Thursday, March 28, 2024
Google search engine
Homeತುಮಕೂರ್ ಲೈವ್ತುಮಕೂರು ದಿಗಂಬರ ಜೈನ ಸಂಘ ಚುನಾವಣೆ: ಮುಂದುವರೆದ ತಡೆಯಾಜ್ಞೆ

ತುಮಕೂರು ದಿಗಂಬರ ಜೈನ ಸಂಘ ಚುನಾವಣೆ: ಮುಂದುವರೆದ ತಡೆಯಾಜ್ಞೆ

ತುಮಕೂರು: ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾಶ್ವನಾಥ ಜಿನಮಂದಿರ ಸಂಘದ ಚುನಾವಣೆ ಫಲಿತಾಂಶ ಪ್ರಕಟಿಸಿದಂತೆ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ಮುಂದುವರೆಸಿ ತುಮಕೂರು ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿತು.

ಸಂಘಕ್ಕೆ ನಡೆದಿದ್ದ ಚುನಾವಣೆಯು ಕಾನೂನುಬಾಹಿರವಾಗಿದ್ದು, ಎಲ್ಲ ಸದದ್ಯರಿಗೆ ಮತದಾನದ ಹಕ್ಕು ನೀಡಿಲ್ಲ. ಸಂಘದ ಬೈಲಾದಂತೆ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾದಿಕಾರಿ ಮಾಡಿಲ್ಲ. ಚುನಾವಣೆ ಅಧಿಸೂಚನೆಯನ್ನು ಸಂಘದ ಬೈಲಾದ ನಿಯಮ ಉಲ್ಲಂಘಿಸಿ ಮಾಡಲಾಗಿದೆ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಪಚ್ಚೇಶ್ ಜೈನ್ ಸೇರಿ 32 ಮಂದಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಮೊದಲು ಒಂದನೇ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಲ್ಲಿಯೂ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಲಾಗಿತ್ತು. ಪ್ರಕರಣವು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಗಳು ವಾದ ಒಪ್ಪಿದ ನ್ಯಾಯಾಲಯವು ಕೆಳ ನ್ಯಾಯಾಲಯಕ್ಕೆ ವಾದಪತ್ರವನ್ನು ವಾಪಸ್ ಕಳುಹಿಸಿತ್ತು. ವಿಚಾರಣೆ ನಡೆಸಿದ ಕೆಳ ನ್ಯಾಯಾಲಯವೂ ಸಹ ಮೇಲಿನ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರೆಸಿದೆ.

ಪಚ್ಚೇನ್ ಜೈನ್ ಪರವಾಗಿ ವಕೀಲರಾದ ಎಸ್,ರಮೇಶ್, ಮಹಾವೀರ ಜೈನ್, ಸಿ.ಕೆ.ಮಹೇಂದ್ರ ವಕಾಲತ್ತು ವಹಿಸಿದ್ದಾರೆ.
ಸಂಘದ ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂಬ ಕಾರಣದಿಂದ ಸಂಘವನ್ನು ರಾಜ್ಯ ಸರ್ಕಾರವು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ನೋಂದಾಣಿಕಾರಿ ಅವರನ್ನು ನೇಮಕ ಮಾಡಿದೆ.

Publicstory.in

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?