Saturday, July 27, 2024
Google search engine
Homeತುಮಕೂರು ಲೈವ್ನನ್ನ ಸೇವೆಗೆ ನನ್ನ ತಾಯಿಯೇ ಸ್ಫೂರ್ತಿ- ಗೌರಿಶಂಕರ್

ನನ್ನ ಸೇವೆಗೆ ನನ್ನ ತಾಯಿಯೇ ಸ್ಫೂರ್ತಿ- ಗೌರಿಶಂಕರ್

ಚಿತ್ರ: ಜೆಪಿ

ಹೆತ್ತೇನಹಳ್ಳಿ ಮಂಜುನಾಥ್


ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ಮೊದಲನೇ ದಿನದಿಂದಲೂ ನಿರಂತರ ಸೇವೆಯಲ್ಲಿ ತೊಡಗಿದ್ದೇನೆ. ಇಲ್ಲಿಯವರೆಗೂ 2 ಲಕ್ಷ ಮಾಸ್ಕ್ 1 ಲಕ್ಷ ಸ್ಯಾನಿಟೈಸರ್, 50 ಸಾವಿರ ಹ್ಯಾಂಡ್ ವಾಷ್ ನೀಡಿದ್ದೇವೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ತಿಳಿಸಿದರು.

ಸೋಮವಾರ ಕ್ಷೇತ್ರದ ಜನರಿಗೆ ಮನೆ ಮನೆಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತ‌ನಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದ್ದರು.

ರೈತರ ಬೆಳೆಗಳನ್ನು ಅಲ್ಲೇ ಖರಿದಿಸಿ ಅಲ್ಲೇ ವಿತರಿಸುತ್ತಿದ್ದೇವೆ, ದಿನನಿತ್ಯ ಬರುವ ಎಲ್ಲಾ ಜನಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ದಿನ ತಡರಾತ್ರಿ ಮನೆಗೆ ಹೋದಾಗ ತಾಯಿಯವರನ್ನ ಊಟ ಮಾಡಿದ್ಯೇನಮ್ಮಾ ಎಂದಾಗ, ಇಲ್ಲಾ ಕಣೋ, ಕೊರೋನಾದಿಂದ ದಿನನಿತ್ಯ ದೇಶ, ರಾಜ್ಯದಲ್ಲಿ ಆಗುತ್ತಿರುವ ಘಟನೆ ತುಂಬಾ ಬೇಸರ ತಂದಿದೆ. ನಿನ್ನ ಕ್ಷೇತ್ರದ ಜನಗಳು ಹೇಗಿದ್ದಾರೆ ಎಂದು ವಿಚಾರಿಸುತ್ತಾ ಅಲ್ಲಿರುವ ಎಲ್ಲಾ ಮನೆಗಳಿಗೂ ತಿಂಗಳಿಗಾಗುವ ದಿನಸಿಯನ್ನ ಗೃಹಪಯೋಗಿ ಪಧಾರ್ಥಗಳನ್ನು ನೀಡು ಎಂದೇಳಿದ “ನನ್ನ ತಾಯಿಯೇ ಈ ಕಾರ್ಯಕ್ಕೆ ಸ್ಪೂರ್ತಿ” ( ಶ್ರೀಮತಿ ಸಿದ್ದಗಂಗಮ್ಮ ಚನ್ನಿಗಪ್ಪ) ಎಂದು ಹೇಳಿದರು.

50 ಟನ್ ಬಾಳೆ, 30 ಟನ್ ಗಿಂತ ಹೆಚ್ಚು ತರಕಾರಿ, 20 ಟನ್ ಕಲ್ಲಂಗಡಿ ಖರಿದಿಸಿದೆ. ಇದಕ್ಕೆ ಮೂಲ ಕಾರಣ ಈ ನೆಲದ ಮಣ್ಣಿನ ಮಗ “ದೇವೇಗೌಡರು”. ಯಾಕಂದ್ರೆ ಈ ನೆಲದಲ್ಲಿ ರೈತಪರ ಗಟ್ಟಿ ಧ್ವನಿ, ನೀರಾವರಿ ವಿಚಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಿದದಂತಹ ಅಪ್ಪಾಜಿಯವರ ಆದೇಶದಂತೆ ರೈತರ ಪರ ನಿಂತಿದ್ದೇನೆ ಎಂದು ತಿಳಿಸಿದರು.

ಇಂದು ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಟುಂಬಗಳಿಗೆ ದಿನಸಿ & ಗೃಹಪಯೋಗಿ ಪಧಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸೋ ವ್ಯವಸ್ಥೆ ಮಾಡುತ್ತಿದ್ದೇವೆ. ಇಂದು ಮತ್ತೆ 1 ಲಕ್ಷ ಮಾಸ್ಕ್, 50000 ಕುಟುಂಬಗಳಿಗೆ ತಿಂಗಳಿಗಾಗುವಷ್ಟು ಪಡಿತರ ವಿತರಣೆ, 25 ಟನ್ ಬಾಳೆ, 10 ಟನ್ ತರಕಾರಿ, 10 ಟನ್ ಕಲ್ಲಂಗಡಿ ಅನ್ನು ಭಾನುವಾರದೊಳಗೆ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಕಾರ್ಯದಲ್ಲಿ ಸಕ್ರಿಯವಾಗಿರುವ ನನ್ನ ಸಹೋದರರಿಗೆ ಪಕ್ಷದ ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಹರ್ಷಿಸುತ್ತೇನೆ ಎಂದರು.

ಎಂತಹ ಪರಿಸ್ಥಿತಿ ಬಂದರೂ ನನ್ನ ಕ್ಷೇತ್ರದ ಜನ ಯಾವುದಕ್ಕೂ ಪರಿತಪಿಸಲು ಬಿಡುವುದಿಲ್ಲಾ. ದಯವಿಟ್ಟು ಎಲ್ಲರೂ ಮನೆಗಳಲ್ಲೇ ಉಳಿಯಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೊರೊನಾ ಮಹಾಮಾರಿಯನ್ನ ಹಿಮ್ಮೆಟ್ಟಿಸಲು ಎಲ್ಲರೂ ಒಂದಾಗಿ ಕೆಲಸ ಮಾಡೋಣಾ ಎಂದು ಕರೆ ನೀಡಿದರು.

ನನ್ನುಸಿರಿರುವ ವರೆಗೂ ನನ್ನ ಕ್ಷೇತ್ರದ ಜನಗಳಿಗೆ ಕಿಂಚಿತ್ತು ತೊಂದರೆ ಆಗದಂತೆ ನೋಡಿಕೊಳ್ಳುವ ಸಂಪೂರ್ಣ ಜವಬ್ದಾರಿ ನನ್ನದು ಎಂದು ಶಾಸಕ ಗೌರಿಶಂಕರ ಹೇಳಿದರು.

ಇದನ್ನು ಓದಿ: ಬೆಳಗುಂಬದ ಹುಡುಗರ ಬಾವಿಯ ಕತೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?