Saturday, July 20, 2024
Google search engine
Homeಜಸ್ಟ್ ನ್ಯೂಸ್ಸಂಕ್ರಾತಿ ಎಂದರೆ ಹೀಗಿತ್ತು

ಸಂಕ್ರಾತಿ ಎಂದರೆ ಹೀಗಿತ್ತು

ಧನಂಜಯ್ಯ ಕುಚ್ಚಂಗಿಪಾಳ್ಯ


ಸಂಕ್ರಾಂತಿ ಹಬ್ಬದ ಹೊತ್ತಿಗೆ ರೈತ ತಾನು ಬೆಳೆದ ಫಸಲುಗಳನ್ನೇಲ್ಲಾ ತಾನು ಬೆಳೆದ ಹೊಲದಿಂದ ತಂದು ಒಂದೆಡೆ ಮೂರ್ನಾಲ್ಕು ರೈತರು ಸಹಕಾರ ಮನೋಭಾವದಿಂದ ಸಂಗ್ರಹಿಸಿಟ್ಟು, ಹವಾಮಾನ ಬದಲಾವಣೆಗೆ ತಕ್ಕಂತೆ, ಈ ಸಂಕ್ರಾಂತಿ ಹಬ್ಬದ ನಂತರ ಮಾಗಿಯ ಚಳಿಯು ಕಡಿಮೆಯಾಗಿ ಬಿಸಿಲು ಜಾಸ್ತಿಯಾಗುವ ಈ ದಿನದ ಅವುಗಳನ್ನು ಕಣದಲ್ಲಿ ಹರಡಿ ಸುಲಭವಾಗಿ ಕಾಳುಗಳನ್ನು ಬೇರ್ಪಡಿಸುವುದಕ್ಕೆ ಕಾರ್ಯನ್ನೋಖನಾಗುತ್ತಿದ್ದಂತಹ ಸಕಾಲವಿದು.

ಅಂದು ರಾಸುಗಳನ್ನ ಸಿಂಗರಿಸಿ ಕಿಚ್ಚು ಹಾಯಿಸುವ ಸುಗ್ಗಿಯ ದಿನ. ಆದರೆ ಇದು ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಕರ್ನಾಟಕದ ಪ್ರದೇಶಗಳಲ್ಲಿ ತುಂಬಾ ಪ್ರಸಿದ್ದಿಯಾದರೂ ಮಧ್ಯ ಕರ್ನಾಟಕದಲ್ಲಿ ಕಡಿಮೆಯೇ. ನಮಗೆಲ್ಲ ಈ ಹಬ್ಬದಂದೂ ರಾಸುಗಳ ಮೈ ತೊಳೆದು ಸಿಂಗರಿಸುವ ಸಡಗರ.ಹಿರಿಯರಿಗೆಲ್ಲಾ ಗಿಡದಿಂದ ಕಾಳುಗಳನ್ನು ಬೆರ್ಪಡಿಸಲು ಅಗತ್ಯವಿರುವ ಕಣ ಸಿದ್ದಪಡಿಸುವತ್ತ ಗಮನ.

ಸಣ್ಣವರಿದ್ದ ನಮಗೆ ಅಂದು ರಜೆಯ ದಿನವಾದ್ದರಿಂದ ಕಣ ಗಟ್ಟಿಯಾಗಿ ಮಾರ್ಪಾಡುವುದಕ್ಕೆ ಕುರಿ ಮಂದೆಯನ್ನೋ ಇಲ್ಲಾ ಐದಾರು ಮನೆಯ ದನಕರುಗಳನ್ನು ಹಿಡಿದು ತಂದು ಕಣದ ಒಳಗೆ ಓಡಾಡಿಸುವ ಕೆಲಸ ಹಚ್ಚುತ್ತಿದ್ದರು. ಈ ಹಬ್ಬದಲ್ಲಿ ಹವಾಗುಣಕ್ಕೆ ಅನಗುಣವಾಗಿ ದೇಹದ ಆರೋಗ್ಯಕ್ಕೆ ಅವಶ್ಯಕವಾದ ಅವರೆಕಾಯಿ ಮತ್ತು ಕಡಲೆಕಾಯಿಯನ್ನು ಉಪ್ಪು ಮಿಶ್ರಿತವಾಗಿ ಹದವಾಗಿ ಬೇಯಿಸಿ ಉಣ ಬಡಿಸುವ ಪರಿ ನಿಜಕ್ಕೂ ನಮ್ಮ ಹಿರಿಯರ ಅನುಭವದ ಸಂಶೋಧನೆ ಮೆಚ್ಚುವಂತದ್ದೆ.

ಆದರೆ ಇಂದು ಆ ಅವರೆಯ ಸೊಗಡು ಇಲ್ಲಾ ಕಡಲೆಕಾಯಿಯನ್ನು ಹುಡುಕಿ ತಂದು ತಿನ್ನುವ ಪರಿಸ್ಥಿತಿ ಬಂದೊದಿಗಿದೆ.ಜನಗಳಿಗೂ ಅಷ್ಟೇ ಸಂಕ್ರಾಂತಿಯೆಂದರೆ ಏನೂ ಒಂದು ಬಂದು ಹೋಗುವ ಹಬ್ಬವಾಗಿದೆಯೇ ಹೊರತು ಸಡಗರ ಸಂಭ್ರಮದ ಹಬ್ಬವಾಗಿ ಉಳಿದಿಲ್ಲ..ಸುಗ್ಗಿಯ ಹಬ್ಬವೆಸಿದರೂ ಜೀವಂತ ದನಕರುಗಳು ಕಡಿಮೆಯಾಗಿ ಯಾಂತ್ರಿಕ ವಸ್ತುಗಳೇ ತುಂಬಿ ಮನುಷ್ಯ ಸಂಬಂಧಗಳು ಇಲ್ಲವಾಗುತ್ತಿವೆ.

ಪ್ರಕೃತಿಯ ಬದಲಾವಣೆಯಾಗುವ ವಿರುದ್ಧ ದಿಕ್ಕಿನಲ್ಲಿ ಮಾನವನ ಮನಸ್ಥಿತಿಗಳು ಬದಲಾಗುತ್ತಿರುವ ಈ ದಿನಗಳಿಗೂ ತದ್ವಿರುದ್ಧ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?