Saturday, July 27, 2024
Google search engine
Homeಜಸ್ಟ್ ನ್ಯೂಸ್ನಿಮ್ಮಿಂದ ನಮ್ಮ‌ಹಳ್ಳಿಗಳಲ್ಲಿ ಏನಾಯ್ತು ಗೊತ್ತಾ?

ನಿಮ್ಮಿಂದ ನಮ್ಮ‌ಹಳ್ಳಿಗಳಲ್ಲಿ ಏನಾಯ್ತು ಗೊತ್ತಾ?

ಶಿಲ್ಪಾ ತಾರೀಕಟ್ಟೆ


covid 19,
ವ್ಯೆರಸ್ ಬಂದಿದ್ದು ವುಹಾನ್ ನಗರ ದಿಂದ ಈ ವ್ಯೆರಸ್ ಮನುಷ್ಯನ ದೇಹಕ್ಕಷ್ಟೆ ಹಾನಿ ಮಾಡಬೇಕಿತ್ತು ಆದರೆ ಜನರ ಮನುಷ್ಯತ್ವಕ್ಕೂ ಕೂಡ ಹಾನಿ ಮಾಡಿದ್ದು ಸರಿಯೇ?

ವ್ಯೆರಸ್ ಮನುಷ್ಯನಿಗೆ ಬರುವು ಬದಲು ಧಮ೯ಗಳಿಗೆ ಬಂತ ಎಂಬ ಪ್ರಶ್ನೆ ಮೂಡಿದ್ದು ಟಿ ವಿ ಮಾಧ್ಯಮಗಳಿಂದ .

ಮಾಧ್ಯಮಗಳು ಅದೇಕೆ ಅಷ್ಟು ಹೆದರಿಸಿದರು ಜನರನ್ನು, ಅದು ಹಳ್ಳಿಯ ಜನರನ್ನು ?

ಆ ಧಮ೯ದವರು ಹಬ್ಬಿಸಿದರು, ಈ ಧರ್ಮದವರು ಹಬ್ಬಿಸಿದರು ಎಲ್ಲಿ ಮಾತಿಗಿಳಿದರು ಇದೆ ವಿಚಾರ … ಒಬ್ಬರಿಂದ ಇಬ್ಬರಿಂದಾದ ತಪ್ಪಿಗೆ ಇಡೀ ಸಮುದಾಯವನ್ನು ಕೆಟ್ಟದಾಗಿ ವಣಿ೯ಸುವುದು ಅದೆಷ್ಟು ಸರಿ.

ಮನುಷ್ಯನೆ ಮಾಡಿಕೊಂಡಿರುವ ಪ್ರತಿಯೊಂದು ಜಾತಿ ಧಮ೯ ಗಳಲ್ಲೂ ಕೆಟ್ಟದ್ದನ್ನು ಮಾಡುವವರು ಮತ್ತು ಒಳ್ಳೆಯದನ್ನು ಮಾಡುವವರು ಇದ್ದಾರೆ.

ಕೆಟ್ಟದ್ದನ್ನು ಸಮುದಾಯಕ್ಕೆ ತಗಲು ಆಕುವುದು ಸಾಮಾಜಿಕವಾಗಿ ದ್ವೇಷಕ್ಕೆ ಮುನ್ನುಡಿ ಅಷ್ಟೇ .

ಧಮ೯ಗಳ ಕಚ್ಚಾಟಗಳಿಗೆ ಬಂದಿರುವ ವ್ಯೆರಸ್ ಅದೆಷ್ಟು ಆಥಿ೯ಕವಾಗಿ ನಷ್ಟ ಮಾಡಿತೆಂಬುದು ಸ್ಪಷ್ಟವಾಗಿ ಕಂಡಿದ್ದು ಹಳ್ಳಿಗಳ ಚಿತ್ರಣದಿಂದ .

ಹಳ್ಳಿಗಳಲ್ಲಿ ಹಲ ಧರ್ಮಗಳ ಸಮುದಾಯದವರು ಅದೆಷ್ಟು ಬಾಂಧವ್ಯ ಕಾಪಾಡಿಕೊಂಡಿದ್ದರು .
ನ್ಯೂಸ್ ಚಾನೆಲ್ಗಳ ಒಂದೇ ಒಂದು ಬ್ರೇಕಿಂಗ್ ನ್ಯೂಸ್ ದೊಡ್ಧ ದ್ವನಿಯಲ್ಲಿ ಅದೆಂತಹ ದ್ವೇಷವನ್ನು ಬಿತ್ತರಿಸಿದವು ಅಂದರೆ….

