ಜಸ್ಟ್ ನ್ಯೂಸ್

ಸಾವಿತ್ರಿ ಬಾಪುಲೆ ಜಯಂತಿ

ಪಾವಗಡ ತಾಲ್ಲೂಕು ದೇವಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ರವರ ಜಯಂತಿ ಆಚರಣೆ ಮಾಡಲಾಯಿತು.

ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಪಾಳೇಗಾರ ಲೋಕೇಶ ಮಾತನಾಡಿ, ಸಾವಿತ್ರಿ ಬಾಪುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ ಅವರ ಪರಿಶ್ರಮದಿಂದ ಮಹಿಳೆಯರಿಗೆ ಶಿಕ್ಷಣ ಸಿಗುವಂತಾಗಿದೆ. ದಶಕಗಳ ಹಿಂದೆಯೇ ಮಹಿಳೆಯರ ಸಮಾನತೆಗಾಗಿ ಹೋರಾಟ ನಡೆಸಿದ ಅವರ ಸಮಾಜಮುಖಿ ತತ್ವ ಅದರ್ಶನೀಯ ಎಂದರು.

ಈ ಸಂದರ್ಭ ದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಸಹ ಶಿಕ್ಷಕ ನರೇಂದ್ರ. ಅತಿಥಿ ಶಿಕ್ಷಕ ಲೋಕೇಶ ನಾಯಕ, ಶಿಲ್ಪ, ಎಸ್. ಡಿ.ಎಮ್. ಸಿ.ಅಧ್ಯಕ್ಷರಾದ ಈರಣ್ಣ, ಎಸ್. ಬಿ.ಸಿ.ಸಮಿತಿ ಅಧ್ಯಕ್ಷರಾದ ಅಂಬರೀಷ್. ಮುಖಂಡರಾದ ಅಜಯ್ ಕುಮಾರ್. ರಮೇಶ, ಗೌತಮಿ, ನಾರಯಣರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಮ್ಮ ಇತರರು ಭಾಗವಹಿಸಿದ್ದರು.

Comment here