ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರು ಕ್ಷೇತ್ರದೆಲ್ಲೆಡೆ ಮಿಂಚಿನ ಸಂಚಾರ ನಡೆಸುತ್ತಿದ್ದು, ಎಲ್ಲಾ ಕಡೆಯು ಜನಸಂದಣಿ ಕಂಡು ಬರುತ್ತಿದೆ.
ಈಚೆಗೆ ಸಮಾವೇಶಗಳ ಮೂಲಕ ಗಮನ ಸೆಳೆದಿರುವ ಮಾಜಿ ಶಾಸಕರು ಊರೂರು ಭೇಟಿ ಮೂಲಕವು ಜನಮನ ಗೆಲ್ಲತೊಡಗಿದ್ದಾರೆ.
![](https://publicstory.in/wp-content/uploads/2023/03/img-20230317-wa00256977144502771525946-460x1024.jpg)
ಕೆಲವು ಊರುಗಳಲ್ಲಿ ಜನರು ಕಷ್ಟಸುಖ ಹೇಳಿಕೊಳ್ಳುತ್ತಿದ್ದಾರೆ. ಗ್ರಾಮಕ್ಕೆ ಬೇಕಾದ ಕೆಲಸಗಳ ಅಭಿವೃದ್ಧಿ ಪಟ್ಟಿ ಮುಂದಿಡುತ್ತಿದ್ದಾರೆ. ಮಾಜಿ ಶಾಸಕರು ಸಹ ತಾಳ್ಮೆಯಿಂದ ಆಲಿಸಿ ಭರವಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರಾದ ಬಳ್ಳಗೆರೆ ವೆಂಕಟೇಶ್ ತಿಳಿಸಿದರು.
ಶುಕ್ರವಾರ ಕೆಸರಮಡು ಗ್ರಾಮದಲ್ಲಿ ಮುಳುಕಟ್ಟಮ್ಮ ನೂತನ ದೇವಾಲಯಕ್ಕೆ ವಾಸಕಲ್ಲು ಪೂಜೆಯಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
![](https://publicstory.in/wp-content/uploads/2023/03/img-20230317-wa00271544553560930373908-1024x461.jpg)
ಅಲ್ಲದೇ ಹುಳ್ಳೇನಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಅನೇಕ ಮುಖಂಡರು, ವಿಶೇಷವಾಗಿ ಯುವಕರು ಹಾಜರಿದ್ದರು.
ಮಾನ0ಗಿ ಮತ್ತು ವೀರನಾಯಕನಹಳ್ಳಿ ಗ್ರಾಮದ ಕಾರ್ಯಕರ್ತರ ಮದುವೆ ಮಹೂರ್ಥ ಸಮಾರಂಭದಲ್ಲಿ ಪಾಲ್ಗೊಂಡು ವಧು ವರರಿಗೆ ಶುಭ ಕೋರಿದರು.
![](https://publicstory.in/wp-content/uploads/2023/03/img-20230317-wa00201421878828667691612-1024x460.jpg)
ಕಸಬಾ ಹೋಬಳಿಯ ಕುಂದೂರಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ದಿವಂಗತ ಶ್ರೀ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬವನ್ನು ಆಚರಿಸಿದರು.