Saturday, June 14, 2025
Google search engine
HomeUncategorizedಮೊದಲಾ ದಿನ ಏನ್ನೆಲ್ಲಾ ಮಾಡಿದ್ರು ಈ ಪುಟಾಣಿಗಳು

ಮೊದಲಾ ದಿನ ಏನ್ನೆಲ್ಲಾ ಮಾಡಿದ್ರು ಈ ಪುಟಾಣಿಗಳು

ಲೇಖನ: ತುಳಸೀತನಯಚಿದು

ಬೇಸಿಗೆ ರಜೆ ಮುಗಿದಿದೆ. ಮಕ್ಕಳು ಇಷ್ಟು ದಿನ ಕಳೆದದ್ದು ತಮ್ಮದೇ ಆದ ಹೊಸದೊಂದು ಲೋಕ. ಈಗ ಶಾಲೆ ಪುನಾರಂಭಗೊಂಡಿವೆ.

ರಜೆಯ ಮದಜದಲ್ಲಿ ಮಿಂದೆದ್ದ ಮಕ್ಕಳು ಈಗ ಶಾಲೆಗಳತ್ತ ಮುಖ ಮಾಡಬೇಕಿದೆ. ಮುಗ್ಧ ಮನಸ್ಸುಗಳಲ್ಲಿ ಇನ್ನೂ ಅದೇ ರಜೆಯ ಆಟೋಟದ ನೆನಪು ಹಚ್ಚಹಸಿರಾಗಿದೆ. ಆದರೂ ಪೋಷಕರ ಒತ್ತಾಯದ ಮೆರೆಗೆ ಕಲಿಕೆಯತ್ತ ಮುಖ ಮಾಡಬೇಕಿದೆ. ಕೆಲವು ಮಕ್ಕಳಿಗೆ ಶಾಲೆ ಪ್ರಾರಂಭದ ಮೊದಲ ದಿನ ಏನೋ ಒಂದು ಸಂಕಟ ಭಾವ. ಮತ್ತೆ ಕೆಲವರಿಗೆ ಹೊಸ ಹುರುಪಿನ ಸಂಭ್ರಮದ ಹೆಜ್ಜೆ.

ಬೇಸಿಗೆ ರಜೆ ಎಂಬುದು ಮಕ್ಕಳ ಜೀವನದಲ್ಲಿ ಅತ್ಯಂತ ನಿರೀಕ್ಷಿತ ಕಾಲ. ಅದೆಷ್ಟೋ ದಿನಗಳಿಂದ ಶಾಲೆಯ ಕಟ್ಟಡ, ಪುಸ್ತಕ, ಪಾಠ ಮತ್ತು ಪರೀಕ್ಷೆಗಳಿಂದ ದೂರವಿದ್ದು, ಆಟ, ಮೋಜು, ವೀಕ್ಷಣೆ ಮತ್ತು ವಿಶ್ರಾಂತಿಯ ಈ ಕಾಲವು ಅವರಿಗೆ ನಿಜವಾದ ಸಂತಸದ ಕಾಲವಾಗಿರುತ್ತದೆ. ಆದರೆ, ಕಾಲನ ತೀರದಲಿ ಏನು ನಿಲ್ಲುತ್ತದೆ? ಎರಡು ತಿಂಗಳ ರಜೆ ತಮ್ಮ ವಿಸ್ಮಯದ ನೆನಪುಗಳೊಂದಿಗೆ ಮರೆಯಾದಂತೆ ಕಾಲಚಕ್ರ ಮುಂದುವರಿದಿದೆ. ಬೇಸಿಗೆಯ ಉರಿಗೆ ತಾಪವಂತೂ ತೀರಿದರೂ, ಅದರ ಸಿಹಿ ನೆನಪುಗಳು ಮಕ್ಕಳ ಮನಸ್ಸಿನಲ್ಲಿ ಇನ್ನೂ ತಾಜಾಗಿಯೇ ಉಳಿದಿವೆ.

ಶಾಲೆಗಳು ಪುನರಾರಂಭಗೊಂಡವು. ಮೊದಲ ದಿನವೇ ಮಕ್ಕಳು ಮಂಕಾದ ಮುಖದಿಂದ, ಕೆಲವರು ಕುತೂಹಲದಿಂದ, ಇನ್ನೂ ಕೆಲವರು ಅಜ್ಞಾನತೆಯಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದರು. ಆಟಗಳಲ್ಲಿ, ಪ್ರವಾಸಗಳಲ್ಲಿ, ಅಜ್ಜಿ-ಅಜ್ಜಂದಿರ ಕಥೆಗಳಲ್ಲಿ ತೋಡಗಿಕೊಂಡಿದ್ದ ಅವರು, ಈಗ ತಿರುಗಿ ಪಾಠಶಾಲೆಯ ಗಂಭೀರ ವಾತಾವರಣದತ್ತ ಮರಳಬೇಕಿದೆ. ಅವರ ಹೃದಯದಲ್ಲಿ ಮತ್ತೆ ಶುರುವಾದ ಪಾಠದ ಕಥೆಯೂ ಒಂದು ಹೊಸ ತಿರುವನ್ನು ಕೊಡುವ ದಾವಂತವಿದೆ.

