Thursday, March 28, 2024
Google search engine
Homeಜನಮನಗ್ರಾಮಾಂತರ ಕ್ಷೇತ್ರದ ನನ್ನ ಕನಸಿಗೆ ನೀರೆರೆದ ಶ್ರೀಗಳನ್ನು ನೆನೆ ನೆನೆದು…

ಗ್ರಾಮಾಂತರ ಕ್ಷೇತ್ರದ ನನ್ನ ಕನಸಿಗೆ ನೀರೆರೆದ ಶ್ರೀಗಳನ್ನು ನೆನೆ ನೆನೆದು…


  • ಚುಂಚನಗಿರಿ ಶ್ರೀಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಭಾರತದ ನಾಥ ಪಂಥದ ಮೇರುಗಲ್ಲು, ಜಾತಿ, ಮತಗಳನ್ನು ಮೀರಿ ಬೆಳೆದ ಶ್ರೀಗಳ ಸಾಧನೆ ಅಗಾಧ, ಯಾವುದೇ ಜಾತಿಯ ರೈತಾಪಿ ಜನರ ಚುಂಬಕ ಶಕ್ತಿಯಾಗಿದ್ದವರು. ರೈತಾಪಿಗಳ ಅಸ್ಮಿತೆಯೇ ಆಗಿದ್ದ ಅವರ ಹತ್ತನೇ ಪುಣ್ಯಸ್ಮರಣೆ ಇಂದು. ಶ್ರೀಗಳನ್ನು ಕುರಿತ ಮಾಜಿ ಶಾಸಕ ಸುರೇಶಗೌಡರ ವಿಶೇಷ ಲೇಖನ ಇದು.

ಆಗಷ್ಟೇ ಅನೇಕ ಕನಸುಗಳ ಮೂಟೆಕಟ್ಟಿಕೊಂಡು ರಾಜಕಾರಣದ ಅಡಿ ಹೆಜ್ಜೆ ಇಟ್ಟಿದೆ, ಕೃಷಿ ಕುಟುಂಬದ ಹಿನ್ನೆಲೆಯ ನನಗೆ ಕೃಷಿಕರ ನೋವು ಗಳ ಅಗಾಧ ಅನುಭವ, ಬೇಕು-ಬೇಡಗಳ ಎರಡೂ ನೋಡಿ ದವ ನಾಗಿದ್ದೆ. ಹೀಗಾಗಿಯೇ ಗ್ರಾಮಾಂತರ ಕ್ಷೇತ್ರವನ್ನು ದೇಶದ ಮೊದಲ ನಂ -1 ಅಭಿವೃಧ್ಧಿಯ ಕ್ಷೇತ್ರ ಹಾಗೂ ಅಭಿವೃದ್ಧಿಯಲ್ಲಿ ‘ಗ್ರಾಮಾಂತ ರದ ಮಾದರಿ’ಯ ಹೊಸ ಪರಿಕಲ್ಪನೆ ಹುಟ್ಟು ಹಾಕಬೇಕೆಂಬ ನನ್ನ ತುಡಿತಕ್ಕೆ ನೀರೆರೆದವರು ಇಬ್ಬರು ಸಂತರು. ಸಿದ್ದಗಂಗಾ ಮಠಾಧೀಶರಾದ ಶ್ರೀಶ್ರೀ ಶಿವಕುಮಾರ ಸ್ವಾಮೀಜಿಗಳು, ಆದಿ ಚುಂಚನಗಿರಿ ಮಠಾದೀಶರಾದ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು.

  • ಇಂದು ಚುಂಚನಗಿರಿ ಶ್ರೀಗಳ ಹತ್ತನೇ ವರ್ಷದ ಸ್ಮರಣೆ, ಅವರ ನೆನಪು ನಮಗೆ ಸದಾ ಹಸಿರೇ. ವೈರಾಗ್ಯದ ಮೂರ್ತಿಯಾಗಿದ್ದ ಅವರು ಅತ್ಯಂತ ಕರುಣಾಮಯಿಗಳಾಗಿದ್ದರು. ಬಡವರನ್ನು ಕಂಡರೇ ಇನ್ನಿಲ್ಲದ ಪ್ರೀತಿ ಅವರಿಗೆ. ಬಡವರ ಸೇವೆ ಎನ್ನುವುದು ತಮಾಷೆಯ ಸಂಗತಿ ಅಲ್ಲ, ಅದು ಈಶ್ವರನ ಸೇವೆ ಮಾಡಿದಂತೆಯೇ ಸರಿ. ಜನಸೇವೆ ಮಾಡುವಾಗ ಯಾವುದೇ ಲೋಪಗಳಿಲ್ಲದಂತೆ ಮಾಡಬೇಕು. ಅದು ಈಶ್ವರನಿಗೆ ಮಾಡುವ ಸೇವೆ ಇದ್ದಂತೆ ಎಂದು ಅವರು ನಮಗೆಲ್ಲ ತಿಳಿ ಹೇಳುತ್ತಿದ್ದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿಯ ಯೋಜನೆಗಳ ನನ್ನ ಶ್ರಮದ ಹಿಂದೆ ಈ ಇಬ್ಬರು ಸಂತರ ಆರ್ಶೀವಾದವೇ ಕಾರಣವಾಗಿತ್ತು. ಹೆಬ್ಬೂರು-ಗೂಳೂರು ಭಾಗದ ತಲೆಮಾರುಗಳ ಕನಸೇ ಹೇಮಾವತಿ ಯ ನೀರನ್ನು ಕಾಣುವುದಾಗಿತ್ತು, ಬರಗಾಲದಲ್ಲಿ ಬೆಂದು ಹೋಗಿದ್ದ ಇಲ್ಲಿಗೆ ಗೂಳೂರು-ಹೆಬ್ಬೂರು ಏತ ನೀರಾವರಿಯ ಯೋಜನೆಯ ಜಾರಿ ಸುಲಭದ್ದಾಗಿರಲಿಲ್ಲ. ರಾಜ್ಯದಲ್ಲಿ ಆಗಿನ್ನು ಏತ ನೀರಾವರಿ ಯೋಜನೆ ಗಳೇ ಇರಲಿಲ್ಲ.

