Wednesday, July 24, 2024
Google search engine
Homeನಮ್ಮೂರುಬಸವಣ್ಣ ದೇವರ ಮಠದಲ್ಲಿ ನಡೆದೇ ಹೋಯಿತು ಪವಾಡ

ಬಸವಣ್ಣ ದೇವರ ಮಠದಲ್ಲಿ ನಡೆದೇ ಹೋಯಿತು ಪವಾಡ

ಮಹೇಂದ್ರ ಕೃಷ್ಣಮೂರ್ತಿ


ನೆಲಮಂಗಲ: ಇಲ್ಲಿನ ಬಸವಣ್ಣ ದೇವರಮಠ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಈ ಮಠ ಪವಾಡ ದೇವರ ಬಸವಣ್ಣನ ಮಠ ಎಂದೇ ಖ್ಯಾತಿ ಗಳಿಸಿದೆ.

ಕರೊನಾ ಸಂಕಷ್ಟದಲ್ಲಿ‌ ಮಠದಲ್ಲಿ ಪವಾಡವೊಂದು ನಡೆದಿದೆ. ಅದೇನು ಎಂಬುದನ್ನು ಮುಂದೆ ಓದಿ.

ಈ ಮಠದ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿಗಳು ಇಲ್ಲಿ ಜನಾನುರಾಗಿಗಳು. ಈ ಭಾಗದಲ್ಲಿ ಶ್ರೀಗಳ ಹೆಸರು ಕೇಳದವರೇ ಇಲ್ಲ.

ಈ ಮಠಕ್ಕೆ ಹೆಸರು ಬಂದಿರುವುದೇ ಇಲ್ಲಿ ನಡೆದಿದ್ದ ಪವಾಡಗಳ ಕಾರಣದಿಂದ. ಹೀಗಾಗಿ ಈ ಮಠ ಪವಾಡ ಬಸವಣ್ಣ ದೇವರ ಮಠ ಎಂದೇ ಖ್ಯಾತಿಗಳಿಸಿದೆ. ಅನಾದಿ ಕಾಲದಿಂದಲೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ತುಮಕೂರಿನ ಸಿದ್ದಗಂಗಾ ಮಠದ ಅಧೀನ ಮಠವೆಂದೇ ಈ ಮಠವನ್ನು ಇಲ್ಲಿನ ಜನರು ಕರೆಯುತ್ತಾರೆ. ಮಠಾದೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಜನರ ನಡುವೆ ದೇವರಂತೆ ಕಾಣುತ್ತಾರೆ. ಜನರ ಕಷ್ಟ ಸುಖಗಳನ್ನು ಆಲಿಸುತ್ತಾರೆ.

ಇಷ್ಟಾಗಿಯೂ, ಅನ್ನದಾಸೋಹದ ಕೇಂದ್ರವಾಗಿ ಮಠ ಯಾವತ್ತೂ ಗಮನ ಸೆಳೆದಿರಲಿಲ್ಲ. ಆದರೆ ಶಿಕ್ಷಣ ದಾಸೋಹದ ಕೇಂದ್ರವಾಗಿ ಈ ಮಠ ಗಮನ ಸೆಳೆಯುತ್ತಿತ್ತು. ಕರೋನಾ ಈ ಮಟ್ಟದಲ್ಲಿ ಒಂದು ಪವಾಡವನ್ನೇ ಸೃಷ್ಟಿಸಿಬಿಟ್ಟಿದೆ .


ಪವಾಡ ಬಸವಣ್ಣ ದೇವರ ಮಠದಲ್ಲಿ ಅನ್ನ ದಾಸೋಹದ ಕೆಲಸಕ್ಕಿಂತ ಬೇರೇನೂ ಬೇಕಿಲ್ಲ. ಇದು ಪವಾಡ ಬಸವಣ್ಣ ದೇವರ ಅರ್ಶೀವಾದ ಎಂದು ತಿಳಿದಿದ್ದೇನೆ ಎನ್ನುತ್ತಾರೆ ಎಚ್. ಬಿ. ಮಂಜುನಾಥ್.

ಶ್ರೀಗಳು ಹೇಳಿದ ತಕ್ಷಣವೇ ನಾವೆಲ್ಲರೂ ನೆರವಾಗಲು ಮುಂದಾದೆವು. ಇದು ನನ್ನೊಬ್ಬನಿಂದ ನಡೆಯುತ್ತಿರುವ ಕೆಲಸವಲ್ಲ. ನನ್ನ ಸ್ನೇಹಿತರು ನೂರಾರು ಭಕ್ತರು ಸೇರಿಕೊಂಡು ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದೇವೆ. ಶ್ರೀಗಳು ಇದರ ನೇತೃತ್ವವನ್ನು ವಹಿಸಿದ್ದಾರೆ ಎನ್ನುತ್ತಾರೆ ಅವರು.


ಕರೊನಾ ಕಾಲದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರಿಗೆ ಏನಾದರೂ ಮಾಡಬೇಕೆಂಬ ಸಂಕಲ್ಪವನ್ನು ಸ್ವಾಮೀಜಿ ದೇವರ ದೇವರ ಮುಂದೆ ಮಾಡಿಕೊಂಡರಂತೆ. ಅಷ್ಟೇ, ಏಕಾಏಕಿ ದಾನಿಗಳೇ ಮುಂದೆ ಬಂದು ಬಿಟ್ಟರು ಎನ್ನುತ್ತಾರೆ ಶ್ರೀಗಳು.

