Thursday, April 25, 2024
Google search engine
Homeಜನಮನಪೌರತ್ವ ನೋಂದಣಿ: ಈ ದಾಖಲೆ ಬೇಕೇ ಬೇಕು

ಪೌರತ್ವ ನೋಂದಣಿ: ಈ ದಾಖಲೆ ಬೇಕೇ ಬೇಕು

ಕೆ.ಇ.ಸಿದ್ದಯ್ಯ


ದೇಶಾದ್ಯಂತ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಜಾರಿ ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು, ವಿವಿಧ ಕ್ಷೇತ್ರಗಳ ಗಣ್ಯರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪ್ರೊಫೆಸರ್ ಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ನಡುವೆಯೇ ರಾಜ್ಯಸಭೆಯಲ್ಲಿಂದು ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ರಾಷ್ಟ್ರಪತಿ ಅಂಕಿತವೂ ಸಿಕ್ಕಿದೆ.

ಈಗಾಗಲೇ ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಮೊದಲ ಬಾರಿಗೆ ಪೌರತ್ವ ನೋಂದಣಿ ಕೈಗೊಂಡಾಗ 40 ಲಕ್ಷ ಮಂದಿ ಪಟ್ಟಿಯಿಂದ ಹೊರಗಿದ್ದರು.

ನಂತರ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಚಾಲನೆ ನೀಡಲಾಯಿತು. ಈ ಕ್ರಮದಿಂದ ಬಹುತೇಕ ಮಂದಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿದ್ದು, ಇನ್ನೂ 20 ಲಕ್ಷ ಮಂದಿ ಪಟ್ಟಿಯಿಂದ ಹೊರಗಿದ್ದಾರೆ. ಇವರನ್ನು ಸೇರಿಸಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಇಷ್ಟೆಲ್ಲಾ ವಿರೋಧಗಳ ನಡುವೆಯು ಭಾರತೀಯ ಜನತಾ ಪಕ್ಷ ಮತ್ತು ಭಾರತ ಸರ್ಕಾರ ಇಡೀ ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಜಾರಿಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಹಾಕುತ್ತಲೇ ಇದೆ.

ದೇಶದಲ್ಲಿ ಮೊದಲ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ಪೌರತ್ವ ನೋಂದಣಿಗೆ ಚಾಲನೆ ದೊರೆತಿದೆ. ಕರ್ನಾಟಕದಲ್ಲೂ ಜಾರಿಯ ಪ್ರಕ್ರಿಯೆಗೆ ಈಗಾಗಲೇ‌ ಚಾಲನೆ ದೊರೆತಿದೆ. ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಬಂಧನ ಕೇಂದ್ರ ಸ್ಥಾಪಿಸಲಾಗಿದೆ.

ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವವರನ್ನು ದೇಶದಿಂದ ಹೊರಹಾಕುವ ಉದ್ದೇಶದಿಂದ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಧರ್ಮದ ಆಧಾರದ ಮೇಲೆ ದೇಶವನ್ನು ಛಿದ್ರಗೊಳಿಸುವ ಯತ್ನ ನಡೆಯುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಅಸ್ಸಾಂ ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲಾಗಿದ್ದು ಅದೇ ಮಾದರಿಯನ್ನು ಇಡೀ ದೇಶಾದ್ಯಂತ ಅನುಸರಿಸಲಾಗುವುದೇ ಎಂಬ ಬಗ್ಗೆ ಈವರೆಗೆ ಯಾವುದೇ ತೀರ್ಮಾನಗಳನ್ನು ಭಾರತ ಸರ್ಕಾರ ಪ್ರಕಟಿಸಿಲ್ಲ ಮತ್ತು ಸ್ಪಷ್ಟಪಡಿಸಿಲ್ಲ. ಭಾರತ ಭಿನ್ನ ದೇಶವಾಗಿರುವುದರಿಂದ ಅಸ್ಸಾಂನಲ್ಲಿ ಅನುಸರಿಸಿದ ಮಾನದಂಡಗಳನ್ನು ಇಡೀ ದೇಶಕ್ಕೇ ಅನ್ವಯಿಸಲು ಬರುವುದಿಲ್ಲ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

1971 ಮಾರ್ಚ್ 24ರಂದು ಮಧ್ಯಾರಾತ್ರಿ 12 ಗಂಟೆಯ ಓಲಗೆ ವಲಸೆ ಬಂದವರು ಈ ದೇಶದಲ್ಲಿಯೇ ಉಳಿಯಲು ಅವಕಾಶ ಕಲ್ಪಿಸಲಾಗಿದೆ. ಅದರ ನಂತರ ಅಂಚರೆ ಮಾರ್ಚ್ 24ರ ನಂತರ ವಲಸೆ ಬಂದವರನ್ನು ದೇಶದಿಂದ ಹೊರಹಾಕಬೇಕು ಎಂಬುದನ್ನು 1986ರಲ್ಲಿ ಮಾಡಿಕೊಂಡ ಅಸ್ಸಾಂ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆಯೇ ಈವರೆಗೂ ಭಾರತ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಆದರೆ ನವೆಂಬರ್ 21ರಂದು ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಇಡೀ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದರು. ಅದು ನವೆಂಬರ್ 22ರಂದು ಎಲ್ಲಾ ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮದಲ್ಲಿ ಮುಖಪುಟದಲ್ಲಿ ಹೆಡ್ ಲೈನ್ ಗಳಾಗಿ ಪ್ರಕಟವಾಗಿದ್ದವು.

