Tuesday, April 16, 2024
Google search engine
Homeನಮ್ಮೂರುಪಾವಗಡದೊಂದಿಗೆ ಶ್ರೀಗಳ ಸಂಬಂಧ

ಪಾವಗಡದೊಂದಿಗೆ ಶ್ರೀಗಳ ಸಂಬಂಧ

ಪಾವಗಡ: ಪಟ್ಟಣದ ರಾಮಕೃಷ್ಣ ಸೇವಾಶ್ರಮ ಎಂದರೆ ಪೇಜಾವರ ವಿಶ್ವೇಶ್ವರ ತೀರ್ಥರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ.

ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜಿ ಅವರ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶ್ರೀಗಳು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಮಕೃಷ್ಣ ಸೇವಾಶ್ರಮದ ವತಿಯಿಂದ ಬರಗಾಲದಲ್ಲಿ ಜಾನುವಾರುಗಳಿಗಾಗಿ ಉಚಿತವಾಗಿ ಮೇವು ವಿತರಿಸುವ ಕಾರ್ಯಕ್ರಮಕ್ಕೆ ಕಳೆದ ಬಾರಿ ಸ್ವತಃ ಅವರು ಆಗಮಿಸಿ ಚಾಲನೆ ನಿಡಿದ್ದರು. ರೋಗಿಗಳಿಗೆ ಹಾಲು, ಹಣ್ಣು ನೀಡಿ ಆಶೀರ್ವಾದ ಮಾಡಿದ್ದರು.

ವಿವೇಕಾನಂದ ಸಂಘಟಿತ ಆರೋಗ್ಯ ಕೆಂದ್ರ ಆವರಣದಲ್ಲಿ ನೂತನ ಆಸ್ಪತ್ರೆ ಕಟ್ಟಡಕ್ಕೆ ಅವರು ಸ್ವ ಹಸ್ತದಿಂದ ಶಂಕು ಸ್ಥಾಪನೆ ನೆರವೇರಿಸಿದ್ದರು.

ಹೀಗೆ ಅವರು ಪಾವಗಡಕ್ಕೆ ಆಗಮಿಸಿ ಆಶ್ರಮದ ಕಾರ್ಯಕ್ರಮಗಳಲ್ಲಿ ಸಾನಿಧ್ಯ ವಹಿಸಿದ್ದ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಜಪಾನಂದಜಿ ಎಂದರೆ ಅವರಿಗೆ ಸಾಕಷ್ಟು ಆಪ್ಯಾಯತೆ. ಜಪಾನಂದಜಿ ಅವರಿಗೂ ಪೇಜಾವರ ಶ್ರೀ ಎಂದರೆ ಗೌರವ, ಅಭಿಮಾನ.

ಪ್ರವಾಹ ಪೀಡಿತ ಪ್ರದೇಶಕ್ಕೆ ಕರೆದೊಯ್ಯುವಂತೆ ಪೆಜಾವರ ಶ್ರೀಗಳು, ಜಪಾನಂದ ಸ್ವಾಮೀಜಿಯವರನ್ನು ಕೆಲ ತಿಂಗಳ ಹಿಂದೆ ಒತ್ತಾಯಿಸಿದ್ದರಂತೆ. ಬೇಡ ಶ್ರೀಗಳೆ ನೀವು ಅಲ್ಲಿಗೆ ಬರುವುದು ಬೇಡ ಎಂದು ಎಷ್ಟು ಹೇಳಿದರೂ ಕೇಳದೆ ಕರೆದುಕೊಂಡು ಹೋಗಲೇ ಬೇಕು ಎಂದು ಹಠ ಹಿಡಿದು ಅವರೊಡನೆ ಹೋಗಿದ್ದಾರೆ. ಜಪಾನಂದ ಸ್ವಾಮೀಜಿ ಅವರೊಡನೆ ನೆರೆ ಪೀಡಿತರಿಗೆ ಅಗತ್ಯ ಸಾಮಗ್ರಿ ವಿತರಿಸಿ ತೃಪ್ತಿಪಟ್ಟುಕೊಂಡಿದ್ದಾರೆ.

