Thursday, April 18, 2024
Google search engine
Homeತುಮಕೂರು ಲೈವ್ನನಗೆ ಮಾಟ ಮಂತ್ರ ಮಾಡಿಸಿದ ಶಾಸಕರು!

ನನಗೆ ಮಾಟ ಮಂತ್ರ ಮಾಡಿಸಿದ ಶಾಸಕರು!

ತುರುವೇಕೆರೆ: ಕೊಬ್ಬರಿಗೆ ಬೆಂಬಲ ಬೆಲೆ ಕೊಡುವಲ್ಲಿ ನಮ್ಮ ಸರ್ಕಾರದ ನಿರ್ಲಿಪ್ತ ಧೋರಣೆ, ಕ್ಷೇತ್ರದ ಜನರ ಮನಮುಟ್ಟವಲ್ಲಿ ಎಲ್ಲೊ ಒಂದು ಕಡೆ ಎಡವಿದ್ದು ನನ್ನ ಸೋಲಿಗೆ ಕಾರಣವಾಗಿರಬಹುದು. ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಕ್ಷೇತ್ರ ಪ್ರವಾಸ ಮಾಡಿ ಜನರ ಭರವಸೆ ಗಳಿಸುವೆ ಎಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಹೇಳಿದರು.


ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ, ಮುಖಂಡ ಆತ್ಮಾವಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
‘ಶಾಸಕ ಎಂ.ಟಿ.ಕೃಷ್ಣಪ್ಪ ತನ್ನ ಪಕ್ಷದ ಮುಖಂಡ ಬಾಣಸಂದ್ರ ರಮೇಶ್ನ ಬಳಿ ಚುನಾವಣಾ ಖರ್ಚಿಗೆ ಆರ್ಥಿಕ ಸಂಪನ್ಮೂಲವಿದ್ದು ಆತನನ್ನು ಬಿಜೆಪಿ ಶಾಸಕ ಜಯರಾಮ್ ಅಪಹರಣ ಮಾಡಿಸಿದ್ದಾನೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟು ಕುತಂತ್ರದ ರಾಜಕಾರಣ ಮಾಡಿ ಗೆಲುವು ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು’.


ಚುನಾವಣಾ ಸಮಯದಲ್ಲಿ ನನಗೆ ಕೇಡಾಗುವಂತೆ ಎಂ.ಟಿ.ಕೃಷ್ಣಪ್ಪ ನನ್ನ ತೋಟದ ಮನೆಯ ಜಮೀನಿನಲ್ಲಿ ಮಾಟ ಮಂತ್ರದ ವಾಮಾಚಾರ ಮಾಡಿ ಆಮೂಲಕ ರಾಜಕೀಯ ಹಿಡಿತ ಸಾಧಿಸುವ ದುಸ್ಕೃತ್ಯ ಎಸಗಿದ್ದಾರೆ ಆರೋಪಿಸಿದ ಅವರು ನನಗೆ ಇಂತಹ ಆಟ ಆಡೋದಿಕ್ಕೆ ಬರೋದಿಲ್ಲ ಎಂದು ಆರೋಪಿಸಿದರು.


ನಾನು ಕಷ್ಟಪಟ್ಟು ಉದ್ಯಮದಲ್ಲಿ ದುಡಿದು, ಗ್ರಾಮ ಪಂಚಾಯಿಂದ ಗೆದ್ದು ಶಾಸಕನಾದವನು. ನಾನು ಇನ್ನೂ 20 ಚುನಾವಣೆ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ನಾನು ಮಾನಸಿಕವಾಗಿ ಸೋತಿಲ್ಲ, ಧೈರ್ಯಗೆಡುವುದೂ ಇಲ್ಲ.
ನನ್ನ ಕಾರ್ಯಕರ್ತರಿಗೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ, ದೌರ್ಜನ್ಯವಾದರೆ ನನ್ನ ಇನ್ನೊಂದು ಮುಖವನ್ನು ಎಂ.ಟಿ.ಕೃಷ್ಣಪ್ಪ ನೋಡಿಲ್ಲ ನಾನು ಜೈಲಿಗೆ ಹೋದರೂ ಪರವಾಗಿಲ್ಲ ಅದಕ್ಕೆ ತಕ್ಕ ಪ್ರತೀಕಾರ ತೀರಿಸುವೆ ಎಂದು ಗುಡುಗಿದರು.

