Saturday, July 27, 2024
Google search engine
Homeಜಸ್ಟ್ ನ್ಯೂಸ್ಚಿಕ್ಕನಾಯಕನಹಳ್ಳಿಯಲ್ಲಿ ಪತ್ರಕರ್ತರ, ವಿತರಕರ ಕಲರವ, ಮಕ್ಕಳಿಗೆ ಸನ್ಮಾನ

ಚಿಕ್ಕನಾಯಕನಹಳ್ಳಿಯಲ್ಲಿ ಪತ್ರಕರ್ತರ, ವಿತರಕರ ಕಲರವ, ಮಕ್ಕಳಿಗೆ ಸನ್ಮಾನ

ಚಿಕ್ಕನಾಯಕನಹಳ್ಳಿ : ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 19-92020ರಂದು ಚಿಕ್ಕನಾಯಕನಹಳ್ಳಿ ರೋಟರಿ ಕನ್ವರ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ನೆರವೇರಿತು .

ಈ ಸಮಾರಂಭದ ಉದ್ಘಾಟನೆಯನ್ನು
ಜೆ. ಸಿ. ಮಾಧುಸ್ವಾಮಿ ಶಾಸಕರು ಚಿಕ್ಕನಾಯಕನಹಳ್ಳಿ ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡುತ್ತಾ ಪತ್ರಿಕೆಗಳು ಸಮಾಜದ ಸುಧಾರಣೆಯನ್ನು ಮಾಡುವುದರಲ್ಲಿ ಪ್ರಥಮ ಪಾತ್ರವನ್ನು ವಹಿಸುತ್ತದೆ ಹಾಗೂ ಪತ್ರಿಕೆಗಳ ಸುದ್ದಿಯ ಸಮಾಜದ ಸುಧಾರಣೆಯ ಮಾರ್ಗದರ್ಶನ ವಾಗಿದೆ ಸುದ್ದಿಗಳು ಸ್ಪಷ್ಟವಾಗಿ ಸತ್ಯ ನಿಷ್ಠುರವಾಗಿ ಕಾರ್ಯನಿರ್ವಹಿಸುವುದು ಪತ್ರಿಕಾ ಧರ್ಮದ ಕ್ಷೇತ್ರದಲ್ಲಿ ಯಶಸ್ಸಾಗಿದೆ ತಾಲೂಕು ಸಂಘವು ನೀಡಿರುವ ಮನವಿಯನ್ನು ಪರಿಗಣಿಸಿ ರಾಜ್ಯದಲ್ಲಿರುವ ಎಲ್ಲ ಪತ್ರಕರ್ತರ ಭವನಗಳಿಗೆ ನಿವೇಶನ ಹಾಗೂ ಕಟ್ಟಡಗಳ ಅನುಕೂಲವನ್ನು ವೀಕ್ಷಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇದರ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ರಂಗನಕೆರೆ ಮಹೇಶ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿಕ್ಕನಾಯಕನಹಳ್ಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷರಾದ
ಶಿವಾನಂದ ತಗಡೂರು ರವರು ಭಾಗವಹಿಸಿ ರಾಜ್ಯದಲ್ಲಿರುವ ಎಲ್ಲ ಪತ್ರಕರ್ತರಿಗೆ ಸಿಗುವಂತಹ ಸವಲತ್ತಿನ ಬಗ್ಗೆ ವಿವರಗಳನ್ನು ವಿವರಿಸಿದರು ಕೋವಿಂಡ 19 ಕರೋನಾ ದಿಂದ ಆರು ಜನ ಪತ್ರಕರ್ತರು ಸಾವನ್ನಪ್ಪಿದ್ದರು ಯಅವರಿಗೆ ತಲಾ ಐದು ಲಕ್ಷ ರೂಪಾಯಿಗಳಂತೆ ಒಟ್ಟು ರಾಜ್ಯ ಸರ್ಕಾರವು ಮೂವತ್ತು ಲಕ್ಷ ರೂಪಾಯಿಗಳನ್ನು ಮಂಜೂರಾತಿ ನೀಡಿರುವುದನ್ನು ಸ್ಮರಿಸಿದರು.
ರಾಜ್ಯ ಸಂಘದಿಂದ ಹಾಗೂ ರಾಜ್ಯ ಸರ್ಕಾರದಿಂದ ಗ್ರಾಮೀಣ ಪತ್ರಕರ್ತರಿಗೆ ಹಾಗೂ ಎಲ್ಲ ಪತ್ರಕರ್ತರು ಸಮಸ್ಯೆಗಳನ್ನು ಸ್ಪಂದಿಸುವಂತಹ ಸರ್ಕಾರ ಎಂದು ತಿಳಿಸಿದರು ಸುದ್ದಿಗಳು ಸಮಾಜದ ಸುಧಾರಣೆಯನ್ನು ಪ್ರತಿಬಿಂಬಿಸುವಂತೆ ಮೂಡಬೇಕು ಎಂದು ತಿಳಿಸಿದರು .

