Saturday, July 27, 2024
Google search engine
Homeಜನಮನಮಹಾ ಮಾನವತವಾದಿ ಬಸವಣ್ಣನವರ ಸಮಷ್ಠಿಯಸಾಮಜಿಕ ಪ್ರಜ್ಞೆ ......

ಮಹಾ ಮಾನವತವಾದಿ ಬಸವಣ್ಣನವರ ಸಮಷ್ಠಿಯಸಾಮಜಿಕ ಪ್ರಜ್ಞೆ ……

ಲಕ್ಷ್ಮೀರಂಗಯ್ಯ ಕೆ.ಎನ್


ಸಮ ಸಮಾಜದ ನಿರ್ಮಾತೃವಾಗಿ ಬಸವಣ್ಣನವರ ಇಂದಿನ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ.

ಈ ನೆಲದ ಮೂಲ ಪರಂಪರೆಗೆ ಜ್ಞಾನದ ದೀವಟಿಗೆಯನ್ನು ನೀಡಿ ಸಾಮಾಜೋಧಾರ್ಮಿಕ ಕ್ರಾಂತಿಗೆ ಕಾರಾಣೀಭೂತರಾದವರು.

ಆದ್ಯಾತ್ಮಿಕತೆಗೆ ಮಾನವ ಪ್ರೇಮವನ್ನು ನಿಸರ್ಗದೊಳಗಣ ಒಡನಾಡಿತ್ವದೊಳಗಣ ಬಂದವ್ಯವನ್ನು ಬೆಸೆದು ಮನುಷ್ಯ ಶ್ರೇಷ್ಟತೆಯ ಮಾನವೀಯ ಮೌಲ್ಯಗಳನ್ನು ವೃದ್ದಿಸಿ ಜಾತಿಯ ಜಾಡ್ಯ, ಕರ್ಮಸಿದ್ದಾಂತದ ಮತ್ತು ವರ್ಣ ವ್ಯವಸ್ಥೆಯೊಳಗಿನ ಮಲಿನತೆ ತೊಳೆಯಲು ನವ ಚಿಂತನೆಯನ್ನು ವಚನ ಚಳವಳಿಯನ್ನು ಅನುಭಾವಿಕತೆಯ ಮೂಲಕ ಜನ ಸಮಾನ್ಯರಿಗೆ ಪ್ರೇರಣೆಯಾಗಿಸಿ ಲಿಂಗಭೇದ, ವರ್ಗ, ಜಾತಿ,ತಾರತಮ್ಯ ತೊಲಗಿಸಿ ಸ್ಥಾವರ ದೇವಾಲಯಗಳನ್ನು ನಿರಾಕರಿಸುತ್ತಾ ವೈದಿಕಶಾಹಿ ವ್ಯವಸ್ಥೆ ಕಲ್ಪಿಸಿದ ಮಿಥ್ಯೇ ಕಲ್ಪನೆಗಳನ್ನು ಶಿಥಿಲಗೊಳಿಸಲು ಭಕ್ತಿ ಮಾರ್ಗದ ಮೂಲಕ ಸಮಾನೆತೆಯ ಬಗ್ಗೆ ಅರಿವು ಮೂಡಿಸಿ ಸತ್ಯ ಶುದ್ದ ಕಾಯಕ ಮತ್ತು ದಾಸೋಹಗಳ ಮೂಲಕ ಕಲ್ಯಾಣ ರಾಜ್ಯದ ಅರಸ ಬಿಜ್ಜಳನ ಆಡಳಿತದಲ್ಲಿಯೇ ಕೋಶಾಧಿಕಾರಿಯಾಗಿ, ದಂಡನಾಯಕರಾಗಿ, ಮಹಾ ಮಂತ್ರಿಯಾಗಿ ಕಲ್ಯಾಣ ರಾಜ್ಯವನ್ನು ಸಂಪತ್ ಭರಿತವನ್ನಾಗಿಸಿದವರು.

