ಜಸ್ಟ್ ನ್ಯೂಸ್

Pay MLA: ಶಶಿಗೆ ಜಾಮೀನು

ತುಮಕೂರು; ಪೇ ಎಂ ಎಲ್ ಎ ಭಿತ್ತಿ ಪತ್ರ ಅಂಟಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಶಶಿಧರ್ ಹುಲಿಕುಂಟೆ ಮಠ ಅವರನ್ನು ಮೂರನೇ ಅಧಿಕ ಸಿವಿಲ್ ನ್ಯಾಯಾಲಯ ಜಾಮೀನು ಮೇಲೆ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿತು.

ಇಂದು ವಿಚಾರಣೆ ನ್ಯಾಯಾಧೀಶರು ಕೂಡಲೇ ಬಂಧಿತನನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸಿತು.

ಆರೋಪಿ ಪರವಾಗಿ ಹಿರಿಯ ವಕೀಲರಾದ ಸೂರ್ಯಮುಕುಂದರಾಜ್, ಬಿ.ಜೆ.ಮಹಾವೀರ ಜೈನ್ ವಾದಿಸಿದರು.

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಫೋಟೋ ಹಾಕಿ ಪೇ ಎಂಎಲ್ಎ ಅಂತ ಪೋಸ್ಟರ್ ಮುದ್ರಿಸಿ ನಗರದ ಬಸ್ ನಿಲುಗಡೆ ಹಾಗೂ ಗೋಡೆಗಳ ಮೇಲೆ ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಶಶಿ ಹುಲಿಕುಂಟೆ ಮಠ್ ಅವರನ್ನು ಪೊಲೀಸರು ಬಂಧಿಸಿದ್ದರು.

Comment here