ಚಿ.ನಿ. ಪುರುಷೋತ್ತಮ್ ಜಿಲ್ಲಾಧ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತುಮಕೂರು ಜಿಲ್ಲಾ ಘಟಕ ರವರು ಮಾತನಾಡುತ್ತಾ ಜಿಲ್ಲೆಯಲ್ಲಿರುವ ಎಲ್ಲ ಪತ್ರಕರ್ತರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸಂಘವು ಸಮಂಜಸವಾಗಿ ನೀಡುತ್ತಿದ್ದು ಹಾಗೂ ಇತ್ತೀಚೆಗೆ ನಿಧನರಾದ ಮಧುಗಿರಿಯ ಮಹಾಲಿಂಗಪ್ಪ ಹಾಗೂ ಕುಣಿಗಲ್ ಫಯಾಜುಲ್ಲಾ ರವರು ಜಿಲ್ಲಾ ಸಂಘದಿಂದ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಗಿದೆ.ಹಾಗೂ
ರಾಜ್ಯ ಸಂಘದಿಂದ
ಗುಬ್ಬಿ ತಾಲ್ಲೂಕಿನ ವರದಿಗಾರರಾದ ಜಯಣ್ಣ ಅವರು ಕೊರೋನದಿಂದ ಸಾವನ್ನಪ್ಪಿದ್ದು ಅವರಿಗೆ ರಾಜ್ಯ ಸರ್ಕಾರದಿಂದ ಐದುಲಕ್ಷರೂಪಾಯಿಗಳನ್ನು ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿದರು ಮತ್ತು ಪತ್ರಕರ್ತರಿಗೆ ಹೆಲ್ತ್ ಕಾರ್ಡಗಳನ್ನು ವಿತರಣೆ ಮಾಡಿರುತ್ತೆವೆ ಹಾಗೂ ಸಂಘದ ಉತ್ತಮವದಕಾರ್ಯಗಳಿಗೆ ಜಿಲ್ಲೆಯ ಎಲ್ಲ ಪತ್ರಕರ್ತರ ಸಹಕಾರ ಅತ್ಯವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಂಗನಕೆರೆ ಮಹೇಶ್ ಅವರು ಮಾತನಾಡುತ್ತಾ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ
ಶ್ರೀ ಮಾಧುಸ್ವಾಮಿ ರವರಿಗೆ ನಮ್ಮ ಪತ್ರಕರ್ತರ ಸಂಘಕ್ಕೆ ನಿವೇಶನವನ್ನು ಮಂಜೂರು ಮಾಡಿಸಿ ಪತ್ರಿಕಾ ಭವನವನ್ನು ಕಟ್ಟಲು ಸಹಕರಿಸಬೇಕು ಎಂದು ಮನವಿಅಭಿನಂದನೆ್ಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಆರ್ ನಾಗರಾಜು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ತಾಲ್ಲೂಕು ವರದಿಗಾರರು,
ಪತ್ರಿಕಾ ವಿತರಕರ ಮಕ್ಕಳ ಹಾಗೂ ಪತ್ರಿಕೆ ಹಂಚುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಅರ್ಪಿಸಲಾಯಿತು .ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?