Saturday, July 27, 2024
Google search engine
Homeಸಾಹಿತ್ಯ ಸಂವಾದಕವನಪ್ರಕೃತಿ ಪುರಷ

ಪ್ರಕೃತಿ ಪುರಷ

ದೇವರಹಳ್ಳಿ ಧನಂಜಯ


ಎನಗಿಂತಕಿರಿಯರಿಲ್ಲ
ಮೇಲು ಕೀಳಿನ ವ್ಯಸನ
ಸನಿಹ ಸುಳಿಯಲಿಲ್ಲ
ಎಲ್ಲರೂ ನನ್ನವರೆಂಬ ಹೃದಯ ನಿವೇದನೆ
ಎಲ್ಲರ ಒಳಿತಿಗಾಗಿ ತೆರೆದು ತೋಳಿನ
ಪ್ರಾರ್ಥನೆ
ಬೆಳೆದು ನಿಂತ ವೃಕ್ಷ ಸೂತ್ರ

ಎಲ್ಲರ ಅರಿವಲೂ ಇರುವೆ.
ನೀನಿಲ್ಲದ ಉಸಿರೇ ನಿಂತಂತೆ
ಎಲ್ಲೂ ಕಾಣದೆ ಇರುವೆ.
ಕಾಯ ದೇಗುಲದ ಕಾಯಕ ಪೂಜೆ
ನಿರಂತರ.
ಜಾತಿ ಮತಗಳ ಗುಡಿ ಗಡಿ ದಾಟಿದ
ಸರದಾರ.
ಉಳುವ ಜೋಡೆತ್ತಿನಲೂ ಉಳಿದಿರುವೆ

ತನ್ನ ಖುಷಿಗೆ ತಾನೆಂಬಂತೆ
ಹರಿಯುತಿರುವೆ
ಮನದ ಕೊಳೆಯ ತೊಳೆಯುತಿರುವೆ
ಮುಟ್ಟು ತಟ್ಟುಗಳ ಮೀರಿ
ಎಲ್ಲರಿಗೂ ಬೇಕಿರುವ
ಜೀವ ಜಲ ನೀನು.
ಬೆಳೆದು ಹಬ್ಬಲಿ ನಿನ್ನಿಂದ
ಹಳೆ ಬೇರು ಹೊಸ ಚಿಗುರು.

ನೀ ಮಣ್ಣು. ಈ ನೆಲದ ಕಣ್ಣು.
ಎದೆಯ ಹದಗೊಳಿಸಿ,
ಹೊಸ ಸೃಷ್ಠಿಗೆ ಒಕ್ಕಲು ಮಾಡಿರುವೆ.
ಮಾತು ಸೂತಕವಾಗದ
ಅನುಭವ ಜನ್ಯ ವಚನ ಜ್ಞಾನ.
ಜಗದಗಲ ಬಿತ್ತಿ ಬೆಳೆದಿದೆ.
ಎಲ್ಲರೊ ಳಗೂ ನೆಲೆಯಾಗುವ
ನೆಲದ ಕಣ್ಣ ತೆರೆದಿರುವೆ.

ಮುಗಿಲಗಳ ಬೆಳೆದಿರುವ ಗುರುವೇ
ನೀನು ಒಳ ಹೊರಗನು
ಒಂದು ಮಾಡಿದ ಬಯಲು
ಅಂತರಂಗ ಬಹಿರಂಗದ ಶುದ್ಧಿ
ಬೆವರ ದ್ವೇಷಿ ಆಚಾರ ಅನಾಚಾರ
ಮನುತನವ ಕಳಚಿ
ಮಾನವತೆ ಮೆರೆದ ಜಗದ್ಗುರು

ಎಲ್ಲರೂಳಗೂ ಬೆಳಗು ಪರಂಜ್ಯೋತಿ
ದೇಗುಲ ದೇಹದ ಎದೆಗೂ ಡಲ್ಲಿ
ಬೆಳಗುತ್ತಿರುವ ಕರುಣೆಯಮೂರ್ತಿ
ಸೃಷ್ಠಿ ಸೂತ್ರದ ಇಸ್ಟಲಿಂಗದಿ
ಪ್ರಕೃತಿಯ ಸರಳ ಪಾಠ
ಎಲ್ಲರೊಳೊಂದಾಗುವ ಬೆಚ್ಚಗಿನ
ಪ್ರೀತಿ ಹೇಳಿಕೊಟ್ಟ ಗುರುವೇ
ನಿನಗೆ ಶರಣು ಶರಣಾರ್ಥಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?