Saturday, July 27, 2024
Google search engine
Homeಜಸ್ಟ್ ನ್ಯೂಸ್ಬಿಜೆಪಿ ವಿರುದ್ಧ ಸಿಪಿಎಂ‌ ಜಟಾಪಟಿಗೆ ಇಳಿದಿರುವುದು ಏಕೆ?

ಬಿಜೆಪಿ ವಿರುದ್ಧ ಸಿಪಿಎಂ‌ ಜಟಾಪಟಿಗೆ ಇಳಿದಿರುವುದು ಏಕೆ?

ತುಮಕೂರು: ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹೋಗಲು ಬಿಡದೆ ಬಿಲ್ಡರಗಳ ಜೀತದಾಳುಗಳನ್ನಾಗಿಸಲು ರಾಜ್ಯ ಸಕಾ೯ರವು ಹೊರಟಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಗಂಭೀರ ಆರೋಪ ಮಾಡಿವೆ.

ವಲಸೆ ಕಾಮಿ೯ಕರನ್ನು ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗದಂತೆ ತಡೆಯ ಬೇಕೆಂಬ ಮುಖ್ಯ ಮಂತ್ರಿಗಳ ಆದೇಶದಂತೆ ಪೋಲಿಸ್ ಅಧಿಕಾರಿಗಳು, ಮತ್ತಿತರೆ ಅಧಿಕಾರಿಗಳು ತಮ್ಮ ರಾಜ್ಯಗಳಿಗೆ ಹೊರಟು ರೈಲುಗಳ ಸೇವೆಗಾಗಿ ಒತ್ತಾಯಿಸುತ್ತಿದ್ದವರನ್ನು ದೂರದ ಮಾದಾವರ ಬಳಿಯ ಬಿಐಇಸಿಯಲ್ಲಿ ಕೂಡಿಹಾಕಿ, ಮೊದಲಿಗೆ ಕಳುಹಿಸುವುದಾಗಿ ಹೇಳಿ, ಆನಂತರ ಸಚಿವರಾದ ಆರ್. ಅಶೋಕ್ ರವರು ಬಿಹಾರ ಮುಖ್ಯ ಮಂತ್ರಿಯವರು ಒಪ್ಪದ ಕಾರಣ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿ, ತದನಂತರ ರೈಲಿನ ವ್ಯವಸ್ಥೆ ಮಾಡಿ ತಮಗೆ ಬೇಕಾದ ಕಟ್ಟಡ ಕಾಮಿ೯ಕರಲ್ಲದವರನ್ನು ಕಳುಹಿಸಿ ಉಳಿದವರನ್ನು ಹೆದರಿಸಿ ಬೆದರಿಸಿ, ಕೆಲವರನ್ನು ಆಹಾರ ಪದಾರ್ಥಗಳ ಕಿಟ್ ನೀಡಿ ಕೆಲಸದ ಸ್ಥಳಗಳಿಗೆ ಬಸ್ಗಳಲ್ಲಿ ತುಂಬಿ ಕಳುಹಿಸಿದ್ದಾರೆ.

ನಾಳೆಯ ರೈಲನ್ನು ಹೊರತು ಪಡಿಸಿ ಉಳಿದೆಲ್ಲಾ ರೈಲುಗಳನ್ನು ರದ್ದುಪಡಿಸಲು ರೈಲ್ವೆ ಇಲಾಖೆಯನ್ನು ರಾಜ್ಯ ಸಕಾ೯ರವು ಕೋರಿದೆ. ಆ ಮೂಲಕ ಅಂತರ ರಾಜ್ಯ ವಲಸೆ ಕಾಮಿ೯ಕರಿಗಿದ್ದ ರೈಲುಗಳನ್ನು ಇಲ್ಲದಾಗಿಸಿ ವಂಚಿಸಿದೆ. ಬಿಲ್ಡರಗಳ ಹಿತವೇ ರಾಜ್ಯ ಬಿಜೆಪಿ ಸಕಾ೯ರಕ್ಕೆ ಪ್ರಧಾನವಾಗಿದೆ ಎಂಬುದನ್ನು ಸಾಬೀತು ಮಾಡಿದೆ.