ಹಾಗಾದರೆ ರಾಷ್ಟ್ರೀಯ ಪೌರತ್ವ ನೋಂದಣಿಗೆ ಬೇಕಾಗುವ ದಾಖಲೆಗಳು ಯಾವುವು? ಅವುಗಳನ್ನು ಯಾರಿಂದ ಪಡೆದಿರಬೇಕು ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಬೇರೆ ದೇಶ ಮತ್ತು ರಾಜ್ಯಗಳಿಂದ ಬಂದವರು ಯಾವ ದಾಖಲೆಗಳನ್ನು ನೀಡಬೇಕೆಂಬ ಬಗ್ಗೆ ತಿಳಿಯೋಣ. ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ.

ಈ‌ ದಾಖಲೆಗಳು ಬೇಕು


1) ಎರಡು ವಿಭಿನ್ನ ರಾಜ್ಯಗಳಿಂದ ಬಂದ ಪೋಷಕರು ತಮ್ಮ ಕುಟುಂಬದ ವಂಶವೃಕ್ಷವನ್ನು ನೀಡಲು ಅವಕಾಶ ನೀಡಲಾಗಿದೆ.

2)ಅಸ್ಸಾಂ ರಾಜ್ಯದಲ್ಲಿ ನೂರಾರು ರಾಷ್ಟ್ರೀಯ ಪೌರತ್ವ ನೋಂದಣಿ ಸೇವಾ ಕೇಂದ್ರಗಳ ಮೂಲಕ ಅರ್ಜಿಗಳನ್ನು ವಿತರಿಸಿ ಅಸ್ಸಾಂ ಒಪ್ಪಂದದ ಪ್ರಕಾರ ವಿಶೇಷ ಪೌರತ್ವಕ್ಕೆ ನಿಗದಿಗೊಳಿಸಿದ ದಿನಾಂಕದೊಳಗೆ ವಾಸಿಸುತ್ತಿದ್ದವರು ಮಾತ್ರ ಇಲ್ಲೇ ಉಳಿಯಬಹುದು. ಅದಕ್ಕೆ ಸೂಕ್ತ ದಾಖಲೆಗಳು ಬೇಕು.ಅರ್ಜಿದಾರರು 14 ದಾಖಲೆಗಳನ್ನು ಪೌರತ್ವ ನೋಂದಣಿ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು.

ಅವುಗಳನ್ನು ಸಂವಿಧಾನದಿಂದ ಪ್ರದತ್ತವಾಧ ಅಧಿಕಾರ ಹೊಂದಿರುವ ಅಧಿಕಾರಿಗಳು ನೀಡಿರಬೇಕು.