ಈಗಿನ ಎತ್ತಿನ ಹೊಳೆ ಯೋಜನೆಯೂ ಸಹ ಏತ ನೀರಾವರಿಯೇ ಪರಿಕಲ್ಪನೆ ಯೇ ಆಗಿದೆ. ಇಂಥದ್ದೇ ಪರಿಕಲ್ಪನೆ ಯನ್ನು ಒಳಗೊಂಡಿರುವ ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆ ರಾಜ್ಯದಲ್ಲಿ ಜಾರಿಯಾದ ರಾಜ್ಯದ ಮೊಟ್ಟಮೊದಲ ಯೋಜನೆಯಾಗಿತ್ತು.

  • ಈ ಯೋಜನೆಯ ಜಾರಿಗಾಗಿ ಕಡತಗಳನ್ನು ಕಂಕುಲಲ್ಲಿ ಇಟ್ಟುಕೊಂಡು ನಾನು ವಿಧಾನಸೌಧ ತಿರುಗುವಾಗ ವ್ಯಂಗ್ಯವಾಡಿದವರೇ ಹೆಚ್ಚು. ಯೋಜನೆಯ ಜಾರಿ ಕೇವಲ ರಾಜಕೀಯ ಭರವಸೆಯಷ್ಟೇ ಎಂದೇ ಹಲವರು ನಂಬಿದ್ದರು. ಆದರೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾತುಗಳು ಯಾವಾಗಲೂ ಧೈರ್ಯ ತುಂಬುತ್ತಿದ್ದವು.
  • ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ದಗಂಗೆಯ ಸಂತ ಶ್ರೀಶ್ರೀ ಶಿವಕುಮಾರಸ್ವಾಮೀಜಿ ಗಳು ನನ್ನ ಬೆನ್ನ ಹಿಂದೆ ನಿಂತಿದ್ದರು. ಈ ಇಬ್ಬರ ಸಂತರು ಬಡ ಜನರ ಸಂಕಷ್ಟಗಳ ನಿವಾರಣೆ ಗಾಗಿ ತಮ್ಮೆಲ್ಲ ತಪೋ ಶಕ್ತಿಯನ್ನು ನನಗೆ ಧಾರೆ ಎರೆಯದಿದ್ದರೆ ಗ್ರಾಮಾಂತರ ಕ್ಷೇತ್ರದ ನೀರಾವರಿ ಯೋಜನೆಗಳು ಸಾಕಾರ ವಾಗುತ್ತಿರಲಿಲ್ಲ ಎಂದು ನನಗೆ ಅನೇಕ ಸಲ ಅನ್ನಿಸಿದೆ.

ಶಿಕ್ಷಣ, ಅನ್ನ ದಾಸೋಹದ ಹೆಸರಾದ ಶ್ರೀಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಯವರಿಗೆ ಒಂದೊಮ್ಮೆ ಗ್ರಾಮಾಂತರ ಕ್ಷೇತ್ರದಲ್ಲಿ ಶಿಕ್ಷಣದ ಕುರಿತ ನನ್ನ ದೂರದೃಷ್ಟಿ, ಕನಸು ಗಳನ್ನು ಹಂಚಿ ಕೊಂಡಿದ್ದೆನು. ಗಟ್ಟಿಯಾದ ಸರಕಾರಿ ಶಾಲೆಗಳಿಗೆ ಅಡಿಪಾಯ, ದೇಶದಲ್ಲಿ ನಂಬರ್ ಒನ್ ಸರಕಾರಿ ಶಾಲೆಗಳು, ವಿಶ್ವ ವಿದ್ಯಾನಿಲಯ ಹೀಗೆ ಅವರೊಂದಿಗಿನ ನನ್ನ ಮಾತುಗಳು ಹೀಗಲೂ ನನ್ನೊಂದಿಗೆ ಅನುರಣಿಸುತ್ತವೆ.

ಇಂದು ಅವರ ಹತ್ತನೇ ವರ್ಷದ ಪುಣ್ಯ ಸ್ಮರಣೆ. ಅವರ ಆಶೀರ್ವಾದ, ಕೃಪೆ ನನ್ನ ಗ್ರಾಮಾಂತರ ಜನರ ಎಲ್ಲರ ಮೇಲೆ ಆಗಲಿ ಎಂದು ಸ್ಮರಿಸುತ್ತೇನೆ. ಮತ್ತೊಮ್ಮೆ ಗ್ರಾಮಾಂತರದ ಅಭಿ ವೃದ್ಧಿಯ ಶಕೆ ಆರಂಭಿಸಲು ಶ್ರೀಗಳು ನನಗೆ ಆಶೀರ್ವಾದ, ಕೃಪೆ ತೋರಲಿ ಎಂದು ಅವರಲ್ಲಿ ಸ್ಮರಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?