ಪಶ್ಚಿಮಬಂಗಾಲ: ಬಿಜೆಪಿ ಶಾಸಕರೊಬ್ಬರ ಶವ ಮಾರುಕಟ್ಟೆಯೊಂದರ ಹಳೇ ಕಟ್ಟಡದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಧ್ಯರಾತ್ರಿ ಅವರು ಮನೆಯಿಂದ ಹೊರ ಹೋಗಿದ್ದರು. ಬೆಳಿಗ್ಗೆ ಕಟ್ಟಡವೊಂದರಲ್ಲಿ ಬಹಿರಂಗವಾಗಿ ಕಾಣುವಂತೆ ಅವರ ಶವ ಜಂತೆಗೆ ನೇತಾಡುತ್ತಿತ್ತು.
ಕೊಲೆ ಮಾಡಿದ ಬಂತರ ಶವವನ್ನು ನೇಣು ಬಿಗಿದಿರಬಹುದು ಎಂದು ಅಲ್ಲಿನ ಜನರು ಅನುಮಾನಪಟ್ಟಿದ್ದಾರೆ.
ಶಾಸಕರನ್ನು ದೇಬೇಂದ್ರನಾಥ ರಾಯ್ ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ತಿಕ್ಕಾಟ, ಘರ್ಷಣೆ ನಡೆಯುತ್ತಿದ್ದು, ಘಟನೆ ರಾಜಕೀಯ ತಿರುವು ಪಡೆಯಬಹುದು ಎಂದು ಹೇಳಲಾಗುತ್ತಿದೆ.