Monday, July 22, 2024
Google search engine
Homeಜನಮನಮಂಚೇಗೌಡಗೆ 'ಗೌಡಾ'

ಮಂಚೇಗೌಡಗೆ ‘ಗೌಡಾ’

Tumkur: ಸಿ.ಎನ್. ಮಂಚೇಗೌಡ ಕುಣಿಗಲ್ ತಾಲೂಕಿನ ಚಿಕ್ಕಮಾವತ್ತೂರು ಗ್ರಾಮದವರು. ತಾಲೂಕಿನ ಜನರಿಗೆ ಅಷ್ಟೊಂದು ಪರಿಚಿತರಲ್ಲ. ಉದ್ಯೋಗದ ಕಾರಣಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋದವರು. ಹಾಗಾಗಿಯೇ ಮಂಚೇಗೌಡ ಹೆಸರು ತುಮಕೂರು ಜಿಲ್ಲೆಯಲ್ಲಿ ಚಾಲ್ತಿಯಲ್ಲಿಲ್ಲ.

ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲಿ ಹಾಲು ಒಕ್ಕೂಟದಲ್ಲಿ ವ್ಯವಸ್ಥಾಪಕ ನಿರ್ದೇಶಕಾಗಿ ಕೆಲಸ ನಿರ್ವಹಿಸಿದವರು. ನಿವೃತ್ತಿಯ ನಂತರ ಬೆಂಗಳೂರಿನ ರಾರಾಜಿನಗರದಲ್ಲಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡಿದ್ದಾರೆ.

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಚಿಕ್ಕಮಾವತ್ತೂರು ಗ್ರಾಮದ ಒಂದು ರೈತ ಕುಟುಂಬದವರದ ನಂಜೆಗೌಡ ನಂಜಮ್ಮ ದಂಪತಿಯ ಮಗನಾಗಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವ್ಯಾಸಂಗವನ್ನು ನಮ್ಮ ಗ್ರಾಮೀಣ ಪರಿಸರದಲ್ಲಿಯೇ ನಡೆಸಿ ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಂದುವರೆಸಿದರು.

ಬಿ.ಎಸ್ಸಿ ಪದವಿ ಪಡೆದ ನಂತರ ಪಂಜಾಬ್ ನ ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದರು. ಅಲ್ಲದೆ ಡೈರಿಟೆಕ್ ಸ್ನಾತಕೋತ್ತರ ಪದವಿಯನ್ನು ಕಾಮನ್ ವೆಲ್ತ್ ಕಾಲೇಜ್, Australia British Board, London and management, USA ನಲ್ಲಿ ಪೂರೈಸಿದರು.

Britain, America, Germany, Denmark, ದೇಶಗಳಲ್ಲಿ ಉನ್ನತ ವ್ಯಾಸಂಗದ ಜೊತೆಯಲ್ಲಿ ಸಂಶೋಧನೆಯನ್ನು ನಡೆಸಿದರು.

ಮಂಚೇಗೌಡರು ಸುಮಾರು 40 ವರ್ಷಗಳ ವೃತ್ತಿ ಜೀವನದಲ್ಲಿ ಬೆಂಗಳೂರು ಡೈರಿ, ಯಲಹಂಕ ಮದರ್ ಡೇರಿಯ ಕಾರ್ಯನಿರ್ವಾಹಕರಾಗಿ ಸುದೀರ್ಘ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ಹಾಗೂ 1974 ರ World Bank Appraisal Team ಮೇಲ್ವಿಚಾರಕರಾಗಿದ್ದರು. ಕರ್ನಾಟಕ ಸರ್ಕಾರ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪ್ರಶಂಸನೀಯ ಸೇವೆಯನ್ನು ಸಲ್ಲಿಸಿದಾರೆ.

ಕರ್ನಾಟಕ ಡೈರಿ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿ ಗ್ರಾಹಕರು ಮತ್ತು ರೈತರಿಗೆ ಅಪಾರ ಕೊಡುಗೆ ನೀಡಿದ್ದಾರೆ. ‘ನಂದಿನಿ’ KMF ಬ್ರಾಂಡ್ ನ ಮಾರುಕಟ್ಟೆಗೆ ಪರಿಚಯಿಸಿ ಅನುಷ್ಠಾನಗೊಳಿಸಿದ ರೂವಾರಿಯಾಗಿದ್ದಾರೆ. ಕನ್ನಡ ನಾಡಿನ ಗ್ರಾಮೀಣ ಪ್ರದೇಶದ ಸ್ಥಳೀಯ ತಳಿ ಅಭಿವೃದ್ಧಿಗಾಗಿ ‘ಮುರ್ರಾ’ ಎಮ್ಮೆ ತಳಿಯನ್ನು ಪ್ರಪ್ರಥಮವಾಗಿ ಪಂಜಾಬಿನಿಂದ ತರಿಸಿ ಡೈರಿ ಉತ್ಪಾದನೆಯ ಹೆಚ್ಚಳವನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Australia, Germany, I land and Denmark ದೇಶಗಳಲ್ಲಿ ಸಂಚರಿಸಿ ಕನ್ನಡ ನೆಲದ ಹವಾಗುಣಕ್ಕೆ ಹೊಂದಿಕೊಳ್ಳವ ವಿಶೇಷ ಪಶು ತಳಿಗಳನ್ನು ತಂದು, ‘ಕ್ಷೀರಕ್ರಾಂತಿ’ ಗೆ ಮೂಲ ಕಾರಣಕರ್ತರಾಗಿದ್ದಾರೆ.

ನಿಸ್ವಾರ್ಥ ಸೇವೆ ಮತ್ತು ಗಣನೀಯ ಸಾಧನೆಗಾಗಿ ಭಾರತ ‘ರಾಷ್ಟ್ರೀಯ ಉತ್ಪಾದನಾ ಪ್ರಶಸ್ತಿ ‘ ನೀಡಿ ಗೌರವಿಸಿದೆ ಹಾಗೂ ಬೆಂಗಳೂರು ಡೈರಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾಗ ಭಾರತ ಅತ್ಯುತ್ತಮ ಡೈರಿ ಎಂದು ಪರಿಗಣಿಸಿ ‘ರಾಷ್ಟ್ರೀಯ ಪ್ರಶಸ್ತಿ ‘ ನೀಡಿ ಪುರಸ್ಕರಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ‘ಕೆಂಪೇಗೌಡ ಪ್ರಶಸ್ತಿ ‘ ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಇವರ ಅವಿಸ್ಮರಣೀಯ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ, ಗೌರವ, ಸನ್ಮಾನಗಳನ್ನು ಅರ್ಪಿಸಿವೆ.

ಇವರ ಅಂತರರಾಷ್ಟ್ರೀಯ ಸೇವೆಯನ್ನು ಪರಿಗಣಿಸಿ, ವಿಶ್ವ ಬ್ಯಾಂಕ್ ಇವರನ್ನು ಯೆಮೆನ್ ಗಣರಾಜ್ಯದ ಡೈರಿ ಅಭಿವೃದ್ಧಿ ಸಲಹೆಗಾರರನ್ನಾಗಿ ನೇಮಕ ಮಾಡಿದ್ದರು. ಭಾರತ ಸರ್ಕಾರ ಇವರ ಸೇವೆಯನ್ನು ಪರಿಗಣಿಸಿ ನವದೆಹಲಿ ಯಲ್ಲಿ ‘ಮೆಂಬರ್ ನ್ಯಾಷನಲ್ ಡೈರಿ ಅಡ್ವೈಸರಿ ಬೋರ್ಡ್ ‘ ಸದಸ್ಯರನ್ನಾಗಿ ನೇಮಕ ಮಾಡಿದ್ದರು.

ಈ ಎಲ್ಲಾ ಕಾರ್ಯಕ್ಷಮತೆಗೆ ಪೂರಕವಾಗಿ ಇವರು ಹಲವಾರು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದು, ಇವುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಖ್ಯಾತ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಜನತಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿ ತಮ್ಮ ಅಪಾರ ಅನುಭವವನ್ನು ಶೈಕ್ಷಣಿಕ ಪ್ರಗತಿಗೆ ಮೀಸಲಿಟ್ಟು ನಿಸ್ವಾರ್ಥದಿಂದಲೂ ದಕ್ಷತೆಯಿಂದಲೂ ಕಾರ್ಯನಿರ್ವಾಹಿಸುತ್ತಿದ್ದಾರೆ.

ಇವರು ನಮ್ಮ ತುಮಕೂರಿನ ಮುಖ್ಯ ಕಳಸ ಎಂದರೆ ತಪ್ಪಾಗಲಾರದು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?