Saturday, April 13, 2024
Google search engine
Homeಜಸ್ಟ್ ನ್ಯೂಸ್ಮಂಗಳೂರು ವಕೀಲರ ಸಂಘಕ್ಕೆ ರನ್ನರ್ ಅಪ್ ಗೌರವ

ಮಂಗಳೂರು ವಕೀಲರ ಸಂಘಕ್ಕೆ ರನ್ನರ್ ಅಪ್ ಗೌರವ

Publicstory. in


ಮಂಗಳೂರು: ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಥ್ರೊ ಬಾಲ್ ಕ್ರೀಡಾಕೂಟದಲ್ಲಿ ಮಂಗಳೂರು ವಕೀಲರ ಸಂಘದ ತಂಡ ಗಮನಾರ್ಹ ಸಾಧನೆ ಮಾಡಿದೆ.

ವಕೀಲರ ಸಂಘದ ಪುರುಷರ ತಂಡವರು ವಾಲಿಬಾಲ್ ಪಂದ್ಯಾಟದಲ್ಲಿ ರನ್ನರ್ ಅಪ್ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಉಡುಪಿ ತಂಡದ ಎದುರು ತೀವ್ರ ಹಣಾಹಣಿಯ ಪೈಪೋಟಿ ನಡೆಸಿ ಒಂದು ಅಂಕಗಳಿಂದ ಪರಾಭವಗೊಂಡು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿತು.

ತಂಡದ ಪ್ರತಿಭಾನ್ವಿತ ಕುಮಾರ್ ಪುತ್ರನ್ ಉತ್ತಮ ಹೊಡೆತಗಾರ ಪುರಸ್ಕಾರಕ್ಕೆ ಪಾತ್ರರಾದರು.

ಮಹಿಳಾ ತಂಡ ಕೂಡ ರನ್ನರ್ ಅಪ್ ಸಾಧನೆ ಮಡಿ ಗಮನ ಸೆಳೆಯಿತು. ಫೈನಲ್ ಪಂದ್ಯದಲ್ಲಿ ಉಡುಪಿ ತಂಡದ ಎದುರು ತೀವ್ರ ಹಣಾಹಣಿಯ ಪೈಪೋಟಿ ನಡೆಸಿತು. ಕೇವಲ ಒಂದು ಅಂಕಗಳಿಂದ ಪರಾಭವಗೊಂಡು ಚಾಂಪಿಯನ್ ಪಟ್ಟದಿಂದ ವಂಚಿತವಾಗಿ ದ್ವಿತೀಯ ಸ್ಥಾನಿಯಾಯಿತು.

ಮಹಿಳಾ ತಂಡದ ನೆಸ್ಲಿನ ಪ್ರಿಯಾ ಡಿಸೋಜ ಉತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

ವಾಲಿಬಾಲ್ ತಂಡದ ನಾಯಕತ್ವವನ್ನು ನವೀನ್ ಕುಮಾರ್ ಎಂ.ಜಿ. ವಹಿಸಿದ್ದು, ಕುಮಾರ ಪುತ್ರನ್, ಆಶಿಫ್, ಪ್ರಮೋದ್ ಕೆರ್ವಾಶೆ, ಮನೋಹರ್, ಶೀತಲ್ ಕುಮಾರ್ ಜೈನ್, ಯೋಗೀಶ್, ನಿಶಿತ್ ಲೋಬೋ, ಮಹಮ್ಮದ್ ಹ್ಯಾರಿಸ್ ಮೊದಲಾದವರು ತಂಡದ ಸದಸ್ಯರಾಗಿದ್ದರು.

ಮಹಿಳಾ ತಂಡದ ನಾಯಕತ್ವವನ್ನು ಜೀಟಾ ಪ್ರಿಯಾ ಮೊರಾಸ್ ವಹಿಸಿದ್ದರು. ತಂಡದಲ್ಲಿ ಸುರೇಖಾ ಎಂ.ಎಸ್., ಟೀನಾಶ್ರೀ ಶೆಟ್ಟಿ ನೆಸ್ಲಿನ ಪ್ರಿಯಾ ಡಿಸೋಜ, ರೇಷ್ಮಾ ಪ್ರಿಯಾ, ವಿಲ್ಮಾ, ಲೇಖನ ಪ್ರಮೋದ್, ವಿಶ್ಮಿತಾ ಶೆಟ್ಟಿ, ಉಷಾ, ಜಾಯ್ಲಿನ್ ಸುಪ್ರಿಯಾ, ದೀಕ್ಷಿತಾ ಮೊದಲಾದವರು ತಂಡದ ಸದಸ್ಯರಾಗಿದ್ದರು.

ದ್ವಿತೀಯ ಸ್ಥಾನಿಯಾಗಿ ಗೆದ್ದ ಪುರುಷ ಹಾಗೂ ಮಹಿಳಾ ತಂಡಕ್ಕೆ ಮಂಗಳೂರು ವಕೀಲರ ಸಂಘ ಅಭಿನಂದನೆ ಸಲ್ಲಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?