ಇದು ಸಮಾಜದಲ್ಲಿ ಕಷ್ಟದಲ್ಲಿರುವವರ ಬಗ್ಗೆ ಶ್ರೀಗಳಿಗಿದ್ದ ಕಳಕಳಿ, ಕಷ್ಟಕ್ಕೆ ಸ್ಪಂದಿಸುವ ಕಾತುರತೆಗೆ ಒಂದು ನಿದರ್ಶನ.

ಬೆಂಗಳೂರು ಸೇರಿದಂತೆ ಎಲ್ಲಿ ಕಾರ್ಯಕ್ರಮ ನಡೆದರೂ ಪೇಜಾವರಶ್ರೀಗಳಿದ್ದಲ್ಲಿ ಜಪಾನಂದ ಸ್ವಾಮಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಬಡವರು, ದೀನ ದಲಿತರ ಬಗ್ಗೆ ಏಕ ಬಗೆಯ ಕಳಕಳಿ, ಈರ್ವರು ಸ್ವಾಮೀಜಿಗಳಲ್ಲಿದ್ದ ಮಾನವೀಯತೆ, ಸಮಾಜಮುಖಿ ಕಾರ್ಯಗಳ ಬಗೆಗಿನ ಸೆಳೆತ ಹಾಗೂ ತುಡಿತ, ಸಮಾನ ಮನಸ್ಥಿತಿ ಸ್ವಾಮೀಜಿಗಳೀರ್ವರನ್ನು ಒಂದೆಡೆ ಸೇರಿಸುತ್ತಿತ್ತು ಎಂದರೆ ಅತಿಶಯೋಕ್ತಿ ಎನಿಸದು.


ಭಗವಂತನ ಕೃಪೆಯೇನೆಂಬುದು ಯಾರೂ ಅರಿಯಲಾಗುವುದಿಲ್ಲ. ನನ್ನ ಜೀವನದಲ್ಲಿ ಪರಮಾತ್ಮನೇ ಕೈಹಿಡಿದು ಮುನ್ನಡೆಸಲು ವಿಶ್ವೇಶತೀರ್ಥರನ್ನೇ ಈ ಧರೆಗೆ ಕಳುಹಿದ ಎನ್ನಬಹುದು . ನಮ್ಮಂತಹ ಲಕ್ಷಾಂತರ ಜೀವಿಗಳನ್ನು ಮುನ್ನಡೆಸುತ್ತಾ ಸಮಯ ಬಂದಾಗಲೆಲ್ಲ ಧೈರ್ಯನೀಡಿ, ಅಭಯ ನೀಡುತ್ತಾ ಸಾಕ್ಷಾತ್ ಶ್ರೀ ಕೃಷ್ಣನೇ ನಮ್ಮನ್ನು ಸಲಹುವಂತೆ ಸಲುಹುತ್ತಿದ್ದರು ಪೂಜ್ಯ ಶ್ರೀ ಶ್ರೀ ಗಳವರು.! ನಮ್ಮ ಹಾಗು ಶ್ರೀ ಶ್ರೀ ಗಳವರ ಒಡನಾಟ ಸರಿ ಸುಮಾರು ಮೂರೂವರೆ ದಶಕಗಳಿಂದಲೂ ಇದ್ದದ್ದು ನಮ್ಮ ಪೂರ್ವಜನ್ಮದ ಪುಣ್ಯದ ಫಲವೋ ಎಂಬಂತಿತ್ತು.
ಸ್ವಾಮಿ ಜಪಾನಂದ ಜಿ

ರಾಮಕೃಷ್ಣ ಸೇವಾಶ್ರಮ, ಪಾವಗಡ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?