ಪುರೋಹಿತಶಾಹಿ ವ್ಯವಸ್ಥೆ ದಿಕ್ಕರಿಸಿ ಬಂದವರಿಗೆ ಕಾರ್ಮ ಸಿದ್ದಾಂತಕ್ಕೆ ಬದಲಾಗಿ ಕಾಯಕ ಸಿದ್ದಾಂತ ಪ್ರತಿಪಾದಿಸಿ ಹೊಸ ಚಿಂತನೆಗಳನ್ನೂ ಮುಕ್ತವಾಗಿ ಅಭಿವ್ಯಕ್ತಿಸಿಕೊಳ್ಳಲು ಇಷ್ಟ ಲಿಂಗದಾರಿಗಳನ್ನಾಗಿ ಮಾಡಿ ಮಹಾ ಮನೆಯ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಎಲ್ಲಾ ವರ್ಣದ ಶರಣರು ಸೇರಿ ತಮ್ಮ ಅನುಭವ ಸಂವೇದಿತಾ ಸಾರಗಳನ್ನು ಹಂಚಿಕೊಳ್ಳಲು ಆವಕಾಶ ಕಲ್ಪಿಸಿದರ ಫಲ ಇಂದು ಕನ್ನಡ ಭಾಷೆ ವಚನ ಪರಂಪರೆಯಿಂದ ಶ್ರೀಮಂತಗೊಂಡಿದೆ ಎಂದರೆ ತಪ್ಪಾಗಲಾರದು.

“ದಯವಿಲ್ಲದ ಧರ್ಮವದೇವುದಯ್ಯಾ, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿಯು, ದಯವೇ ಧರ್ಮದ ಮೂಲವಯ್ಯ ಕೂಡಲ ಸಂಗಯ್ಯನಂತಲ್ಲದೊನಲ್ಲನಯ್ಯಾ “ ಎಂಬ ವಚನ ಮಾನವೀಯ ಮೌಲ್ಯಗಳನ್ನು ,ಬದುಕುವ ರೀತಿಯನ್ನೂ,ಸರಳವಾಗಿ ತಿಳಿಸುವವಚನ ಸಾರ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಕೋಮುವಾದಿತನವನ್ನೂ ಬಂಡವಾಳವಾಗಿಸಿಕೊಂಡು ಪ್ರಭುತ್ವದ ಆಡಳಿತ ಚುಕ್ಕಾಣಿ ಹಿಡಿಯುವ ಪಕ್ಷಗಳಿಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದಯೆ ಧರ್ಮದ ಉದಾತ್ತಾ ಚಿಂತನೆಗಳನ್ನೂ ಪ್ರಸ್ತುತದವರೆಗೂ ವಿಸ್ತರಿಸಿದ ಮಹಾ ಚೇತನ ಬಸವಣನವರು ಹುಟ್ಟಿದ್ದು ಬಾಗೇವಾಡಿಯಲ್ಲಿ ತಂದೆ ಮಾದರಸ ,ತಾಯಿ ಮಾದಲಾಂಭಿಕೆ.

ಇವರ ಜನನದ ಕಾಲವನ್ನೂ ಕ್ರಿ.ಶ.1135ಎಂದು ಊಹಿಸಿದ್ದಾರೆ. ಇವರಿಗೆ ದೇವರಾಜನೆಂಬ ಸಹೋದರ ಅಕ್ಕನಾಗಮ್ಮನೆಂಬ ಸಹೋದರಿ ಇದ್ದರೆಂಬುದು ತಿಳಿದು ಬಂದಿದೆ.

ವರ್ಣಬೇಧ ,ವರ್ಗಬೇದ, ಲಿಂಗಬೇದಗಳು ಬಾಲ್ಯದಲ್ಲಿ ಬಸವಣ್ಣನವರಿಗೆ ಹೆಚ್ಚು ಆಘಾತಗೊಳಿಸಿದ ವಿಷಯಗಳಗಿದ್ದವು ಆವುಗಳ ಸುಕ್ಷ್ಮತೆ ಅರಿಯಲು ತನ್ನ ಅಕ್ಕನಾಗಮ್ಮನಿಗೆ ಇಲ್ಲದ ದ್ವಿಜ ಸಂಸ್ಕಾರ ತನಗೂ ಬೇಡವೆಂದು ತಿರಸ್ಕರಾದ ಪ್ರತಿರೋದ ವ್ಯಕ್ತಪಡಿಸುವ ವ್ಯಕ್ತಿತ್ವ ಬಸವಣ್ಣನವರದ್ದಾಗಿತ್ತು.

ಜಡ್ಡುಗಟ್ಟಿದ ಸಂಪ್ರಾದಾಯಗಳನ್ನೂ ಬುಡಮೇಲು ಮಾಡುವ ವಿಸ್ತಾರ ರೂಪವಾಗಿ “ದೇಹವೇ ದೇವಾಲಯವಾದ ಬಳಿಕ ಕತ್ತಲು ಕೋಣೆಯಲ್ಲಿ ಬಂದಿತನಾಗಿ ಪೂಜಾರಿಗಳ ಕೈಗೊಂಬೆಯಾಗಿರುವ ದೇವರು ದೇವರಲ್ಲ, ಬ್ರಹಾಂಡವೇ ದೇವರು, ಪ್ರಕೃತಿಯೇ ದೇವರು,ವಿಶ್ವವೇ ಲಿಂಗರೂಪದಲ್ಲಿ ಎನ್ನ ಹಸ್ತಕ್ಕೆ ಬಂದುಚುಳುಕದಿರಯ್ಯಾ “ಎಂಬ ಮಾತು ಕ್ರಿ.ಪೂರ್ವದಲ್ಲಿ ಜಗತ್ತಿನ ಬೆಳಕಾಗಿರುವ ಮಹಾನ್ ದಾರ್ಶನಿಕ ಮಾನವತವಾದಿ ತಥಾಗಥ ಗೌತಮಬುದ್ದರ ಚಿಂತನೆಗಳು ಒಂದೇಯಾಗಿ ಕಾಕತಾಳಿಯವೆಂಬಂತೆ ವಿಸ್ತಾರಗೊಳ್ಳವುದನ್ನೂ ಗಮನಿಸಬಹುದು,

ಬುದ್ಧ ಗುರುವಿನ ತತ್ವ ಚಿಂತನೆಗಳಿಗೂ ಮಹಾ ಮಾನವತವಾದಿ ಬಸವ ಚಿಂತನೆಗಳಿಗೂ ಹೋಲಿಕೆಯಾಗುವ ವಸ್ತುನಿಷ್ಠ ವಿಷಯಗಳೆಂದರೆ ನಿಸರ್ಗ ಮತ್ತು ಮನುಷ್ಯ ಪ್ರೇಮ ,ಅನುಭವ ಮತ್ತು ಅನುಭಾವದ ಅನುಸಂದಾನದೋಳಗಿನ ಆಧ್ಯಾತ್ಮಿಕತೆಯಲ್ಲಿನ ಪರಿಪಕ್ವತೆಯಲ್ಲಿನ ಅಂತಿಮಗುರಿಯೋಂದೇ ಅದು ಮಾನವೀಯ ಅಂತಾರ್ಯದ ಯೋಗ, ದ್ಯಾನ , ವಿಪಸನ ಕ್ರಿಯೆ,ಜೀವನ ಸಾಕ್ಷತ್ಕಾರದ ಅವಿಷ್ಕಾರಗಳ ನೆಲೆಯೋಳಗಿನ ಮನಸ್ಸಿನ ಪ್ರಸನ್ನತೆ ಮತ್ತು ನೈತಿಕ ಜೀವನ ಮೌಲ್ಯಗಳ ಸಂಸ್ಕರಣೆಗಳೋಳಗಿನ ಸಮಾಜೋಧಾರ್ಮಿಕ ಸುಧಾರಣೆಯೇ ಆಗಿದೆ.

ಬಸವಣ್ಣನವರ ವಚನ “ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವಪರಿ” ವಚನದ ಆಶಯವೂ ಬುದ್ದರ ಪಂಚಶೀಲ ತತ್ವಗಳ ಸಾರದ ಆಶಯವೂ ಒಂದೇಯಾಗಿದೆ “ ಆಹಿಂಸೆಯನ್ನೂ ಪಾಲಿಸುವುದು ,ಸತ್ಯನಿಷ್ಠೆಯಾಗಿರುವುದು ಕಳ್ಳತನ ಮಾಡದಿರುವುದು, ಕಾಮ ನಿಷ್ಠೆ ಪಾಲಿಸುವುದು, ಮಾದಕ ಮತ್ತು ಮದ್ಯ ವ್ಯಸನಗಳಿಂದ ಮುಕ್ತವಾಗಿರುವುದು “ ಇವುಗಳ ಆಶಯವೂ ಸಮಾಜ ಸುಧಾರಣೆಗಾಗಿ ವ್ಯಕ್ತಿ ನೈತಿಕತೆ ಸರಿದೂಗಿಸಿಕೊಳ್ಳುವ ವ್ಯಕ್ತಿ ಮತ್ತು ಸಮಾಜ ಸುಧಾರಕರಾಗಿ ಕಾಣುವ ಚಿಂತನೆಗಳು ಕಾಯಕ ಸಿದ್ದಾಂತದೊಳಗಿನ ಅನುಭವಗಳ ಸಾರ ಅಭಿವ್ಯಕ್ತಿ ಗೊಳ್ಳುವ ವಚನಗಳ್ಳಲ್ಲಿ ವ್ಯಕ್ತವಾಗುವ ಅನುಭವದ ವಾಸ್ತವಿಕತೆಯನ್ನೂ ಗೌತಮ ಬುದ್ದರು ಕಾರಣ ಪರಿಣಾಮದ ತತ್ವ ಸಿದ್ದಾಂತವನ್ನು ಮನುಷ್ಯ ಸಹಜ ಭಾವನೆಗಳಲ್ಲಿ ಮಾನಃಶಾಸ್ತ್ರಜ್ಜ್ಞಾರಾಗಿ ಸಮಾಜದ ಒರೆಕೋರೆಗಳನ್ನೂ ತಿದ್ದಿರುವುದು ಬಸವಣ್ಣನವರ ಲೋಕದ ಡೊಂಕ ನೀವೇಕೆ ತಿದ್ದುವಿರಿ… ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ …ಎಂಬುವ ಮಾತು ವ್ಯಕ್ತಿ ಹಾಗೂ ಸಮಾಜದ ಮತ್ತೊಂದು ಆಯಾಮವನ್ನು ಅನವರಣಗೊಳಿಸುತ್ತದೆ.

ಅದು ಮನುಷ್ಯ ಸಂಘ ಜೀವಿಯೆಂದು ಇದಕ್ಕೆ ಶರಣ ಪರಪರೆಯಲ್ಲಿ ವಿಶಿಷ್ಟ ಸ್ಥಾನವಿದ್ದು ಅನುಭವ ಮಂಟಪ ಕಟ್ಟಿಕೊಂಡು “ಗೀತಾ ಬಲ್ಲಾತ ಜಾಣನಲ್ಲ ಮಾತು ಬಲ್ಲಾತ ಜಾಣನಲ್ಲ “ಎಂದುಕೊಂಡೆ ನುಡಿದರೆ ಮುತ್ತಿನಹಾರದಂತಿರಬೇಕು ..ಎಂಬತಂಹ ವಚನಗಳು ಸೃಜಿಸಿರುವುದು ಬಸವಣ್ಣನವರ ಮತ್ತೊಂದು ವೈಶಿಷ್ಟ್ಯ.ಮನಸ್ಸಿನ ಬಗ್ಗೆ “ಅತ್ತಲಿತ್ತ ಹೋಗದಂತೆಹೆಳವನ ಮಾಡಯ್ಯ ತಂದೆ,ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ, ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಿಸದಂತೆ ಇರಿಸು ಕೂಡಲಸಂಗಮದೇವಾ.” ವಚನ ತಾತ್ಪರ್ಯವನ್ನೂ ಯುವ ಜನತೆ ಆರ್ಥ ಮಾಡಿಕೊಂಡು ಪ್ರಸ್ತುತ ದಿನಗಳಲ್ಲಿ ಮನಸ್ಸನ್ನು ನಿಯಂತ್ರಿಸಿಕೊಂಡು ಶುದ್ದ ಜೀವನ ಮಾಡುವ ಅನಿವಾರ್ಯತೆ ಉಂಟಾಗಿದೆ ಆಧುನಿಕ ಜಗತ್ತು ಇಂದು ಆನೇಕ ಆನಿಯಂತ್ರಿತ ಸಮಸ್ಯೆಗಳನ್ನು ತಂದೊಡ್ಡುತ್ತಿದೆ ನಿರುದ್ಯೋಗ, ಬಡತನ ಮೂಡನಂಬಿಕೆ ಮದ್ಯವ್ಯಸನ ಆತ್ಯಚಾರ ಬ್ರಷ್ಟಚಾರ ಸಮಾಜದೋಳಗೆ ಕೋಮುವಾದ ಜಾತಿಪದ್ದತಿ ಮತ್ತಷ್ಟು ಭದ್ರವಾಗಿ ಬೇರೂರಿದೆ ಇವುಗಳಿಗೆ ಬಸವಣ್ಣ ರವರಾದಿಯಾಗಿ ಆನೇಕ ಜನ ಚಿಂತಕರು ಆದರ್ಶಗಳನ್ನೂ ನೀಡಿದ್ದಾರೆ .

ಅವುಗಳನ್ನು ಪಾಲಿಸುವ ಮತ್ತು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಕಾಲಕಾಲಕ್ಕೆ ಸಾದು ಸಿದ್ದ ಶರಣ ಪರಂಪರೆ ನಮ್ಮನ್ನು ಎಚ್ಚರಿಸುತ್ತಾ ಬಂದಿವೆ. ಅದರಲ್ಲೂ ವೈಚಾರಿಕತೆಯ ಉತ್ತುಂಗದಲ್ಲಿ ಶರಣ ಪರಂಪರೆಯ ಸಾಹಿತ್ಯ ಉತ್ಕೃಷ್ಟವಾಗಿದೆ ಎಂದರೆ ತಪ್ಪಾಗಲಾರದು.

,ಇದಕ್ಕೆ ಬಸವಣ್ಣನವರ ಸಮಷ್ಟಿಯ ಪ್ರಜ್ಞೆಯೋಳಗೆ ಶ್ರಮ ಮತ್ತು ತ್ಯಾಗ ಬಹಳಷ್ಟಿದೆ … ಹಾಗಾಗಿಯೇ ಅಸ್ಪೃಶ್ಯತೆ ಬುಡಸಹಿತ ಕಿತ್ತು ಹಾಕಲು ಸಂಕಲ್ಪ ತೊಟ್ಟು ಹನ್ನೆರಡನೆ ಶತಮಾನದ ಬಿಜ್ಜಳನ ಕಾಲದಲ್ಲಿ ಮಹಾಶರಣ ಹರಳಯ್ಯನವರ ಮಗ ಮತ್ತು ಮದುವರಸನ ಮಗಳಿಗೆ ಅಂತರ್ಜಾತಿ ವಿವಾಹ ಮಾಡಿ ಕಲ್ಯಾಣ ಕ್ರಾಂತಿಯ ಮೂಲಕ ಜಂಗಮರಾದರು.

ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸೆಗೊಂಡೆ ನಾದಡೆ ನಿಮ್ಮಾಣೆ!ನಿಮ್ಮ ಪುರಾತನರಾಣೆ ತಲೆದಂಡ!ತಲೆದಂಡ! ಕೂಡಲಸಂಗಮದೇವಾ.. ಕಾಯಕ ಕೀಳೆಂದು ಪರಿತಪ್ಪಿಸುತ್ತಿದ ಶ್ರಮಿಕವರ್ಗಕ್ಕೆ ಸ್ವಾಂತ್ವನ ಹೇಳಿದ ವಚನ ಆದರ್ಶವಾಗಿ ಇಂದಿನ ಸಮಾಜಿಕ ಆರ್ಥಿಕ ರಾಜಕೀಯ ಆಸಮಾನತೆಯಲ್ಲಿ ಕಾಯಕತ್ವವನ್ನು ಸಂಪೂರ್ಣ ನಿಸ್ವರ್ಥದಲ್ಲಿ ನೆಲೆಗೊಳಿಸಿ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಕಾಯಕವೇ ಕೈಲಾಸ ಎಂಬ ಪರಿಕಲ್ಲನೆಯಲ್ಲಿಉತ್ತರಗಳನ್ನು ಕಂಡುಕೊಂಡಲ್ಲಿ ಮಾತ್ರವೇ ಬವಣ್ಣನವರಿಗೆ ನಾವೂ ಸಲ್ಲಿಸುವ ಮಹಾನ್ ಗೌರವವಾಗುತ್ತದೆ


ಲಕ್ಷ್ಮೀರಂಗಯ್ಯ ಕೆ.ಎನ್
ಸಂಶೋಧನಾರ್ಥಿ.
ಸಮಾಜಕಾರ್ಯ ಆದ್ಯಯನ ಮತ್ತು ಸಂಶೋಧನಾ ವಿಭಾಗ ತುಮಕೂರುವಿಶ್ವವಿದ್ಯಾಲಯ.ತುಮಕೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?