Monday, December 11, 2023
spot_img
HomeUncategorized10 ಸಾವಿರ ನಿವೇಶನ, ರಫ್ತೋದ್ಯಮ ಕೇಂದ್ರ: ಸುರೇಶಗೌಡ ಭರವಸೆ

10 ಸಾವಿರ ನಿವೇಶನ, ರಫ್ತೋದ್ಯಮ ಕೇಂದ್ರ: ಸುರೇಶಗೌಡ ಭರವಸೆ

ತುಮಕೂರು; ಈ ಸಲ ಗೆಲುವು ನೀಡಿದರೆ ಕ್ಷೇತ್ರದ 10 ಸಾವಿರ ಜನರಿಗೆ ಉಚಿತ ನಿವೇಶನ ನೀಡುತ್ತೇನೆ. ಗ್ರಾಮಾಂತರ ಕ್ಷೇತ್ರದಲ್ಲಿ ಕೃಷಿ ರಫ್ತೋದ್ಯಮ ಕೇಂದ್ರ ಆರಂಭಿಸಿ ಇಡೀ ಜಗತ್ತಿನ ದೇಶಗಳಿಗೆ ಇಲ್ಲಿಂದ ಕೃಷಿ ಉತ್ಪನ್ನ ಗಳ ರಫ್ತು ಮಾಡುವಂತೆ ಮಾಡಲಾಗುವುದು ಎಂದು ಮಾಜಿ ಶಾಸಕ ಸುರೇಶಗೌಡ ಭರವಸೆ ನೀಡಿದರು.

ನಾಗವಲ್ಲಿ ಸಮೀಪ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ವೈ.ಎಚ್.ಹುಚ್ಚಯ್ಯ ಸೇರಿದಂತೆ ಅನೇಕರು ಇದ್ದರು.

ಪ್ರತಿ ರೈತನಿಗೆ ಉಚಿತ ಟಿ.ಸಿ.ಗಳನ್ನು ನೀಡುವ ಕಾರ್ಯಕ್ರಮವನ್ನೂ ಮುಂದುವರೆಸುತ್ತೇನೆ. ಉಳಿದಿರುವ ಎಲ್ಲ ರೈತರಿಗೂ ಉಚಿತವಾಗಿ ಬೋರ್ ವೆಲ್ ಗಳಿಗೆ ಟಿ.ಸಿ. ಕೊಡಿಸುತ್ತೇನೆ ಎಂದರು.

ನಾಗವಲ್ಲಿ ಸಮೀಪ ಬಿದರೆಕಟ್ಟೆಯ ವಿ.ವಿ. ಬಳಿ ಹೊಸದಾಗಿ ಪದವಿ ಕಾಲೇಜು ಆರಂಭಿಸಿ ಇಲ್ಲಿನ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವೆ ಎಂದು ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು