Saturday, July 20, 2024
Google search engine
Homeಜಸ್ಟ್ ನ್ಯೂಸ್ಮಹಾರಾಷ್ಟ್ರದಲ್ಲಿ ಬಿಜೆಪಿ ಗೆ ಮತ್ತೊಂದು ಆಘಾತ

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆ ಮತ್ತೊಂದು ಆಘಾತ

ಮುಂಬೈ: ಬಿಜೆಪಿ ಪಕ್ಷದ ಪ್ರಮುಖ ನಾಯಕಿ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಅವರು ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿರುವುದು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೊಂದು ಪೆಟ್ಟು ಬಿದ್ದಿದೆ.

ಬಿಜೆಪಿ–ಶಿವಸೇನಾ ಸರ್ಕಾರದಲ್ಲಿ ಅವರು  ಮಂತ್ರಿಯಾಗಿದ್ದರು. ಪರ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ‘ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಕಾಲ ಬಂದಿದೆ,’ ಎಂದು ಭಾನುವಾರವಷ್ಟೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದರು.  ಟ್ವಿಟರ್‌ ಖಾತೆ ಪ್ರೊಫೈಲ್‌ ಅಪ್ಡೇಟ್‌ ಮಾಡಿರುವ ಅವರು ಬಿಜೆಪಿಯ ಉಲ್ಲೇಖವನ್ನೇ ತೆಗೆದು ಹಾಕಿದ್ದಾರೆ.   ನೂತನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಅಭಿನಂದಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿನ ರಾಜಕೀಯ ಸ್ಥಿತ್ಯಂತರಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಾರಿಯ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ಸಮಯ ಬಂದಿದೆ. ನನ್ನ ನಿರ್ಧಾರಗಳ ಬಗ್ಗೆ ಮಾತನಾಡಲು ನನಗೆ 8 ರಿಂದ10 ದಿನಗಳ ಸಮಯಾವಕಾಶ ಬೇಕು.  ಮುಂದೆ ಏನು ಮಾಡಬೇಕು, ಯಾವ ದಾರಿ ಆಯ್ಕೆ ಮಾಡಿಕೊಳ್ಳಬೇಕು, ಜನರಿಗೆ ನಾವೇನು ಕೊಡಬಹುದು, ನಮ್ಮ ಬಲವೇನು, ಜನರ ನಿರೀಕ್ಷೆಗಳೇನು ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಿ ಡಿ.12ರಂದು ನಿಮ್ಮ ಮುಂದೆ ಬರಲಿದ್ದೇನೆ,’ ಎಂದು ಅವರು ಭಾನುವಾರ ಬರೆದಿದ್ದರು.

ಡಿ.12 ಮಾಜಿ ಸಚಿವ ಗೋಪಿನಾಥ್‌ ಮುಂಡೆ ಜನ್ಮದಿನಾಚರಣೆಯಾಗಿದ್ದು, ಅಂದು ಬೀದ್‌ ಜಿಲ್ಲೆಯಯಲ್ಲಿರುವ ಗೋಪಿನಾಥ್‌ ಮುಂಡೆ ಅವರ ಸ್ಮಾರಕ ಗೋಪಿನಾಥಗಢದಲ್ಲಿ ಪಂಕಜಾ ಬೆಂಬಲಿಗರ ಸಭೆ ಕರೆದಿದ್ದಾರೆ. ಬಹುತೇಕ ಅಲ್ಲಿ ಅವರು ತಮ್ಮ ಮುಂದಿನ ನಡೆಯ ಕುರಿತು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೀಗಾಗಿ ಪಂಕಜಾ ಮುಂಡೆ ಅವರ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮನೆ ಮಾಡಿದ್ದು, ಅದೇ ಹೊತ್ತಲ್ಲೇ ಬಿಜೆಪಿಗೆ ಆತಂಕವನ್ನೂ ಉಂಟು ಮಾಡಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಪಕ್ಷದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌, ‘ಪಂಕಜಾ ಮುಂಡೆ ಅವರು ಪಕ್ಷ ಬಿಡುವ ಕುರಿತ ವರದಿಗಳು ಆಧಾರ ರಹಿತ,’ ಎಂದು ಹೇಳಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?