ಜೆಡಿಎಸ್ ಕಾರ್ಯಕರ್ತರು ಬಾಲ ಬಿಚ್ಚಿದರೆ ಅಥವಾ ಅವರು ಬಿಜೆಪಿ ಕಾರ್ಯಕರ್ತರಿಗೆ ಒಂದು ಒಡೆದರೆ ನೀವು ಎರಡೇಟಾಕಿ ಮುಂದಿನದು ನಾನು ನೋಡಿಕೊಳ್ಳುತ್ತೇನೆಂದು ಕಾರ್ಯಕರ್ತರಿಗೆ ಅಭಯ ನೀಡಿದರು.


ನನ್ನ ಅವಧಿಯಲ್ಲಿ ಮಂಜೂರಾದ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳು ಚುನಾವಣಾ ನೀತಿ ಸಂಹಿತೆಯಿಂದ ಸ್ಥಗಿತಗೊಂಡಿದ್ದು ಅವುಗಳ ಬಗ್ಗೆ ಕರ ಪತ್ರ ಹೊರಡಿಸಿ ಪ್ರತಿ ಮನೆಮನೆಗ ತಲುಪಿಸುವೆ.
ಅತ್ತಾ ಜೆಡಿಎಸ್ ರಾಜ್ಯದಲ್ಲಿ ಠೇವಣಿ ಕಳೆದುಕೊಂಡಿದೆ. ಇತ್ತಾ ಕಾಂಗ್ರೆಸ್ ಕೈಯಲ್ಲಿ ರಾಜ್ಯದ ಅಧಿಕಾರ ಇದೆ. ಹಾಲಿ ಶಾಸಕರು ಕೇವಲ 20 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತರಲು ನೋಡೋಣ ಎಂದು ಸವಾಲೆಸೆದರು.


ನಮ್ಮ ಸರ್ಕಾರದ ವೈಫಲ್ಯ, ನಾನು ಸೇರಿದಂತೆ ಕಾರ್ಯಕರ್ತರು ಜನರ ವಿಶ್ವಾಸ ತೆಗೆದುಕೊಳ್ಳುವಲ್ಲಿ ಪ್ರಮಾದವಾಗಿರುವುದು, ಕಾಂಗ್ರೆಸ್ ನ ಅವಿವೇಕಿತನದ ಗ್ಯಾರಂಟಿ ಕಾರ್ಡ್ನ ಭರವಸೆಗಳು ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗೆ ಸೋಲಾಗುವಂತೆ ಮಾಡಿದೆ.
ಜೆ.ಸಿ.ಮಾಧುಸ್ವಾಮಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ತುಮಕೂರು ಜಿಲ್ಲೆಗೆ ಗೌರವ ಬರುತ್ತದೆಂದು ಮಾಜಿ ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿಯವರಲ್ಲಿ ಮನವಿ ಮಾಡಿದ್ದೇನೆ ಎಂದರು.


ನಾನು ಸೋತೆನೆಂದು ಎಲ್ಲೂ ಹೋಗುವುದಿಲ್ಲ ನಿಮ್ಮ ಸೇವೆಗೆ ನಾನು ಕ್ಷೇತ್ರದಲ್ಲಿ ಯಾವಾಗಲೂ ಸಿದ್ದನಿದ್ದೇನೆ ಎಂದರು.


ಇದೇ ವೇಳೆ ಅನೇಕ ಬಿಜೆಪಿ ಮುಖಂಡರು ಪಕ್ಷದ ಸೋಲಿಗೆ ಮತ್ತು ಮುಂದಿನ ದಾರಿಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಮೃತ್ಯುಂಜಯ, ಅಂಜನ್ ಕುಮಾರ್, ಪ್ರಭಾಕರ್, ವಿ.ಟಿ.ವೆಂಕಟರಾಮಯ್ಯ, ಚಿದಾನಂದ್, ಗಿರೀಶ್ , ಸಿ.ಎನ್. ಪಾಳ್ಯದ ರಾಮಕೃಷ್ಣ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?