ಪೋಷಕರು ಮಕ್ಕಳಿಗೆ ಶಾಲೆಗೆ ಹೋಗುವ ಅಗತ್ಯವನ್ನು ತಿಳಿಸಿಕೊಟ್ಟು, ಉತ್ಸಾಹವಂತಿಕೆ ತರವ ಯತ್ನದಲ್ಲಿದ್ದಾರೆ. “ಇದೀಗ ಮತ್ತೆ ಓದಬೇಕು, ಈ ವರ್ಷ ಹೊಸ ವಿಷಯಗಳು, ಹೊಸ ಶಿಕ್ಷಕರು, ಹೊಸ ಗೆಳೆಯರು..!” ಎಂಬ ಪ್ರೋತ್ಸಾಹದ ಮಾತುಗಳ ಜೊತೆಗೆ ನೂತನ ಬ್ಯಾಗು, ಪುಸ್ತಕಗಳು, ಪೆನ್ನು, ಪೆನ್ಸಿಲ್ ಗಳು ಮಕ್ಕಳನ್ನು ನವೋತ್ಸಾಹಕ್ಕೆ ಹೊತ್ತು ತಂದಿವೆ.

ಶಾಲೆಯ ದ್ವಾರದಲ್ಲಿ ಶಿಕ್ಷಕರು ಹಸನ್ಮಿಕಿಗಳಾಗಿ ಮಕ್ಕಳನ್ನು ಬರಮಾಡಿಕೊಂಡರು. ಮೊದಲು ನೋಡುತ್ತಿದ್ದಂತೆಯೇ ಮುದ್ದಾಗಿ ನಗುತ್ತಾ ತಂಗಾಳಿಯಂಥ ಸ್ವಾಗತ. “ಹಾಯ್, ಹಲೋ, ಗುಡ್ ಮಾರ್ನಿಂಗ್ ಪುಟ್ಟಾ..! ನಿನ್ನ ಬೇಸಿಗೆ ಹೇಗಿತ್ತು? ರಜದಲ್ಲಿ ಏನು ಮಾಡಿದೆ..? ಎಲ್ಲಿಗೆ ಹೋಗಿದ್ದೇ..?” ಎಂಬ ಪ್ರಶ್ನೆಗಳ ಸುರಿಮಳೆ ಮಕ್ಕಳ ನಗೆಯ ಜೊತೆ ಬೆರೆತು ಹಾರಿತು. ಕೆಲವು ಮಕ್ಕಳು ತಮ್ಮ ಉಲ್ಲಾಸದ ಅನುಭವಗಳನ್ನು ಹೇಳುತ್ತಾ ಮೆಚ್ಚಿನ ನೋಟಗಳನ್ನು ಪಡೆದುಕೊಂಡರು. ಇನ್ನು ಕೆಲವು ಮಕ್ಕಳು ನಿಶ್ಯಬ್ದವಾಗಿ ನೋಡುವ ಮೂಲಕ ತಮ್ಮ ಸುಮ್ಮನಾದ ನೆನಪುಗಳನ್ನು ಮೌನದಲಿ ಹಂಚಿಕೊಂಡರು.

ಈ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭವಾದರೂ, ಮೊದಲ ದಿನ ಪಾಠಕ್ಕಿಂತ ಹೆಚ್ಚು ನೆನಪುಗಳನ್ನು ಹಂಚಿಕೊಳ್ಳುವ ದಿನ. ಗೆಳೆಯರೊಂದಿಗೆ ಮತ್ತೆ ಸೇರಿಕೊಳ್ಳುವ ಹರ್ಷ, ಹೊಸ ಪುಸ್ತಕಗಳ ಸುವಾಸನೆ, ಕರೆಯುವ ಗಂಟೆಯ ಪ್ರಭಾತಧ್ವನಿ ಇವೆಲ್ಲಾ ಮಕ್ಕಳಲ್ಲಿ ಪುಟಪುಟಿತ ಮನಸ್ಸನ್ನು ತಾಜಾ ಮಾಡಿತು.

ಈ ದಿನ ಶಿಕ್ಷಕರಿಗೂ ವಿಶೇಷ. ಮಕ್ಕಳ ಉಲ್ಲಾಸದ ಚಲನೆ, ಅವರ ಬದಲಾಗಿರುವ ವ್ಯಕ್ತಿತ್ವ, ಬೇಸಿಗೆಯೊಳಗಿನ ಬೆಳವಣಿಗೆಯ ಕಂಡುಹಿಡಿಯುವ ಸಂಭ್ರಮ ಶಿಕ್ಷಕರಿಗೆ ಅನಿರ್ವಹಣೀಯ ಸಂತೋಷ ನೀಡುತ್ತದೆ. ಅವರು ಮಕ್ಕಳಿಗೆ ಅಧ್ಯಯನದ ಮಹತ್ವವನ್ನು ಮತ್ತೊಮ್ಮೆ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದರು. ಅದರಲ್ಲೂ ಕಠಿಣತೆಯಲ್ಲ, ನಗೆಯಮಾತುಗಳಿಂದ, ಕಥೆಗಳ ಮೂಲಕ, ಅನುಭವಗಳ ಹಂಚಿಕೆಯಿಂದ.

ಈಗ ರಜೆಯ ಸಿಹಿತನವನ್ನು ಹಿಂದೆ ಬಿಟ್ಟು, ಹೊಸ ಶೈಕ್ಷಣಿಕ ವರ್ಷಕ್ಕೆ ಪದಾರ್ಪಣೆ ಮಾಡುವ ಕಾಲ. ಇದು ಹೊಸ ಕನಸುಗಳ ಆರಂಭ, ಹೊಸ ಗುರಿಗಳ ಹೆಜ್ಜೆಗಳು. ಮಕ್ಕಳ ಮನಸ್ಸು ಈಗ ಎದೆಯಾಳದಲ್ಲಿ ಆಟದ ಜಗತ್ತಿನಿಂದ ಪಾಠದ ಲೋಕಕ್ಕೆ ಕಾಲಿಡುತ್ತಿದೆ. ಆದರೆ ಈ ಪಾಠವೂ ಅಂತೂ ಒಂದೇ: ಕಲಿಕೆಯಲ್ಲಿ ಸುಖವಿದೆ.
—ತುಳಸಿತನಯ ಚಿದು..✍️

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?