Saturday, July 27, 2024
Google search engine
Homeಮರೀಚಿಕೆನಿಜದೊಳು ಪುಗಲಿಲ್ಲ ಗಲ್ಲೇಬಾನಿಯ

ನಿಜದೊಳು ಪುಗಲಿಲ್ಲ ಗಲ್ಲೇಬಾನಿಯ

ಡಾ.ಓ.ನಾಗರಾಜು

ಬೆಳೆಸಲಿಲ್ಲ ಕರವಿಡಿದು ಒಳಗೊಳ್ಳಲಿಲ್ಲಎಂದು ಬರಿದೆ ದೂರಿದೆನಲ್ಲಓದಿಸಲಿಲ್ಲ ಬರೆಸಲಿಲ್ಲ ಬುದ್ದಿಗಲಸಿ ಮೇಲೆತ್ತಲಿಲ್ಲಎಂದೆಣಿಸಿದ ಸೆಡವಿನಲಿಬರಿದೆ ಅಂತರ ಕಾಯ್ದುಕೊಂಡೆನಲ್ಲಮುಡಿದಿದ್ದರು ಬುದ್ಧನಗೆಮಲ್ಲಿಗೆಯ ಶ್ವೇತಕುರುಳ ಶಿರೋರುಹದಲಿಮಿಂಚಿಸುತ್ತಿದ್ದರು ಅಲ್ಲಮನ ಜ್ಞಾನ ಪ್ರಭೆಯ ವೇದಿಕೆಯಲಿ ಬೆಳ್ಳಿದಾಡಿಯ ನೀವಿತೋರಿದ್ದರು ಅನಾತ್ಮನಮಳೆಬಿಲ್ಲ ಹುಬ್ಬಕುಣಿಸಿಚಂದ್ರಹಾಸನಲಿಅಬ್ಬರಿಸುತಿದ್ದರು ಅವರೆ ದಮನಿತ ದರೈಸ್ತ್ರೀ ದನಿಯಾಗಿ ದಂತ ಹೊಳಹಿನ ಕ್ರಾಂತಿ ಕಿಡಿಯಾಗಿಪರಂಪರೆಯ ದರ್ಶಿಸಿದ್ದರುಬಕಾಲನ ನುಡಿಸಿ ಬಡಿಸಿಆಯ್ದುಕೊಳಲಿಲ್ಲ ನಾವೆಚೆಲ್ಲಿದ ಅ ಆ ಸಂತನ ಚಿಂತನಾಮುತ್ತುಗಳನಿಜದೊಳು ಪುಗಲಿಲ್ಲ ಗಲ್ಲೇಬಾನಿಯಂತರಂಗಅಂಕಾಲನವಿನಾ ಜರಿದಾಡಿದೆವಲ್ಲ

ಮುಂದುವರೆಸುತ್ತಿದ್ದೆನೆ?ಜರಿಯುವುದ ಆ ಒಂದು ವಿದ್ಯಮಾನ ಜರುಗದೇ ಹೋಗಿದ್ದರೆ..!ಆ ಒಂದು ದಿನ ಇಳಿಹೊತ್ತಿನ ಅಹರ್ನಿಶಿ ಸಂಕ್ರಮಣದಲಿಸಭಾಂಗಣದ ತುಂಬೆಲ್ಲಾ ತುಳುಕಿರಲು ಆಬಾಲಾವಯೋಕಲಾಭಿಜನರ್ಕಳುತ್ರಿಕರಣಗಳ ಸಹಿತ ಅಣಿಯಾಗಿದ್ದವಲ್ಲ ಮಾಧ್ಯಮಂಗಳು..!ಬಿಡುಗಡೆ ಮಾಡಿದಹೊತ್ತಿಗೆಯ ನೆತ್ತಿಯಲಿ ಹೊತ್ತರು ಕೆ ಬಿ ಸಿದ್ದಯ್ಯನೆರೆದವರ ದಂಗುಬಡಿಸಿಕುರಂಗರಾಜನ ಪಾದವಿದುಹೊತ್ತುನಾವ್ ಮೆರೆಸದೆ ಇನ್ನಾರು ಮೆರೆಸುವರುಎಂದುಘೋಷಿಸಿ ಬಿಟ್ಟರಲ್ಲ..!ನಂಬಿ…ಕೊಚ್ಚಿಹೋಯಿತು ಕ್ಷಣದಲಿಇಲ್ಲಿವರೆಗಿನ ಸ್ವಾರ್ಥತನು ಕೊಂಪೆಯ ಅಸಹನೆಅನಾದರ ಪಂಕತುಂಬಿಕೊಂಡೆನಾಗಲೆ ಅಆ ಸಂತನಸಂಚಿತ ಠೇವಣಿಯಾಗಿ ಈಗವರು ನೆನಕೆಯ ಭಂಡಾರಖಾಲಿತನ ಎಂಬುದಿಲ್ಲ ಈಗನನ್ನೊಳಗಿರವರು ಅನಾತ್ಮಕುರಂಗನ ಸಮಕ್ಷಮದಲಿ..ಇನಿತೂ ಅಂತರವಿಲ್ಲ ಅಗೊಬರುತಿಹರು ನಮ್ಮ ಅಲ್ಲಮ..ಬರಿದೆ ದೂರಿದೆವಲ್ಲ..?

-ಡಾ.ಓ.ನಾಗರಾಜು

ಸಾಹಿತಿ -ಸಂಶೋಧಕ ರಂಗಪ್ರೇಮಿತುಮಕೂರು

9448659646dr.o.nagaraj@gmail.com

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?