Friday, March 29, 2024
Google search engine
Homeಜಸ್ಟ್ ನ್ಯೂಸ್ಪಾವಗಡ; ಕಂದಾಯ ಸಚಿವರ ಆರ್ಭಟ

ಪಾವಗಡ; ಕಂದಾಯ ಸಚಿವರ ಆರ್ಭಟ

ಪಾವಗಡ : ನಿಮ್ಮದೇ ಆದಂತಹ 14 ತಿಂಗಳು ಸಮ್ಮಿಶ್ರ ಸರ್ಕಾರ ಹಾಗೂ ಅದರ ಹಿಂದೆ ಪೂರ್ಣಾವಧಿ ಕಾಂಗ್ರೆಸ್ ಸರ್ಕಾರ ವಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಕಾಲದಲ್ಲಿ ಕೊಡದಂತಹ ಗೃಹಿಣೀಯರಿಗೆ ಎರಡು ಸಾವಿರ ರೂ ಅಧಿಕಾರಕ್ಕೆ ಬಂದರೆ ಕೊಡುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನಿಗೆ ಕೊರಳು ಪಟ್ಟಿ ಹಿಡಿದು ಕೇಳಿ ಎಂದು ಜನತೆಗೆ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಶುಕ್ರವಾರ ಪಾವಗಡ ಪಟ್ಟಣದ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ ವಿಜಯ ಸಂಕಲ್ಪ ರಥಯಾತ್ರೆ ಗೆ ಚಾಲನೆ ನೀಡಿ ಶನಿಮಹಾತ್ಮ ಸರ್ಕಲ್ ವೃತ್ತದಿಂದ ಹಿಡಿದು ಟೋಲ್ ಗೇಟ್ ಬಳಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು

ಹಿಂದೆ ಸಿದ್ದರಾಮಯ್ಯ ಕಾಲದಲ್ಲಿ ಪವರ್ ಫುಲ್ ಮಿನಿಸ್ಟರ್ ಪವರ್ ಮಿನಿಸ್ಟರ್ ಆಗಿರುವ ಡಿಕೆ ಶಿವಕುಮಾರ್ ಆದಂತ ಕಾಲದಲ್ಲಿ 200 ಯೂನಿಟ್ ಅಲ್ಲ 500 ಯೂನಿಟ್ ವಿದ್ಯುತ್ ಕೊಟ್ಟಿದ್ದರು ಯಾರು ಕೇಳುತ್ತಿರಲಿಲ್ಲ ಯಾಕೆ ಇವರು ಕೊಟ್ಟಿಲ್ಲ ಎಂದು ನೀವು ಕೊರಳು ಪಟ್ಟಿ ಇಟ್ಟುಕೊಂಡು ಡಿಕೆ ಶಿವಕುಮಾರ್ ಅವರನ್ನು ಕೇಳಿ ಎಂದರು.

ದಾವಣಗೆರೆ ಚಿತ್ರದುರ್ಗ ತುಮಕೂರು ಸೇರಿದಂತೆ ಈ ಭಾಗಗಳಲ್ಲಿ ಸುಮಾರು ಒಂದು ಲಕ್ಷ ಬಡ ಜನರಿಗೆ ನಿವೇಶನಗಳನ್ನು ನೀಡಲಾಗುತ್ತಿದೆ. ಹಾಗೆ ಕಂದಾಯ ಗ್ರಾಮಗಳೆಂದು ಮಾಡಿದ್ದು ನಾವೇ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವ ಭಾರತೀಯ ಜನತಾ ಪಾರ್ಟಿ ಪಕ್ಷದ ಸರ್ಕಾರ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರತ್ನ ಹಾಗೂ ಅಪ್ಪು ಎಂದು ಬಿರುದು ಕೊಟ್ಟಿರುವ ಸರ್ಕಾರ ನಮ್ಮದು ಬಿಜೆಪಿ ಸರ್ಕಾರ ಹಾಗೆ 12 ಕಿ.ಮೀ.ಉದ್ದವಿರುವ ರಿಂಗ್ ರಸ್ತೆಗೆ ಪುನೀತ್ ರಾಜಕುಮಾರ್ ರವರ ಹೆಸರು ಇಡುವ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಿದ್ದೇವೆ ಎಂದು ಪುನೀತ್ ರಾಜಕುಮಾರ್ ಅವರನ್ನು ಆರ್ ಅಶೋಕ್ ರವರು ಸ್ಮರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಧುಗಿರಿ ಶಕ್ತಿ ಕೇಂದ್ರದ ಅಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕ ಅಧ್ಯಕ್ಷ ರವಿಶಂಕರ್ ನಾಯ್ಕ್, ತಾಲೂಕಿನ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಕೃಷ್ಣ ನಾಯಕ್ ಹಾಗೂ ಕೊತ್ತೂರು ಹನುಮಂತರಾಯಪ್ಪ, ಕಡಪಲಕೆರೆ ನವೀನ್, ದೊಡ್ಡಹಳ್ಳಿ ಅಶೋಕ್, ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?