ಲಾಕ್ ಡೌನ್ ನ ಪರಿಣಾಮದಿಂದ ಹೆಂಗಸರು ಗಂಡಸರೂ ಮಕ್ಕಳೆನ್ನದೆ ತೆಂಗಿನಮರದಿಂದ ಕಡ್ಡಿ ಸಿಗಿದ ಕಂತೆ ಕಟ್ಟಿ ರಾಶಿಗಟ್ಟಳೆ ಕಡ್ಡಿಕೊಳ್ಳುವವರು ಇಲ್ಲದಂತಾದರು. ಊರಿಗೆ ವ್ಯಾಪಾರಕ್ಕೆ ಬಂದವರನ್ನು ಬಿಟ್ಟುಕೊಳ್ಳದೆ ಅಮಾನವೀಯತೆ ತೋರಿಸದಷ್ಟು ಮಾನವೀಯತೆ ಕಳೆದುಕೊಂಡರು.

ಹಳೇ ಹುಣಸೆ ಹಣ್ಣು ಕೊಳ್ಳವವರು ಇಲ್ಲದೆ, ಕೊಟ್ಟರೆ ಅವರು ಕೊಟ್ಟ ದುಡ್ಧಿಂದ ವ್ಯೆರಸ್ ಬಂದಿತು ಎಂಬ ಅನುಮಾನಗಳಿಗೆ ಪಾರವೆ ಇಲ್ಲದೆ ವ್ಯೆರಸ್ ಸದ್ದು ಮಾಡಿತ್ತು .

ಕೊಡುವುದು ಕೊಳ್ಳುವುದು ಹಳ್ಳಿಗಳ ದುಡಿಮೆಯ ಒಂದು ಭಾಗವೇ ಆಗಿತ್ತು .

ಹಳ್ಳಿಗಳ ಜನ ಅದೆಷ್ಟುೂ ಕೊಳ್ಳಲು ನಗರಗಳಿಗೆ ಕಾಲಿಡುವುದೆ ಇಲ್ಲ. ಹೇ ಇಲ್ಲೆ ಅವರು ಬರುತ್ತಾರೆ, ಹೇಗೊ ಹೆಚ್ಚು ಕಮ್ಮಿ ವ್ಯಾಪಾರ ಮಾಡುಬಹುದು ಎಂದು ನಂಬಿದ ಹಿಂದೂಗಳಲ್ಲೂ.

ಮತ್ತು ಹೇ, ಹಳ್ಳಿಗೆ ವ್ಯಾಪಾರಕ್ಕೆ ನಿಂತರೆ ವ್ಯಾಪರವೂ ಆಗುತ್ತದೆ ಒಂದಿಷ್ಟು ಕಾಯಿ ದಿನಸಿ ಕೊಡುತ್ತಾರೆ ಎಂದು ನಂಬಿದ ಅವರ‌ ಮನಸುಗಳಿಗೆ ಮತ್ತು ಹೊಟ್ಟೆಗೆ ಇಟ್ಟ ಮಾಧ್ಯಮಗಳ ವ್ಯೆರಸ್ ಈಗಲೂ ಚೇತರಿಸಿಕೊಳ್ಳುವುದರಲ್ಲೆ ಇದೆ.


ಧಮ೯ ಮತ್ತು ಜಾತಿಗಳು ಮನುಷ್ಯನನ್ನು ಮತ್ತು ಮಾನವೀಯತೆಯನ್ನು ಮೀರಿಸಲಾರವು, ಕಾರಣ ಜಾತಿ ಧರ್ಮ ಗಳು ಮನುಷ್ಯರಿಂದ ಮಾಡಲ್ಪಟ್ಟವು .

ಅವರು ತಂದ ಈರುಳ್ಳಿ ತರಕಾರಿ ಕೊಳ್ಳುವವರಿಲ್ಲ ಊರುಗಳಿಗೆ ತೆರಳಿದರೆ ನಮ್ಮ ಹಳ್ಳಿಗೆ ಕಾಲಿಡಬೇಡಿ ಎಂದು ಗದರಿಸಿ ಕಳುಹಿಸಿದ್ದಾರೆ ವ್ಯಾಪಾರಗಳನ್ನೆ ನಂಬಿರುವ ಮುಗ್ದ ಜನರ ಹೊಟ್ಟೆಗೆ ಪೆಟ್ಟು ಬಿದ್ದಿರುವುದು ಅಂತೂ ನಿಜ.

