Thursday, March 28, 2024
Google search engine
Homeತುಮಕೂರ್ ಲೈವ್ಜಾತಿ ವ್ಯವಸ್ಥೆ ಒಂದು ರೋಗ

ಜಾತಿ ವ್ಯವಸ್ಥೆ ಒಂದು ರೋಗ

ತುಮಕೂರು,: ಸಮಾನತೆ ಸ್ವಾತಂತ್ರ, ಸಹೋದರತೆ ಸಂವಿಧಾನದ ಮೂಲ ಅಶಯ : ಡಾ. ನಾಗಭೂ಼ಷಣ್ ಬಗ್ಗನಡು ಸಹಾಯಕ ಪ್ರಾಧ್ಯಾಪಕರು ತುಮಕೂರು
ಸಮಾನತೆ ಸ್ವಾತಂತ್ರ, ಸಹೋದರತೆ ಸಂವಿಧಾನದ ಮೂಲ ಅಶಯ ವಾಗಿದೆ ಎಂದು ಡಾ. ನಾಗಭೂಷಣ ಬಗ್ಗನಡು ತಿಳಿಸಿದರು.

ಅವರು ತಿಪಟೂರಿನ ಕಂಚಾಘಟ್ಟದಲ್ಲಿ ನಡೆದ ಅಂಬೇಡ್ಕರ್ ರವರ ಮಹಾಪರಿ ನಿರ್ವಾಣ ದಿನದಂದು ಡಾ.ಬಿ ಆರ್ ಅಂಬೇಡ್ಕರ್ ಧಮ್ಮ ಪ್ರತಿಷ್ಠಾನ(ರಿ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.

ದೇಶದ ಜನರಿಗೆ ಸ್ವಾತಂತ್ರ್ಯ ಕೊಡಿ ದೇಶ ಎಂದರೆ ಭೂಪಟವಲ್ಲ , ದೇಶ ಎಂದರೆ ಗಡಿಯಲ್ಲ ,ದೇಶವೆಂದರೆ ಇಲ್ಲಿನ ಜನರು ಎಂದವರು ಅಂಬೇಡ್ಕರ್ . ದೇಶ ಪ್ರೇಮ ದೇಶ ಭಕ್ತಿ ಬೇರೆ ಇಂದು ಅಂಬೇಡ್ಕರ್ ರವರ ಅಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೇವೆ ಎಂದರು.

ಇಂದಿಗೂ ಜಾತಿ ವ್ಯವಸ್ತೆ ಭಾರತದೊಳಗೆ ಇದೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ ಇದು ಒಂದು ರೋಗ ಎಂದರು.ನಾವು ಈ ಸಂಧರ್ಭದಲ್ಲಿ ಅವಲೋಕನ ಮಾಡಿ ಕೊಳ್ಳಬೇಕಿದೆ ವ್ಯೆಕ್ತಿ ಚಿತ್ರದ ಅಚರಣೆ ಬಾವಚಿತ್ರಕ್ಕೆ ನಾವು ಜೋತು ಬೀಳ ಬೇಕಾಗಿಲ್ಲಾ ನಾವು ಬಾಬಾ ಸಾಹೇಬರನ್ನು ನಮ್ಮ ಅಂತರಾಳದಲ್ಲಿ ಇಳಿಸಿಕೊಂಡಾಗ ಮಾತ್ರ ಅವರಿಗೆ ಸಲ್ಲಿಸುವ ಗೌರವ ಎಂದರು.

ನಿವೃತ್ತ ಪೋಲೀಸ್ ಆಧಿಕಾರಿ ಲೋಕೇಶ್ವರ್ ರವರು ಮಾತನಾಡಿ ಅಂಬೇಡ್ಕರ್ ರವರು ಶಿಕ್ಷಣ, ಸಂಘಟನೆ , ಸಂಘರ್ಷ ಎಂಬ ಮಾತನ್ನು ಹೇಳಿದ್ದರು ಸಿಂದೂ ನಾಗರಿಕತೆ ಇಲ್ಲದಿದ್ದರೆ ಜಾತಿ ವ್ಯೆವಸ್ತೆ ಇರುತ್ತಿರಲಿಲ್ಲ ಇಂದು ಪುರುಷ ಪ್ರದಾನ ಕುಟುಂಬವನ್ನಾಗಿ ಮಾಡಿದ್ದು ಹೆಣ್ಣನ್ನು ದೇವರನ್ನಾಗಿ ಮಾಡಲಾಗಿದೆ ಎಂದ ಅವರು ನಾನು ಬಾಲ್ಯದಿಂದಲೆ ಅಂಬೇಡ್ಕರ್ ರವರ ಪ್ರಭಾವಕ್ಕೆ ಒಳಗಾಗಿದ್ದೆ ಎಂದರು,

ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷರಾದ ಸಿ ಬಿ ಶಶಿಧರ್ ಮಾತನಾಡಿ ಯಾರಿಗೆ ಇತಿಹಾಸ ಗೊತ್ತಿಲ್ಲವೊ ಅವರು ಇತಿಹಾಸ ನಿರ್ಮಿಸಲು ಸಾದ್ಯವಿಲ್ಲ ಹೆಚ್ಚು ಅಂಬೇಡ್ಕರ್ ರವರ ಬಗ್ಗೆ ಅದ್ಯಯನ ಮಾಡುವುದರಿಂದ ಇತಿಹಾಸ ತಿಳಿಯಲು ಕಟ್ಟಲು ಸಾದ್ಯ ಎಂದರು..

ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ, ಬಜಗೂರು ಮಂಜುನಾಥ್,ನಗರಸಭಾ ಸದಸ್ಯರಾದ ಶ್ರೀಮತಿ ವಿನುತ ತಿಲಕ್ ,ಭೂಮಿ ಸಾಂಸ್ಕ್ರೃತಿಕ ವೇದಿಕೆಯ ಸತ್ತೀಶ್, ರೈತ ಸಂಘದ ಮನೋಹರ್ ಪಟೇಲ್, ಮುಸ್ಲಿಂ ಜಮಾಯತ್ ನ ಶಫೀ ಉಲ್ಲಾ ಶರೀಫ್ , ಸೈಯದ್ ಮಹಮೂದ್, ಅಂಬೇಡ್ಕರ್ ಸೇನೆಯ ಅನಂದ್ ಸೇರಿದಂತೆ ಪ್ರಗತಿಪರ ಸಂಘಟನೆಗಳು ಬಾಗವಹಿಸಿದ್ದವು.

ಸೌಹಾರ್ದ ತಿಪಟೂರು ಸಂಘಟನೆಯ ಅಲ್ಲಾಬಕಾಶ್ ಎ ಕಾರ್ಯಕ್ರಮ ನಿರೂಪಿಸಿ ಮೋಹನ್ ಸಾಗಿ ಸ್ವಾಗತಿಸಿದರು. ವಸಂತ್ ವಂದಿಸಿದರು ಈ ಕಾರ್ಯಕ್ರಮವನ್ನು ಡಾ. ಬಿ ಅರ್ ಅಂಬೇಡ್ಕರ್ ಧಮ್ಮ ಪ್ರತಿಷ್ಠಾನ ಆಯೋಜಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?