ಪಾವಗಡ: ತಾಲ್ಲೂಕಿನ ಹಲವೆಡೆ ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು.
ಪಟ್ಟಣದ ಶಿರಾ ರಸ್ತೆಯ ಆಜಾದ್ ನಗರದಲ್ಲಿರುವ ಮಿಫ್ತಾ ಉಲೂಂ ಅರಬ್ಬಿಕ್ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಸಸಿ ನೆಡಲಾಯಿತು.
ಕಾಲೇಜು ಅಧ್ಯಕ್ಷ ಇದಾಯತ್ ಉಲ್ಲಾ, ಕಾರ್ಯದರ್ಶಿ ಷಾಕೀರ್, ಹಜರತ್ ಅಶಿಕ್ ರಜಾ, ನಿಸಾರ್, ಯೂನಸ್, ಅರೂನ್, ಶಕೀಲ್, ಜಬ್ಬಾರ್ ಇದ್ದರು.
https://youtu.be/yBEgPU_OMuE
ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸರಳವಾಗಿ ಪರಿಸರ ದಿನಾಚರಣೆ ಆಚರಿಸಲಾಯಿತು.
![]()
ತಿರುಮಣಿ ಟಾಟಾ ಸೋಲಾರ್ ಪಾರ್ಕ್ ನಲ್ಲಿ ತಾಲ್ಲೂಕು ಹೆಲ್ಪ್ ಸೊಸೈಟಿ ವತಿಯಿಂದ ಸಸಿ ನೆಡಲಾಯಿತು. ಟಾಟಾ ಕಂಪನಿಯ ಹರಿಕೃಷ್, ರವಿಕುಮಾರ್, ಅನಿಲ್ ಕುಮಾರ್, ಶಶಿಕಿರಣ್ ಉಪಸ್ಥಿತರಿದ್ದರು.