ಹಳ್ಳಿಗಳಲ್ಲಿ ಬೆಳೆದ ಹಲಸು ಮಾವಿನ ವ್ಯಾಪಾರಕ್ಕೂ ಒಡೆತ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರ ನಡುವೆ ದ್ವೇಷಿಸುವಂತಹ ಸ್ಥಿತಿ ನಿಮಾ೯ಣವಾಗಿದೆ.

ಒಟ್ಟಿಗೆ ಇದ್ದವರೂ ಒಬ್ಬರನ್ನೂ ಒಬ್ಬರು ಅನುಮಾನಿಸುವ ಆಗೇ ಆಯಿತು. ಇದೂ ಅವರ ಅಂಗಡಿಯೇ ಎಂದು ಗುರುತಿಸಿ ಅವರ ಅಂಗಡಿಗಳಲ್ಲಿ ಏನೂ ಕೊಳ್ಳದೆ ಮುಂದೆ ನೆಡೆದಿದ್ದೂ ಆಯಿತು.

ಹೊಬ್ಬಟ್ಟಿನ ಘಮ, ಬಿರಿಯಾನಿಯ ಸ್ವಾದದ ಬಗ್ಗೆ ಮಾತಾಡುತಿದ್ದ ಭಾಂದವರು ಇಂದು ಮಾತಾನಾಡದೆ ಅಂಜುವಂತಾಯಿತು.

ಇಂತಹದೊಂದು ಅಂತರ ಬೇಕಾಗಿದಿದ್ದು, ಜನರಲ್ಲಿದ್ದ ಮಾನವೀಯತೆ ಬಾಂಧವ್ಯಕ್ಕೆ ಅಲ್ಲ. ದೇಹವನ್ನು ಕೊಲ್ಲುವ ವ್ಯೆರಸ್ಸಿಗೆ ಮಾತ್ರ….

ಮಾಧ್ಯಮಗಳು ದ್ವೇಷ ಬಿತ್ತಿದ ಮಾತ್ರಕ್ಕೆ ನಮ್ಮಲ್ಲೆ ಮೊದಲು ಎಂದು ಡಿಬೇಟ್ ಗಳನ್ನು ಮಾಡಿದ ಮಾತ್ರಕ್ಕೆ ಜನ ಅಷ್ಟೇನೂ ತಲೆಕೆಡಿಸಿಕೊಂಡತೆ ಕಾಣುತ್ತಿಲ್ಲ.

ವ್ಯೆರಸ್ ನೊಟ್ಟಿಗೆ ಸಹಜವಾಗಿ ಬದುಕುತ್ತಲೆ ಮತ್ತೆ ಕೊಡು ಕೊಳ್ಳವಿಕೆಯನ್ನು ಮುಂದುವರೆಸಿದ್ದಾರೆ. ಹಳ್ಳಿಗಳಿಗೆ ಅವರು ಬರುತ್ತಿದ್ದಾರೆ ಕಡ್ಡಿ ಕೊಳ್ಳುತ್ತಿದ್ದಾರೆ. ನಮ್ಮೊಟ್ಟಿಗೆ ಮತ್ತೇ ಅದೇ ಸ್ನೇಹ ಬೆಸೆದಿದ್ದಾರೆ .ಒಟ್ಟಿಗೆ ಕೂತು ಟೀ ಕುಡಿಯುತ್ತಿದ್ದಾರೆ. ಅವರ ಅವರ ಸಮುದಾಯಗಳಲ್ಲಿ ಯಾರೊ ಮಾಡಿದ ತಪ್ಪುಗಳನ್ನು ಮಾಧ್ಯಮಗಳನ್ನು ಶಪಿಸುತ್ತಿದ್ದಾರೆ.

ಸಾಮಾನ್ಯರು ಮುಗ್ದರು ಮಾಡದ ತಪ್ಪು ಗಳಿಗೆ ಸ್ವಲ್ಪ ಮಟ್ಟಿಗೆ ಕಷ್ಟ ಅನುಭವಿಸುತ್ತಿದ್ದಾರೆ .

ಮಾಧ್ಯಮ ಗಳು ಸಂವಿಧಾನದ ಒಂದು ಅಂಗವೇ ಆಗಿರುವುದರಿಂದ ಆರೋಗ್ಯಕರ ಸಮಾಜವನ್ನು ಕಾಪಾಡುವ ಪ್ರಜ್ಞೆ ಇಟ್ಟುಕೊಳ್ಳವುದು ತುಂಬಾ ಮುಖ್ಯ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?