Thursday, July 25, 2024
Google search engine
Homeಕವನಭಾನುವಾರದ ಕವಿತೆಡಾ. ರಜನಿ‌ ಕಣ್ಣಲ್ಲಿ ಕಲೀಲ್ ಗಿಬ್ರಾನ್ ಕವಿತೆ

ಡಾ. ರಜನಿ‌ ಕಣ್ಣಲ್ಲಿ ಕಲೀಲ್ ಗಿಬ್ರಾನ್ ಕವಿತೆ

ಚಳಿಗಾಲದಲ್ಲಿ ಎಲೆ ಉದುರಿ ಮತ್ತೆ ಚಿಗುರುವ ಮರ ,ಸಾಯುವ ಅಜ್ಜಿ
ಬೆಳೆಯುವ ಮೊಮ್ಮಗ ,ಜೀವನ ಚಕ್ರ.. ಇದು ಕಲೀಲ್ ಗಿಬ್ರಾನ್ ಅವರ ಎಲೆಗೆ ಸಂಬಂಧಪಟ್ಟ ಒಂದು ಎಳೆಯಿಂದ ಪ್ರೇರಿತರಾಗಿ ಕವನವಾಗಿಸಿದ್ದಾರೆ
ಡಾII ರಜನಿ

ಎಲೆ
*************

ಚಳಿಗೆ ಉದುರಿದ
ಎಲೆ..

ಒಣಗಿದ ತರಗೆಲೆ
ಸಾಯುವ ಸದ್ದು

ಬೋಳು ಮರ
ಕಡ್ಡಿ ಕೊಂಬೆಗಳು…

ಎಲೆಗಳೆಲ್ಲಾ ಸೇರಿ
ಮರಕ್ಕೆ ಉಣಿಸಿದ್ದು
ಸುಳ್ಳೆ?

ಎಲೆ ಉಣಿಸಿ
ಬೆಳೆಸಿದ ಕಾಂಡ ,
ಬೇರು ಅಲ್ಲವೇ?

ಒಣಗಿ ಉದುರಿದರೂ
ನಿನ್ನ
ಹಸಿರಾಗಿಟ್ಟಿಲ್ಲವೇ?

ಕೊಳೆತು ಗೊಬ್ಬರವಾಗಿ
ನಿನ್ನ ಬುಡಕ್ಕೆ
ಬಲವಾಗಿ…

ನೋವಿಲ್ಲದೆ ಕಳಚಿ
ನೀನು ನನ್ನ
ಕಳುಹಿಸಲಿಲ್ಲವೇ?

ಗಾಳಿಗೆ ತೂರಿ
ಹಾರಿ ಬೀಳುವಾಗ
ನೀನು …

ಅಳದೇ ನಿಂತು
ನನ್ನ ಮೆಲ್ಲಗೆ…
ಮಲಗಿಸಲಲ್ಲವೇ?

ನಿನ್ನಳೊಗೆ
ನಾ ನೀಡಿದ
ಕಸುವು ..

ಮರೆಯುವೆ
ಹೇಗೆ ನನ್ನ
ನೀನು..

ತಿಳಿ ಹಸಿರ
ಚಿಗುರೆಲೆ
ನನ್ನದೆ ಮರಿ …

ನನ್ನ
ಕುರುಹಲ್ಲವೇ?


ಡಾII ರಜನಿ.

(ಕಲೀಲ್ ಗಿಬ್ರಾನ್ ಅವರ ಕವನದಿಂದ
ಪ್ರೇರಿತ) .

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?