Saturday, July 27, 2024
Google search engine
Homeಜಸ್ಟ್ ನ್ಯೂಸ್ಮಹಿಳಾ ಸಂಘಗಳಿಗೆ 500 ಕೋಟಿ ಸಾಲ

ಮಹಿಳಾ ಸಂಘಗಳಿಗೆ 500 ಕೋಟಿ ಸಾಲ

Publicstory


ಗುಬ್ಬಿ: ಸಂಜೀವಿನಿ ಯೋಜನೆಯಿಂದ 33 ಸಾವಿರ ಮಹಿಳಾ ಸಂಘಗಳಿಗೆ 5೦೦ ಕೋಟಿ ಸಾಲ ನೀಡುವುದಾಗಿ ಸರ್ಕಾರದ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮುಖ್ಯ ಮಹಾ ಪ್ರಬಂಧಕ ದೇಬಾನಂದ ಸಾಹೂ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ವಲಯ ಕಛೇರಿ ತುಮಕೂರು, ಐಡಿಎಫ್ ಸಂಸ್ಥೆ ಹಾಗೂ ಗ್ರಾಮ್ಸರ್ವ್ ಪ್ರೈ .ಲಿ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿಸಾಲ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕೆನರಾ ಬ್ಯಾಂಕ್ನ್ನು ಸರಕಾರ ರಾಜ್ಯ ನೋಡಲ್ ಬ್ಯಾಂಕ್ ಆಗಿ ನೇಮಿಸಿಕೊಂಡಿರುವುದರಿಂದ ರೈತರಿಗೆ ನಮ್ಮ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ ಎಂದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ಪ್ರಬಂಧಕ ಬಿ.ರವಿ ಮಾತನಾಡಿ, ಕೆನರಾ ಬ್ಯಾಂಕ್ 19 ಲಕ್ಷ ಕೋಟಿ ವ್ಯವಹಾರ ಮಾಡುತ್ತಿದೆ. ದೇಶದ ಅತಿ ದೊಡ್ಡ ಬ್ಯಾಂಕ್ಗಳಲ್ಲಿ 3ನೇ ಸ್ಥಾನದಲ್ಲಿ ಕೆನರಾ ಇದ್ದು, ಮುಂದಿನ ಮಾರ್ಚ್ ಕೊನೆಗೆ 2ನೇ ಸ್ಥಾನಕ್ಕೆ ಹೋಗುವ ಗುರಿಯನ್ನು ನಮ್ಮ ಬ್ಯಾಂಕ್ ಹೊಂದಿದೆ. ಗುಬ್ಬಿ ಶಾಖೆಯಿಂದ ಸಾಂಕೇತಿಕವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಇಂದು 75 ಲಕ್ಷ ಮಂಜೂರು ಮಾಡಲಾಗಿದೆ. 46 ಕೋಟಿ ಸಾಲವನ್ನು ಜಂಟಿ ಬಾಧ್ಯತ ಗುಂಪಗಳಿಗೆ ಗುಬ್ಬಿ ಶಾಖೆಯಲ್ಲಿ ಐಡಿಎಫ್ ಸಹಕಾರದಿಂದ ವಿತರಣೆ ಮಾಡಲಾಗಿದೆ. ಪ್ರತಿಯೊಬ್ಬ ರೈತರು ನಮ್ಮ ಶಾಖೆಯಲ್ಲಿ ದೊರೆಯುವ ಜೀವ ವಿಮೆಗಳನ್ನು ಮಾಡಿಸಿಕೊಂಡು ಆಪತ್ತುಗಳು ಸಂಭವಿಸಿದಾಗ ಉಪಯೋಗಕ್ಕೆ ಬರುತ್ತವೆ ಎಂದರು. ಜಂಟಿ ಬಾಧ್ಯತ ಗುಂಪುಗಳಿಗೆ ನೇರವಾಗಿ ನಾವೇ ಹೋಗಿ ಸಾಲ ನೀಡಲು ಆಗದೇ ಇರುವುದಕ್ಕೆ ಐಡಿಎಫ್ ಸಂಸ್ಥೆಯ ಸಹಾಕಾರ ಪಡೆದು