ಯಾವ ಮಠಗಳು ಈಗ ಅನ್ನ ದಾಸೋಹದ ಕೆಲಸ ಮಾಡುತ್ತಿಲ್ಲ. ಆದರೆ ಈ ಮಠ ಪ್ರತಿದಿನ ಸಾವಿರ ಜನ ಬಡವರು, ಕೂಲಿ ಕಾರ್ಮಿಕರು ಇದ್ದಲ್ಲಿಗೆ ಊಟ ಕೊಡುವ ಕೆಲಸ ಮಾಡುತ್ತಿದೆ.

ಹಸಿವಿನಿಂದ ಬಳಲುವ ಜನರಿಗೆ ಊಟ ಕೊಡಬೇಕೆಂದು ಸಂಕಲ್ಪ ಮಾಡಿದ ಮರು‌‌ದಿನವೇ ಮಠಕ್ಕೆ ಬಂದ ಭವಾನಿಶಂಕರ್ ಗ್ರೂಪ್ ನ ಮಂಜುನಾಥ್ ಅವರಿಗೆ ಮಠದಿಂದ ಅನ್ನದಾಸೋಹ ವ್ಯವಸ್ಥೆ ಮಾಡುವ ಬಗ್ಗೆ ಕನಸುಗಳನ್ನು ಹಂಚಿಕೊಂಡೆ. ಅವರು ಒಪ್ಪಿಗೆ ಬಿಟ್ಟರು. ಅವರೊಂದಿಗೆ ನೆಲಮಂಗಲದ ಪ್ರಾಧಿಕಾರದ ಅಧ್ಯಕ್ಷ ಮಲ್ಲಣ್ಣ, ಹರ್ಷ, ನಿಶಾಂತ್ ಸೋಮಶೇಖರ್ ದೊಡ್ಡ ಮಟ್ಟದಲ್ಲಿ ಕೈ ಜೋಡಿಸಿದರು. ಇನ್ನೂ ನಾಲ್ಕಾರು ದಾನಿಗಳು ಮುಂದೆ ಬಂದರು. ಇವರೊಂದಿಗೆ ಈಗ ನೂರಾರು ಭಕ್ತರು ಕೈ ಜೋಡಿಸಿದ್ದಾರೆ. ಹೀಗೆ ಆರಂಭವಾಯಿತು ಅನ್ನದಾಸೋಹ ಎಂದು ಹೇಳುತ್ತಾರೆ ಶ್ರೀಗಳು.

ಇದೊಂದು ಪವಾಡವೇ ಸರಿ. ಈಗ ಪ್ರತಿದಿನ ಹಸಿದವರಿಗೆ ಮಠದಿಂದ ಊಟ ಹಾಕಲಾಗುತ್ತಿದೆ. ಇಲ್ಲಿಯವರೆಗೂ ಶಿಕ್ಷಣ ದಾಸೋಹದ ಕೇಂದ್ರವಾಗಿ ಗಮನ ಸೆಳೆದ ಮಠ ಈಗ ಅನ್ನದಾಸೋಹದ ಕೇಂದ್ರವಾಗಿ ಗಮನ ಸೆಳೆದಿದೆ. ಇದು ಪವಾಡ ಅಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ ಇಲ್ಲಿನ ಭಕ್ತರು.

ಇದನ್ನೂ ಓದಿ

ಮಠದ ಜತೆ ನನ್ನ ಸಂಪರ್ಕ ತುಂಬಾ ವರ್ಷಗಳಿಂದಲೂ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಮಠ ತುಂಬಾ ಹೆಸರು ಮಾಡಿದೆ. ಈಗ ಅನ್ನದಾಸೋಹ ಆರಂಭವಾಗಿರುವುದು ಹರ್ಷ ತಂದಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ ಎನ್ನುತ್ತಾರೆ ಭಕ್ತ ಸತೀಶ್ ಯಲಚಗೆರೆ.

ಮಠ ಅಧ್ಯಾತ್ಮಿಕ ಹಸಿವನ್ನಷ್ಟೇ ತೀರಿಸುತ್ತಿಲ್ಲ. ಈಗ ಹೊಟ್ಟೆ ಹಸಿವನ್ನು ತೀರಿಸಲು ಮುಂದಾಗಿದೆ. ಮಠದ ಅನ್ನ ದಾಸೋಹದ ಈ ದೀಪ ಇನ್ನೂ ಹೀಗೆ ಬೆಳಗಲಿ ಎನ್ನುತ್ತಾರೆ ದಾನಿಗಳಾದ ಎಚ್.ಬಿ.ಮಂಜುನಾಥ್.

ಮಠದ ಅನ್ನ ದಾಸೋಹದ ಸುದ್ದಿ ಕೇಳಿ ಮಠಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಶ್ರೀಗಳ ಆರ್ಶೀವಾದ ಪಡೆದರು. ಮಠದ ಕೆಲಸ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಮಠವೊಂದು ಈ ರೀತಿ ತಾನೇ ಸ್ವಯಂ ಮುಂದೆ ನಿಂತು ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿರುವುದು ಇದೇ ಮೊದಲಾಗಿದೆ ಎಂದರು.

ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಅನೇಕ ರಾಜಕೀಯ ಧುರೀಣರು, ಸಮಾಜ ಸೇವಕರು ಗಣ್ಯ ವ್ಯಕ್ತಿಗಳು ಮಠಕ್ಕೆ ಬಂದು ವ್ಯವಸ್ಥೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಶೀಗಳ ಕಾರ್ಯಕ್ಕೆ ತಲೆದೂಗುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?