ಜಸ್ಟ್ ನ್ಯೂಸ್

ಪಾವಗಡ; ಜ್ಯೇಷ್ಠಾದೇವಿ, ಶನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ

ಪಾವಗಡ: ಪಟ್ಟಣದಲ್ಲಿ ಭಾನುವಾರ  ಜ್ಯೇಷ್ಠಾದೇವಿ ಸಹಿತ ಶನೈಶ್ಚರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಬ್ರಹ್ಮ ರಥೋತ್ಸವದ ಅಂಗವಾಗಿ  ಶನಿವಾರ ಜ್ಯೇಷ್ಠಾದೇವಿ, ಶನೈಶ್ಚರ ಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಪಂಚಾಮೃತ ಅಭಿಷೇಕ, ಚಂಡಿಹೋಮ,  ಸತ್ಯನಾರಾಯಣ ವ್ರತ, ಸೂರ್ಯಾರಾಧನೆ, ಎಲೆ ಪೂಜೆ, ಪೂರ್ಣಾಹುತಿ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆಯಿತು.

https://www.youtube.com/watch?v=24KoCrsvV9k

ಹೋಮ, ಮಹಾ ಮಂಗಳಾರತಿ ನಂತರ ವಾದ್ಯ ಗೋಷ್ಠಿಯೊಂದಿಗೆ ಉತ್ಸವ ಮೂರ್ತಿಗಳನ್ನು ರಥದ ಬಳಿಗೆ ಕರೆತರಲಾಯಿತು. ರಥೋತ್ಸವದಲ್ಲಿ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನೆರೆದಿದ್ದ  ಭಕ್ತರು  ದವನ ಸಿಕ್ಕಿಸಿದ್ದ ಬಾಳೆಹಣ್ಣನ್ನು ರಥದತ್ತ  ಎಸೆದರು.

ದೇಗುಲವನ್ನು ವಿವಿಧ ಹೂಗಳು,  ಬಣ್ಣದ ರಂಗೋಲಿಗಳಿಂದ ಅಲಂಕರಿಸಲಾಗಿತ್ತು.

 

Comment here