ತುಮಕೂರು ಜಿಲ್ಲೆಯಲ್ಲಿ ತುಮಕೂರು, ಗುಬ್ಬಿ ತಾಲೂಕುಗಳಲ್ಲಿ ಸಾಲ ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ರೈತರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಐಡಿಎಫ್ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದ ದೀಪಕ್ ಅವರ ತಂದೆ ಹೆಚ್ಐವಿ ಗೆ ತುತ್ತಾಗಿ ಸಾವನ್ನಾಪ್ಪಿದ ಸಮಯದಲ್ಲಿ ಮುಂದೆ ವಿದ್ಯಾಭ್ಯಾಸ ಮಾಡಲು ಶಕ್ತಿಯಿಲ್ಲದ ಸಮಯದಲ್ಲಿ ಐಡಿಎಫ್ ಸಂಸ್ಥೆ 3 ಲಕ್ಷ ವಿದ್ಯಾರ್ಥಿ ವೇತನ ನೀಡಿದ್ದರಿಂದ ನನ್ನ ಮೋಮ್ಮಗ ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿ ಇಂದು ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿರುವುದಕ್ಕೆ ಐಡಿಎಫ್ ಸಂಸ್ಥೆ ಕಾರಣ ಎಂದು ಅನಿಸಿಕೆ ವ್ಯಕ್ತ ಪಡಿಸಿದರು.
ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಐಡಿಎಫ್ ಸಂಸ್ಥೆಯು ಆರ್ಥಿಕ ಸೇವೆ ಒದಗಿಸುವ ಜೊತೆಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದೆ. ರೈತರು ಪಡೆದ ಸಾಲವನ್ನು ಒಳ್ಳೆಯ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದರು.
ಇದೆ ಸಂದರ್ಭದಲ್ಲಿ ಕೃಷಿಕರಾದ ಸಿಎಸ್ ಪುರದ ಸಿ.ಎಂ.ಕೃಷ್ಣಮೂರ್ತಿ, ಎಂಹೆಚ್ ಪಟ್ಟಣ ಆಶೋಕ್, ಹಾಲತಿ ರವಿಕಿರಣ್ ಹೆಚ್.ಜಿ, ಚಿಕ್ಕಹಳ್ಳಿ ವೀರಭದ್ರಯ್ಯ, ಸೋರೇಕಾಯಿಪೆಂಟೆ ಗೌರಮ್ಮ, ಹಲಸಿನನಾಗೇನಹಳ್ಳಿ ಹೆಚ್.ಎಸ್.ಪರಮೇಶ್, ಹುಳ್ಳೇನಹಳ್ಳಿ ಶ್ರೀನಿವಾಸ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ್ಸರ್ವ್ ಪ್ರೈ.ಲಿ ಮುಖ್ಯ ಕಾರ್ಯಾಚರಣಾ ಅಧಿಕಾರಿ ಬಸವರಾಜು ಆರ್ ಹಿರೇಮಠ, ಗುಬ್ಬಿ ಶಾಖೆಯ ವ್ಯವಸ್ಥಾಪಕ ದೀಪಕ್, ಕ್ಷೇತ್ರಾಧಿಕಾರಿ ಜಯಶ್ರೀ, ಯೋಜನಾಧಿಕಾರಿ ಮು.ಲ.ಕೆಂಪೇಗೌಡ, ಆರ್.ಆರ್.ದೇಸಾಯಿ, ಎಂ.ಎನ್.ಕುಂಬಯ್ಯ, ಗುರುದತ್, ಕರುಣಾಕರ್, ಸಂತೋಷ್ ಹಾಗೂ ರೈತರು, ಸಿಬ್ಬಂದಿ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?