ಲಾಕ್ಡೌನ್ ಆರಂಭವಾದೊಡನೆ ಅವರಿಗೆ ನೀಡಬೇಕಿದ್ದ ಕಾಮಿ೯ಕ ಕಲ್ಯಾಣ ಮಂಡಳಿಯ ಆಹಾರ ಪದಾರ್ಥಗಳ ಕಿಟ್ಗಳನ್ನು ಬಿಬಿಎಂಪಿ ಮೂಲಕ ವಿತರಣೆಗೆ ಆದೇಶ ನೀಡಿ ಮುಖ್ಯ ಮಂತ್ರಿಗಳು ಆಹಾರ ಕಿಟ್ಗಳನ್ನು ಕಟ್ಟಡ ಕಾಮಿ೯ಕರಲ್ಲದ ಬಿಜೆಪಿ ಮತದಾರರಿಗೆ ತಮ್ಮ ಶಾಸಕರು ಕಾಪೋ೯ರೇಟರ್ ಗಳ ಮೂಲಕ ವಿತರಿಸಿ ಮೊದಲಿಗೆ ವಲಸೆ ಕಾಮಿ೯ಕರನ್ನು ವಂಚಿಸಿದ್ದ ರಾಜ್ಯ ಸಕಾ೯ರವು ಅವರನ್ನು ಹತಾಶರನ್ನಾಗಿಸಿತ್ತು.

ಆನಂತರ ಕೆಲಸ, ಕೂಲಿಯಿಲ್ಲದೆ ಹಸಿದಿದ್ದ ಅವರಿಗೆ ಬಿಜೆಪಿ ಬೆಂಬಲಿತ ಅದಮ್ಯ ಚೇತನ, ರವಿ ಶಂಕರ್ ಆಶ್ರಮ ಮುಂತಾದವರಿಗೆ ಸಿದ್ಧ ಆಹಾರ ಗುತ್ತಿಗೆ ನೀಡಿ ಉಪ್ಪು ಹುಳಿ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ನೀಡಿ ಅವರನ್ನು ಮತ್ತಷ್ಟು ಹತಾಶರನ್ನಾಗಿಸಿತ್ತು. ಈ ಎಲ್ಲದರ ಪರಿಣಾಮವಾಗಿ ವಲಸೆ ಕಾಮಿ೯ಕರು ಬೇಸತ್ತು ಪೋಲಿಸರ ವಿರುಧ್ಧ ತಿರುಗಿ ಬಿದ್ದಿದ್ದರು. ಕನ್ನಡ ಇಂಗ್ಲಿಷ್ ಬಾರದ ಕಾಮಿ೯ಕರಿಗೆ ಸೇವಾ ಸಿಂಧು ಆಪ್ ಮೂಲಕವೇ ನೋಂದಾಯಿಸಲು ಹೇಳಿ ಅವರನ್ನು ವಂಚಿಸಿದ ಸಕಾ೯ರವು, ಇತರರ ಸಹಾಯ ಪಡೆದು ನೋಂದಾಯಿಸಲು ಮುಂದಾದಾಗ ಸವ೯ರ್ ಡೌನ್ ಮಾಡಿ ನೋಂದಾಯಿಸಿ ಕೊಳ್ಳಲು ಬಿಡದೆ ಇದೀಗ ರೈಲುಗಳನ್ನು ರದ್ದು ಪಡಿಸಿ ವಲಸೆ ಕಾಮಿ೯ಕರನ್ನು ಜೀತದಾಳುಗಳಂತೆ ನೆಡೆಸಿ ಕೊಳ್ಳುತ್ತಿದೆ ರಾಜ್ಯ ಸಕಾ೯ರ. ಮುಂದೆ ಕಾಮಿ೯ಕರಿಗೆ ಉಂಟಾಗುವ ಎಲ್ಲಾ ಅನಾಹುತಗಳಿಗೂ ರಾಜ್ಯ ಬಿಜೆಪಿ ಸಕಾ೯ರದ ದುರಾಡಳಿತವೇ ಕಾರಣವಾಗಿದೆ ಎಂದು ಸಮಿತಿಯ ಕಾರ್ಯದರ್ಶಿಗಳಾದ ಕೆ.ಎನ್.ಉಮೇಶ್, ಎನ್. ಪ್ರತಾಪ್ ಸಿಂಹ
ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?