಧಾನಿ ಮೋದಿ ಚೀನಾಕ್ಕೆ ತಮ್ಮ ಶೈಲಿಯಲ್ಲಿ ಎಚ್ಚರಿಕೆ ನೀಸಿದರು.
ಮುಖ್ಯಮಂತ್ರಿಗಳ ಸಭೆಗೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ದೇಶದ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ದೇಶ ಶಾಂತಿ ಬಯಸುತ್ತದೆ. ಸುಖಾ ಸುಮ್ಮನೆ ನಮ್ಮನ್ನು ಕೆಣಕ ಬೇಡಿ ಕೆಣಕಿದರೆ ಸುಮ್ಮನಿರುವುದಿಲ್ಲ ಎಂದರು.
ವಿಡಿಯೊ ಕೃಪೆ ಡಿಡಿ ನ್ಯೂಸ್
ಪ್ರಧಾನಿ ಮೋದಿ ಹುತಾತ್ಮ ಯೋದರಿಗೆ ಸಂತಾಪವನ್ನು ಸೂಚಿಸಿದರು. ಇಂದಿನ ಸಭೆಯಲ್ಲಿ ಪಾಲ್ಗೊಂಡ ದೇಶ ದ ಎಲ್ಲಾ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು, ನಂತರ ಕೋವಿಡ್ 19 ಮುಖ್ಯ ಮಂತ್ರಿಗಳ ಸಭೆ ಆರಂಭವಾಯಿತು.