Saturday, July 27, 2024
Google search engine
Homeತುಮಕೂರು ಲೈವ್ಅಂತರರಾಷ್ಟ್ರೀಯ ಗಮನ ಸೆಳೆದ ಲಕ್ಷ್ಮೀರಂಗಯ್ಯ

ಅಂತರರಾಷ್ಟ್ರೀಯ ಗಮನ ಸೆಳೆದ ಲಕ್ಷ್ಮೀರಂಗಯ್ಯ

ತುಮಕೂರು : ಬುದ್ಧನ ಕುರಿತಾದ ಸಂಶೋಧನಾ ಕ್ಷೇತ್ರದಲ್ಲಿ ಡಾ. ಲಕ್ಷ್ಮೀರಂಗಯ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ‌ ಗಮನ ಸೆಳೆದಿದ್ದಾರೆ ಎಂದು ಚಿಂತಕ ಡಾ.ಸಿ.ಚಂದ್ರಶೇಖರ್ ಗಮನ ಸೆಳೆದರು

ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದ್ದು ಈ ಸಂಶೋಧನೆಗಳ ಪಲಿತಾಂಶಗಳು ಸಮಾಜಕ್ಕೆ ಉಪಯೋಗವಾಗುತ್ತಿರುವುದು ವಿಜ್ಞಾನ ಕ್ಷೇತ್ರಕ್ಕೂ ಮತ್ತು ಸಮಾಜ ವಿಜ್ಞಾನಗಳ ಕ್ಷೇತ್ರಕ್ಕೂ ಅಂತರವಿರುವುದನ್ನು ಕಾಣಬಹುದು ಎಂದು ಅವರು ಹೇಳಿದರು.

ನಾಟಕ ಮನೆ ತುಮಕೂರು ಹಾಗೂ ಕರ್ನಾಟಕ ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಈಚೆಗೆ ನಗರದಲ್ಲಿ ಆಯೋಜಿಸಿದ್ದಜನಪದ ಗೀತ ಗಾಯನ, ರಂಗ ಪ್ರಯೋಗ, ಹಾಗೂ ಡಾ.ಲಕ್ಲ್ಮೀ ರಂಗಯ್ಯ ನವರಿಗೆ ಅಭಿನಂದನ ಸಮಾರಂಭ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾದ ಪ್ರೊ.ಬಿ.ರಮೇಶ್ ರವರು ಅಭಿನಂದನಾ ನುಡಿಗಳನ್ನಾಡುತ್ತಾ ತುಮಕೂರಿನ ನೆಲದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕøತಿ.ಕ್ರೀಡೆ, ರಂಗಭೂಮಿ, ಜನಪದ, ಮುಂತಾದ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುವಂತೆ ಚಳುವಳಿಗಳನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವುದು ಮೊದಲುನಿಂದಲೂ ರೂಡಿಯಾಗಿ ಬಂದಿದೆ, ನಾಟಕಮನೆ ರಂಗಭೂಮಿಯ ಜೊತೆಯಲ್ಲಿ ಈ ನಾಡಿನ ಯುವ ಸಾಧಕರನ್ನು ಗುರುತಿಸಿ ಅಭಿನಂದಿಸುವುದರ ಮೂಲಕ ಮತಷ್ಟು ತನ್ನ ಘನತೆಯ ಮೆರಗನ್ನು ಹೆಚ್ಚಿಸಿಕೊಂಡಿದೆ ಎಂದರು.

ಚಿಂತಕ ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದರಾದ ಡಾ. ಲಕ್ಷ್ಮಣದಾಸ್ ವಹಿಸಿದ್ದರು ಕವಿಗಳಾದ ಡಾ.ಓ ನಾಗರಾಜು ಪ್ರಾಸ್ತವಿಕ ಮಾತುಗಳನ್ನಾಡಿದರು.ಹಿರಿಯ ರಂಗಕರ್ಮಿ ಹೆಚ್ ಎಂ ರಂಗಯ್ಯ, ಮಲ್ಲಿಕಾಬಸವರಾಜು, ನಾಟಕ ಮನೆ ಮಹಾಲಿಂಗು, ಡಾ. ಮಣಿಗಯ್ಯ ಎಲ್ ,ಡಾ.ಬಾಲಕೃಷ್ಣಪ್ಪ ವೈ.ಕೆ.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್ ಡಿ ಎಂ,ಡಿ ವಿ. ಸುರೇಶ್ ಕುಮಾರ್ ,ವಿರೂಪಾಕ್ಷ ಡ್ಯಾಗೇರಹಳ್ಳಿ ಮಂಟೇಸ್ವಾಮಿ, ಮಲ್ಲಿಕಾರ್ಜುನ ಕೆಂಕೆರೆ ಉಪಸ್ಥಿತರಿದ್ದರು ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರು ಜನಪದ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು ನವೀನ್ ತಿಪಟೂರು ರವರ ನಿರ್ದೇಶನದಲ್ಲಿ ಸರಸತಿಯಾಗಲೊಲ್ಲೆ ಎಂಬ ನಾಟಕವನ್ನು ಸಾವಿತ್ರಿ ಬಾಫುಲೆರವರ ಜನ್ಮದಿನಾಚಾರಣೆಯ ಅಂಗವಾಗಿ ರಂಗ ಪ್ರಯೋಗನ್ನು ಪ್ರದರ್ಶಿಸಲಾಯಿತು. ದೇವರಾಜು ಮೆಳೆಹಳ್ಳಿ ಕಾರ್ಯಕ್ರಮ ನಿರೂಪಿಸಿದರು, ಸೋರೆಕುಂಟೆ ಸಿದ್ದೇಶ್ ಸ್ವಾಗತಿಸಿ, ಪ್ರಕಾಶ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?