1) 1951ರ ರಾಷ್ಟ್ರೀಯ ಪೌರತ್ವ ನೋಂದಣಿ ದೃಡೀಕರಣ ಪತ್ರ2) ಮಾರ್ಚ್ 24, 1971ರ ಮತದಾರರ ಪಟ್ಟಿ

3) ಭೂಮಿ ಮತ್ತು ಹಿಡುವಳಿ ದಾಖಲೆಗಳು

4) ಪೌರತ್ವ ದೃಢೀಕರಣ ಪತ್ರ

5) ಶಾಶ್ವತ ನಿವಾಸಿ ಸರ್ಟಿಫಿಕೇಟ್

6) ನಿರಾಶ್ರಿತರ ನೋಂದಣಿ ಧೃಢೀಕರಣ ಪತ್ರ

7) ಸರ್ಕಾರ ವಿತರಿಸಿರುವ ಸೇವಾ/ ಉದ್ಯೋಗ ಸರ್ಟಿಫಿಕೇಟ್

8) ಬ್ಯಾಂಕ್ ಅಥವಾ ಅಂಚೇ ಕಚೇರಿ ಖಾತೆ ಪುಸ್ತಕ

9) ಜನನ ಪ್ರಮಾಣ ಪತ್ರ

10) ರಾಜ್ಯ ಶಿಕ್ಷ ಮಂಡಳಿ ಮತ್ತು ವಿಸ್ವವಿದ್ಯಾಲಯ ನೀಡಿರುವ ಶಿಕ್ಷಣ ಪತ್ರ

11) ನ್ಯಾಯಾಲಯದ ದಾಖಲೆಗಳು / ಪ್ರಕ್ರಿಯೆಗಳು

12) ಪಾಸ್ ಪೋರ್ಟ್

13) ಜೀವ ವಿಮಾ ಪಾಲಿಸಿ/ ಎಲ್ಐಸಿ ಪಾಲಿಸಿ

14) ಸರ್ಕಾರ ವಿತರಿಸಿರುವ ಪರವಾನಗಿ / ಸರ್ಟಿಫಿಕೇಟ್ಇದರ ಜೊತೆಗೆ ತಂದೆ ಅಥವಾ ತಾತನಿಗೆ ಸಂಬಂಧಿಸಿದ 1971 ಮಾರ್ಚ್ 24ರೊಳಗಿನ ದಾಖಲೆಗಳು ಇರಬೇಕು.

ಒಂದು ಅಥವಾ ಹೆಚ್ಚು ದಾಖಲೆಗಳು ಇದ್ದರೆ ಅಂಥವರನ್ನು ಬಿ. ಪಟ್ಟಿಗೆ ಸೇರಿಸಲಾಗುವುದು. ಈ ಬಿ ಪಟ್ಟಿಗೆ ಸೇರಲು ಬೇಕಾಗುವ ದಾಖಲೆಗಳು ಹೀಗಿವೆ.-

ಜನನ ಪ್ರಮಾಣ ಪತ್ರ- ಭೂಮಿ ದಾಖಲೆಗಳು- ಮಂಡಳಿ ಅಥವಾ ವಿಶ್ವವಿದ್ಯಾಲಯ ನೀಡಿದ ಪತ್ರ- ಬ್ಯಾಂಕ್ ಅಥವಾ ಎಲ್ಐಸಿ / ಅಂಚೇ ಕಚೇರಿ ದಾಖಲೆ- ವಿವಾಹವಾಗಿದ್ಲರೆ ವಲಯ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ- ಮತದಾರರ ಪಟ್ಟಿ- ಪಡಿತರ ಚೀಟಿ ಅಥವಾ ಕಾನೂನುಬದ್ದ ದಾಖಲೆ- ಒಂದೊಮ್ಮೆ ಪತ್ನಿ ಬೇರೆ ಸ್ಥಳದಲ್ಲಿ ವಿವಾಹವಾಗಿದ್ದರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಮುಖ್ಯವಾಗಿ ಬಿ ಪಟ್ಟಿಯಲ್ಲಿ ಸಂಪರ್ಕ ಹೊಂದಿರುವ ದಾಖಲೆಗಳಿರಬೇಕು. ಇದಕ್ಕು ಎರಡ ದಾಖಲೆಗಳು ಅಗತ್ಯ.1) ವಲಯ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪತ್ರ. ಅದು ಮಹಿಳೆ ಮದುವೆಯಾಗಿರುವುದನ್ನು ಸಮರ್ಥಿಸುವುದಾಗಿರಬೇಕು. ಅದು 1971 ಮಾರ್ಚ್ 24ರ ಮೊದಲಿನದಾಗಿರಬೇಕು.

2) 1971ಕ್ಕೂ ಮೊದಲು ವಿತರಿಸಿರುವ ಪಡಿತರ ಚೀಟಿ
ಪೌರತ್ವ ಕಾಯ್ದೆ 1955ರ ಸೆಕ್ಷನ್ 6ಎಯಲ್ಲಿ ಉಲ್ಲೇಖಿಸಿರುವಂತೆ ವಿಶೇಷ ಪೌರತ್ವಕ್ಕೆ ಕಟ್ ಆಫ್ ಡೇಟ್ ನಿಗದಿಗೊಳಿಸಿದೆ. ಈ ಕಾಯ್ದೆಯನ್ನು 1987ರಲ್ಲಿ ತಿದ್ದುಪಡಿ ಮಾಡಲಾಗಿದೆ.ಹೀಗಾಗಿ ಅದು ಕೆಲ ಬದಲಾವಣೆಗಳನ್ನು ಹೊಂದಿದ್ದು ಸಹಕಾರಿಯಾಗಬಹುದು. ರಾಷ್ಟ್ರೀಯ ಪೌರತ್ವ ನೋಂದಣಿ ಪರೀಕ್ಷೆಯನ್ನು ದೇಶವ್ಯಾಪಿ ಒಂದೇ ಮಾಧರಿಯಲ್ಲಿ ಬರುವುದಿಲ್ಲ.ಯಾಕೆಂದರೆ ಬಡವರು, ಅಲೆಮಾರಿಗಳು, ಆದಿವಾಸಿಗಳು, ಮಹಿಳೆ ಮತ್ತು ದೊಡ್ಡ ವಿಸ್ತಾರ ಹೊಂದಿರುವುದರಿಂದ ಒಂದೇ ಮಾದರಿಯ ಪೌರತ್ವ ನೋಂದಣಿ ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?