Sunday, July 21, 2024
Google search engine
Homeಜಸ್ಟ್ ನ್ಯೂಸ್ಹುಟ್ಟುಹಬ್ಬ ಆಚರಣೆ ಬದಲು ಹಸಿದವರಿಗೆ ಅನ್ನ ನೀಡಿದ ಪುಟಾಣಿಗಳು

ಹುಟ್ಟುಹಬ್ಬ ಆಚರಣೆ ಬದಲು ಹಸಿದವರಿಗೆ ಅನ್ನ ನೀಡಿದ ಪುಟಾಣಿಗಳು

ಹುಟ್ಟುಹಬ್ಬ ಎಂದರೆ
ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಹುಟ್ಟು ಹಬ್ಬಕ್ಕೆ ಹೊಸಬಟ್ಟೆ,
ಕೇಕ್ ತಂದು, ಅಕ್ಕಪಕ್ಕದ ಸ್ನೇಹಿತರನ್ನೆಲ್ಲಾ ಸೇರಿಸಿ ಕೇಕ್ ಕತ್ತರಿಸಿ ಸಂಭ್ರಮಿಸುವುದನ್ನು ನೋಡಲು ಪಾಲಕರಿಗೆ ಖುಷಿ.ಆದರೆ ಸಿರಾ ನಗರದ ಅಣ್ಣತಮ್ಮಂದಿರು ಭಾನುವಾರ ಅವರ ಹುಟ್ಟುಹಬ್ಬವನ್ನು
ಹಸಿದವರಿಗೆ ಅನ್ನ ನೀಡುವ ಮೂಲಕ‌ ಆಚರಿಸಿಕೊಂಡಿರುವುದು ವಿಶೇಷ.ಸಿರಾ ನಗರ ವಾಸಿ ಶಿಕ್ಷಕ ಆರ್. ತಿಪ್ಪೇಸ್ವಾಮಿಯವರ ಮಕ್ಕಳಾದ ವಿನೀತ್ 3ನೇ ವರ್ಷದ ಪ್ರಣೀತ್ ತನ್ನ 5 ನೇ ವರ್ಷದ ಹುಟ್ಟುಹಬ್ಬವನ್ನು ಹಸಿದವರಿಗೆ ಅನ್ನ ನೀಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಕೊರೋನ ಎರಡನೇ ಅಲೆಗೆ ಸರ್ಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಕೆಲ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವರ ಜೀವನೋಪಾಯ ತೀರ ಕಷ್ಟವೆನಿಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ಪುಟಾಣಿಗಳ ನಿರ್ಧಾರ ಶ್ಲಾಘನೀಯವಾದದ್ದು.ಈ ಮಕ್ಕಳ ಒತ್ತಾಸೆಗೆ ನೀರೆದವರು ಸಿರಾ ಮಾನವ ಬಂದುತ್ವ ವೇದಿಕೆಯ ಪದಾಧಿಕಾರಿಗಳು.ವೇದಿಕೆ ವತಿಯಿಂದ ಕಳೆದ 13 ದಿನಗಳಿಂದ ನಗರದಲ್ಲಿರುವ ಅಸಹಾಯಕರು ಮತ್ತು ನಿರ್ಗತಿಕರು ನಗರಸಭೆಯ ಪೌರಕಾರ್ಮಿಕರು, ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ಸ್ವಚ್ಛಗೊಳಿಸುವ ಕಾರ್ಮಿಕರು, ಡಿಪೋದಲ್ಲಿ ರಕ್ಷಣೆ ಮಾಡುವ ರಕ್ಷಕರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿವರ್ಗದವರಿಗೆ ಆಹಾರದ ಪೊಟ್ಟಣ ಮತ್ತು ನೀರನ್ನು ವಿತರಿಸಲಾಯಿತು.ಆಹಾರ ವಿತರಣೆಯ‌ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಎಸ್. ರಂಗರಾಜು ಹಾಗೂ ಜಿಲ್ಲಾ ಸಂಯೋಜಕ ಧರಣಿ ಕುಮಾರ್, ವೇದಿಕೆ ಕಾರ್ಯಕರ್ತರಾದ ಮೋಹನ್, ಬೊಮ್ಮಣ್ಣ, ಅಹಿಂದ ಮುಖಂಡ ರಾಜೇಂದ್ರಪ್ರಸಾದ್‌ ಇತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?