Tumkuru: ಲಾಕ್ ಡೌನ್ ಮುಗಿದ 3 ನಂತರವೂ ಜಾತ್ರೆ, ದೇವಸ್ಥಾನ, ಹಬ್ಬ ಹರಿದಿನಗಳಿಗೆ ಹೋಗಬೇಡಿ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ತಿಳಿಸಿದರು.
ಬೆಳಗಾವಿ ಹೋಬಳಿ ಸೋರೇಕುಂಟೆಯಲ್ಲಿ ಉಚಿತ ಪಡಿತರ, ಮಾಸ್ಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆಯ ಬುಡವೇ ಅಲುಗಾಡಿದೆ. ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ನಷ್ಟವಾಗಿದೆ ಎಂದರು.
ಸೊರೆಕುಂಟೆ ಪಂಚಾಯತಿಯ ವ್ಯಾಪ್ತಿಯ ಪ್ರತಿ ಮನೆ, ಮನೆಗೆ ಉಚಿತ ಮಾಸ್ಕ್, ಹಾಗೂ ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೂ ಮತ್ತು ಹೊರ ರಾಜ್ಯಗಳಿಂದ ಕೂಲಿಗಾಗಿ ಬಂದಿರುವ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು ಜಿಲ್ಲಾ ಪಂ ಸದಸ್ಯರ ಯಜಮಾನರಾದ ಡಾ” ನಾಗರಾಜ, ಗ್ರಾಮ ಪಂ ಅಧ್ಯಕ್ಷರಾದ ಕಲ್ಪನಾ ರವೀಶ್, ಸದಸ್ಯರಾದ ಸೋಮಣ್ಣ, ರಂಗನಾಥ್, ರಂಗಪ್ಪ, ನರಸಿಂಹಯ್ಯ, ದೇವರಾಜು, ಮುಖಂಡರಾದ, ಪರಮೇಶ್, ಚಂದ್ರಣ್ಣ, ವಕೀಲರಾದ ವೀರಣ್ಣ, ಕೃಷ್ಣಮೂರ್ತಿ, ಶಿವಲಿಂಗಯ್ಯ, ಕಾಂತರಾಜು, ಮಂಜುನಾಥ್, ಜಡಿಯಪ್ಪ, ದೊಡ್ಡಯ್ಯ, ಸಿದ್ದಗಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಬೆಳ್ಳಾವಿ ಹೋಬಳಿ ನೆಲಹಾಳ್ ಗ್ರಾಮ ಪಂಚಾಯ್ತಿಯ ಚಿಕ್ಕ ಸೀಬಿ ಗ್ರಾಮದಲ್ಲಿ ಮನೆ ಮನೆಗೆ ಉಚಿತ ಮಾಸ್ಕ್ ಹಾಗೂ ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೆ ರೇಷನ್ ಕಿಟ್ನ್ನು ವಿತರಿಸುವ ಮೂಲಕ ಜನಗಳಿಗೆ ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಿದರು ಜಿಲ್ಲಾ ಪಂಚಾಯತ್ ಸದಸ್ಯರ ಯಜಮಾನರಾದ ಡಾ”ನಾಗರಾಜ, ಮುಖಂಡರಾದ ಶಿವಣ್ಣ, ವೀರಾಚಾರಿ, ಮಂಜಣ್ಣ ತಿಮ್ಮಣ್ಣ, ವೆಂಕಟೇಶ್, ಮುಂತಾದವರು ಇದ್ದರು.